Monday 18 February 2013

ಪಂಪನ ಆದಿಪುರಾಣದಿಂದ ಭರತೇಶನ ಶಿಲಾಶಾಸನ ಪ್‌ರಕರಣ (v1)

ಹೊಸ ನೀರು ಬಂದು ಹಳೇ ನೀರನ್‌ನು ಕೊಚ್‌ಚಿಕೊಂಡು ಹೋಯಿತು

    ಯಾವುದೇ ಒಂದು ಕಚೇರಿಯಲ್‌ಲಿ ಒಬ್‌ಬ ಅಧಿಕಾರಿ ವರ್‌ಗವಾಗಿ ಬೇರೊಬ್‌ಬರು ಬಂದಾಗ ಅಥವಾ ಚುನಾವಣೆಯ ನಂತರ ಮಂತ್‌ರಿಮಂಡಲ ಬದಲಾದಾಗ, ನಿರ್‌ಗಮಿಸಿದ ಅಧಿಕಾರಿಯ ಅಥವಾ ಮಂತ್‌ರಿಯ ನಾಮಫಲಕ ತೆಗೆದುಹಾಕಿ ಆ ಜಾಗದಲ್‌ಲಿ ಆಗಮಿಸಿದ ಅಧಿಕಾರಿಯ ಅಥವಾ ಮಂತ್‌ರಿಯ ನಾಮಫಲಕ ಹಾಕುವುದನ್‌ನು ತೋರಿಸುವುದನ್‌ನು ಟೀವಿಗಳಲ್‌ಲಿ ನಾವು ನೋಡುತ್‌ತೇವೆ. ಈ ವಿಷಯ ಕುರಿತಂತೆ ನನಗೆ ನೆನಪಿಗೆ ಬರುವುದು ಮಹಾಕವಿ ಪಂಪನ ಆದಿಪುರಾಣದಲ್‌ಲಿನ ಈ ಪ್‌ರಕರಣ.

    ಭರತೇಶನು ಷಟ್‌ಖಂಡ ಭೂಮಂಡಲವನ್‌ನು ಗೆದ್‌ದು ದಿಗ್‌ವಿಜಯವನ್‌ನು ಮುಗಿಸಿಕೊಂಡು ತನ್‌ನ ಪರಾಕ್‌ರಮ, ಗೆಲುವಿನ ಗರ್‌ವದಿಂದ ಬೀಗುತ್‌ತಾ ವೃಷಭಾಚಲದತ್‌ತ ಬಂದ. ಅಲ್‌ಲಿನ ಶಿಲೆಗಳ ಮೇಲೆ ತನ್‌ನ ದಿಗ್‌ವಿಜಯದ ಗಾಥೆಗಳನ್‌ನು ಕೆತ್‌ತಿಸಿ ಶಾಸನ ಬರೆಸಲು ಉತ್‌ಸುಕನಾಗಿದ್‌ದ. ಅಲ್‌ಲಿಗೆ ಹೋಗಿ ನೋಡಿದಾಗ ಅಲ್‌ಲಿನ ಕಲ್‌ಲುಗಳ ಮೇಲೆಲ್‌ಲಾ ಯುಗಯುಗಗಳಿಂದ ವಿಖ್‌ಯಾತರಾದ  ಚಕ್‌ರಿಸಮೂಹದವರ  ಶೌರ್‌ಯ, ಪ್‌ರತಾಪ, ತ್‌ಯಾಗ, ವಿಜಯಗಳನ್‌ನು ಕುರಿತ ಕಲ್‌ಬರಹಗಳೇ ತುಂಬಿ ಹೋಗಿದ್‌ದವು. ಅವುಗಳನ್‌ನು ನೋಡುತ್‌ತಾ ನೋಡುತ್‌ತಾ ಅವನ ಗರ್‌ವವು ಇಳಿಯಿತು. ನಾಚಿಕೆ ಉಂಟಾಯಿತು.

    ಆದರೂ ಅವನಿಗೆ ತನ್‌ನ ದಿಗ್‌ವಿಜಯವನ್‌ನು ಕುರಿತು ಶಾಸನಗಳನ್‌ನು ಬರೆಸುವ ಇಚ್‌ಚೆ ಉಡುಗಲಿಲ್‌ಲ! ಹಳೆಯ ಶಾಸನಗಳನ್‌ನು ಒಂದೊಂದಾಗಿ ಅಳಿಸಿ ಹಾಕಿ ಬರೆಯಲು ಅನುವು ಮಾಡಿಕೊಟ್‌ಟು ತನ್‌ನ ದಿಗ್‌ವಿಜಯವನ್‌ನು ಕುರಿತ ಪ್‌ರಶಸ್‌ತಿಗಳನ್‌ನು ಕೆತ್‌ತಿಸಿದ.

    ಭರತೇಶನಿಗೆ ನಾಚಿಗೆಯಾದರೂ, ಗರ್‌ವಭಂಗವಾದರೂ ಸಹ ಕೀರ್‌ತಿ, ಯಶಸ್‌ಸು, ಅಧಿಕಾರ ಇವುಗಳ ಮತ್‌ತಿನಿಂದಾಗಿ ಪ್‌ರಶಸ್‌ತಿಗಳನ್‌ನು (ಹೊಗಳಿಕೆಯನೊ·ಳಗೊಂಡ ಶಾಸನಗಳನ್‌ನು) ಕಲ್‌ಲಿನ ಮೇಲೆ ಬರೆಸುವ ಬಯಕೆ ಮಾತ್‌ರ ಉಡುಗಲಿಲ್‌ಲ.

ಮಹಾಕವಿ ಪಂಪನ ಆದಿಪುರಾಣದ ೧೩ನೇ ಆಶ್‌ವಾಸದಲ್‌ಲಿನ ಈ ತುಣುಕನ್‌ನು ನೋಡೋಣ:
   
    ವ|| ಆ ವೃಷಭಾದ್‌ರಿಯ ಮೇಖಳಾಭಿತ್‌ತಿಯೊಳ್‌ ಆತ್‌ಮೀಯವಿಶ್‌ವವಿಶ್‌ವಂಭರಾವಿಜಯಪ್‌ರಶಸ್‌ತಿಯನೞ್‌ತಿಯೊಳ್‌ ಬರೆಯಿಸುವನೆಂದು ಪೋಗಿ ನೋಡಿವನ್‌ನೆಗ್‌ಗಂ.

ಆ ವೃಷಭಾದ್‌ರಿಯ ಮೇಖಳಾಭಿತ್‌ತಿಯೊಳ್‌ =  ಆ ವೃಷಭಾದ್‌ರಿ ಬೆಟ್‌ಟದ ಕಲ್‌ಲಿನ ಮೇಲೆ, ಆತ್‌ಮೀಯ = ತನ್‌ನ, ವಿಶ್‌ವವಿಶ್‌ವಂಭರಾವಿಜಯಪ್‌ರಶಸ್‌ತಿಯಂ = ವಿಶವನ್‌ನೆಲ್‌ಲಾ ಗೆದ್‌ದ ದಿಗ್‌ವಿಜಯದ ಹೊಗಳಿಕೆಯನ್‌ನೊಳಗೊಂಡ ಶಾಸನವನ್‌ನು, ಬರೆಯಿಸುವನೆಂದು = ಬರೆಯಿಸುವೆ ಎಂದು,  ಅೞ್‌ತಿಯೊಳ್‌ = ಸಂತೋಷದಿಂದ, ಪೋಗಿ ನೋಡಿವನ್‌ನೆಗಂ = ಹೋಗಿ ನೋಡಿದಾಗ

ಅದಱೊಳನೇಕಕಲ್‌ಪಶತಕೋಟಿಗಳೊಳ್‌ ಸಲೆ ಸಂದ ಚಕ್‌ರಿವೃಂ
ದದ ಚಲದಾಯದಾಯತಿಯ   ಬೀರದ ಚಾಗದ ಮಾತುಗಳ್‌ ಪೊದ
ೞ್‌ಪೊದವಿರೆ ತತ್‌ಪ್‌ರಶಸ್‌ತಿಗಳೊಳಂತವನೊಯ್‌ಯನೆ ನೋಡಿ ನೋಡಿ ಸೋ
ರ್‌ದುದು ಕೊಳಗೊಂಡ ಗರ್‌ವರಸಮಾ ಭರತೇಶಚಕ್‌ರವರ್‌ತಿಯಾ                      (೧೩.೭೧)                                      

ಅದಱೊಳ್‌ = ಆ ಕಲ್‌ಲುಗಳ ಮೇಲೆಲ್‌ಲಾ,  ಅನೇಕಕಲ್‌ಪಶತಕೋಟಿಗಳೊಳ್‌ = ಯುಗಯುಗಗಳಿಂದ,  (ಸಲೆ) ಸಂದ ಚಕ್‌ರಿವೃಂದದ = ಚಕ್‌ರಿ ಸಮುದಾಯದಲ್‌ಲಿದ್‌ದವರ, ಚಲದ ಆಯದ ಆಯತಿಯ   ಬೀರದ ಚಾಗದ ಮಾತುಗಳ್‌  = ಛಲ, ಯುಧ·ಕೌಶಲ್‌ಯ , ಶೌರ್‌ಯ, ತ್‌ಯಾಗ ಇವುಗಳನ್‌ನು ಕುರಿತ ಮಾತುಗಳೇ, ಪೊದೞ್‌ಪೊದವಿರೆ = ತುಂಬಿ ಹೋಗಿದ್‌ದವು. ತತ್‌ಪ್‌ರಶಸ್‌ತಿಗಳೊಳಂತವನೊಯ್‌ಯನೆ  = ಅಂತಹ ಹೊಗಳಿಕೆಗಳನ್‌ನೊಳಗೊಂಡ ಶಾಸನಗಳನ್‌ನು,  ನೋಡಿ ನೋಡಿ = ನೋಡುತ್‌ತಾ ನೋಡುತ್‌ತಾ, ಆ ಭರತೇಶಚಕ್‌ರವರ್‌ತಿಯಾ ಕೊಳಗೊಂಡ ಗರ್‌ವರಸಂ = ಭರತೇಶ ಚಕ್‌ರವರ್‌ತಿಯಲ್‌ಲಿದ್‌ದ ಗರ್‌ವವು,  ಸೋರ್‌ದುದು = ಇಳಿದುಹೋಯಿತು.

    ವ|| ಅಂತು ಗಳಿತ ಗರ್‌ವನಾಗಿ ಸಿಗ್‌ಗಾಗಿ ಪೂರ್‌ವಾವನಿಪಾಳಪ್‌ರಶಸ್‌ತಿಯೊಳೊಂದಂದಂ ದಂಡರತ್‌ನದಿಂ ಸೀಟಿ ಕಳೆದು ನಿಜಪ್‌ರಶಸ್‌ತಿಗೆಡೆಮಾಡಿ.

ಅಂತು = ಹೀಗೆ, ಗಳಿತ ಗರ್‌ವನಾಗಿ = ಗರ್‌ವವು ಅಳಿದವನಾಗಿ,  ಸಿಗ್‌ಗಾಗಿ = ನಾಚಿದವನಾಗಿ, ಪೂರ್‌ವಾವನಿಪಾಳ = ಹಿಂದಿನ ಆಳರಸರ, ಪ್‌ರಶಸ್‌ತಿಯೊಳ್‌ = ಹೊಗಳಿಕೆಯ ಶಿಲಾಶಾಸನಗಳನ್‌ನು,  ಒಂದಂದಂ = ಒಂದೊಂದಾಗಿ, ದಂಡರತ್‌ನದಿಂ = ದಂಡರತ್‌ನದಿಂದ, ಸೀಟಿ ಕಳೆದು = ಅಳಿಸಿಹಾಕಿ,  (ನಿಜ) ಪ್‌ರಶಸ್‌ತಿಗೆ = ತನ್‌ನ ಹೊಗಳಿಕೆಗಳನ್‌ನೊಳಗೊಂಡ ಶಾಸನಗಳಿಗೆ, ಎಡೆಮಾಡಿ = ಜಾಗ ಮಾಡಿಕೊಟ್‌ಟನು.

ಸ್‌ಥಿತಪ್‌ರಜ್‌ಞನ ಲಕ್‌ಷಣಗಳು (v1)

ನಾನು ತಿಳಿದಂತೆ, ನನಗೆ ತಿಳಿದಷ್‌ಟು :
ಭಗವದ್‌ಗೀತೆಯ ೨ನೇ ಅಧ್‌ಯಾಯ ’ಸಾಂಖ್‌‍ಯಾ ಯೋಗ’ದಲ್‌ಲಿ ಬರುವ ಸ್‌ಥಿತಪ್‌‍ರಜ್‌ಞನ ಲಕ್‌ಷಣಗಳು
--------------------------------------------------------------------------------------
ಸ್‌ಥಿತಪ್‌ರಜ್‌ಞನ ಲಕ್‌ಷಣಗಳು :

ಅರ್‌ಜುನ ಉವಾಚ -

ಅರ್‌ಜುನ ಕೇಳಿದನು -

ಸ್‌ಥಿತಪ್‌ರಜ್‌ಞಸ್‌ಯ ಕಾ ಭಾಷಾ ಸಮಾಧಿಸ್‌ಥಸ್‌ಯ ಕೇಶವಾ|
ಸ್‌ಥಿತಧೀಃ ಕಿಂ ಪ್‌ರಭಾಷೇತ ಕಿಮಾಸೀತ ವ್‌ರಜೇತ ಕಿಮ್‌ ||೨-೫೪||

ಕೇಶವಾ = ಎಲೈ ಕೇಶವನೇ, ಸಮಾಧಿಸ್‌ಥಸ್‌ಯ = ಸಮಾಧಿ ಸ್‌ಥಿತಿಯಲ್‌ಲಿರುವ (ಯೋಗದ ಎಂಟನೆಯ ಹಾಗೂ ಕಡೆಯ ಅವಸ್‌ಥೆ; ಮನಸ್‌ಸನ್‌‍ನು ಪರಬ್‌ರಹ್‌ಮನಲ್‌ಲಿ ಐಕ್‌ಯಗೊಳಿಸುವುದು), ಸ್‌ಥಿತಪ್‌ರಜ್‌ಞಸ್‌ಯ = ಸ್‌ಥಿತಪ್‌ರಜ್‌ಞನ, ಕಾ ಭಾಷಾ = ಲಕ್‌ಷಣಗಳೇನು? ಸ್‌ಥಿತಧೀಃ = ಸ್‌ಥಿತಪ್‌ರಜ್‌ಞನು, ಕಿಂ ಪ್‌ರಭಾಷೇತ = ಏನು ಮಾತನಾಡುತ್‌ತಾನೆ? ಕಿಮ್‌ ಆಸೀತ = ಹೇಗೆ ಕುಳಿತುಕೊಳ್‌ಳುತ್‌ತಾನೆ? ಕಿಮ್‌ ವ್‌ರಜೇತ = ಹೇಗೆ ನಡೆಯುತ್‌ತಾನೆ?

ಕೇಶವ, ಸಮಾಧಿ ಸ್‌ಥಿತಿಯಲ್‌ಲಿರುವ ಸ್‌ಥಿತಪ್‌ರಜ್‌ಞನ ಲಕ್‌ಷಣಗಳೇನು?ಸ್‌ಥಿತಪ್‌ರಜ್‌ಞನು ಏನು ಮಾತನಾಡುತ್‌ತಾನೆ? ಹೇಗೆ ಕುಳಿತುಕೊಳ್‌ಳುತ್‌ತಾನೆ? ಹೇಗೆ ನಡೆಯುತ್‌ತಾನೆ?

ಶ್‌ರೀ ಭಗವಾನುವಾಚ -

ಶ್‌ರೀ ಕೃಷ್‌ಣನು ಹೇಳಿದನು -

ಪ್‌ರಜಹಾತಿ ಯದಾ ಕಾಮಾನ್‌ ಸರ್‌ವಾನ್‌ ಪಾರ್‌ಥ ಮನೋಗತಾನ್‌|
ಆತ್‌ಮನ್‌ಯೇವಾಽತ್‌ಮನಾ ತುಷ್‌ಟಃ ಸ್‌ಥಿತಪ್‌ರಜ್‌ಞಸ್‌ತದೋಚ್‌ಯತೆ ||೨-೫೫||

ಪಾರ್‌ಥ = ಪಾರ್‌ಥ, ಯದಾ = ಯಾವಾಗ,  ಮನೋಗತಾನ್‌ = ಮನಸ್‌ಸಿನಲ್‌ಲಿರುವ, ಸರ್‌ವಾನ್‌ = ಎಲ್‌ಲ, ಕಾಮಾನ್‌ = ಆಸೆ ಆಕಾಂಕ್‌ಷೆಗಳನ್‌ನು, ಪ್‌ರಜಹಾತಿ = ತೊರೆಯುತ್‌ತಾನೋ, ತದಾ = ಆಗ, ಆತ್‌ಮನಿ ಏವ = ಆತ್‌ಮನಲ್‌ಲಿ, ಅತ್‌ಮನಾ =  ಅತ್‌ಮನಿಂದ,  ತುಷ್‌ಟಃ = ತೃಪ್‌ತನಾಗಿ, ಸ್‌ಥಿತಪ್‌ರಜ್‌ಞಃ = ಸ್‌ಥಿತಪ್‌ರಜ್‌ಞನೆಂದು, ಉಚ್‌ಯತೇ = ಕರೆಯಲ್‌ಪಡುತ್‌ತಾನೆ.

ಪಾರ್‌ಥ, ಯಾವಾಗ ಮನಸ್‌ಸಿನಲ್‌ಲಿರುವ ಎಲ್‌ಲ ಆಸೆ ಆಕಾಂಕ್‌ಷೆಗಳನ್‌ನು ತೊರೆಯುತ್‌ತಾನೋ ಆಗ ಅವನ ಮನಸ್‌ಸು ಪರಿಶುದ್‌ಧವಾಗಿ ಆತ್‌ಮದಲ್‌ಲೇ ಸಂತೃಪ್‌‍ತನಾಗುತ್‌ತಾನೆ; ಸ್‌ಥಿತಪ್‌ರಜ್‌ಞನೆಂದು ಕರೆಯಲ್‌ಪಡುತ್‌ತಾನೆ.

ದುಃಖೇಷ್‌ವನುದ್‌ವಿಗ್‌ನಮನಾಃ ಸುಖೇಷು ವಿಗತಸ್‌ಪೃಹಃ|
ವೀತರಾಗಭಯಕ್‌ರೋಧಃ ಸ್‌ಥಿತಧೀರ್‌ಮುನಿರುಚ್‌ಯತೇ ||೨-೫೬||

ದುಃಖೇಷು = ದುಃಖದಲ್‌ಲಿ, ಅನುದ್‌ವಿಗ್‌ನಮನಾಃ = ಉದ್‌ವೇಗಕ್‌ಕೊಳಗಾಗದ ಮನಸ್‌ಸಿನವನೂ, ಸುಖೇಷು = ಸುಖದಲ್‌ಲಿ, ವಿಗತಸ್‌ಪೃಹಃ = ಅಪೇಕ್‌ಷೆಯಿಲ್‌ಲದವನೂ, ವೀತರಾಗಭಯಕ್‌ರೋಧಃ = ಪ್‌ರೀತಿ, ಭಯ, ಕೋಪಗಳಿಲ್‌ಲದವನೂ, ಮುನಿಃ = ಆದ ಮುನಿಯು, ಸ್‌ಥಿತಧೀಃ = ಸ್‌ಥಿತಪ್‌ರಜ್‌ಞನೆಂದು, ಉಚ್‌ಯತೇ = ಕರೆಯಲ್‌ಪಡುತ್‌ತಾನೆ.

ದುಃಖದಲ್‌ಲಿ ಉದ್‌ವೇಗಕ್‌ಕೊಳಗಾಗದ ಮನಸ್‌ಸಿನವನೂ ಸುಖದಲ್‌ಲಿ ಅಪೇಕ್‌ಷೆಯಿಲ್‌ಲದವನೂ ಪ್‌ರೀತಿ ಭಯ ಕೋಪಗಳಿಲ್‌ಲದವನೂ ಆದ ಮುನಿಯು ಸ್‌ಥಿತಪ್‌ರಜ್‌ಞನೆಂದು ಕರೆಯಲ್‌ಪಡುತ್‌ತಾನೆ.

ಯಃ ಸರ್‌ವತ್‌ರಾನಭಿಸ್‌ನೇಹಸ್‌ತತ್‌ ತತ್‌ ಪ್‌ರಾಪ್‌ಯ ಶುಭಾಶುಭಮ್‌|
ನಾಭಿನಂದತಿ ನ ದ್‌ವೇಷ್‌ಟಿ ತಸ್‌ಯ ಪ್‌ರಜ್‌ಞಾ ಪ್‌ರತಿಷ್‌ಠಿತಾ ||೨-೫೭||

ಯಃ = ಯಾರು, ಸರ್‌ವತ್‌ರ = ಎಲ್‌ಲವುದರಲ್‌ಲಿಯೂ, ಅನಭಿಸ್‌ನೇಹಃ = ಅನಾಸಕ್‌ತನಾಗಿ, ತತ್‌ ತತ್‌ = ಆಯಾಯ, ಶುಭಾಶುಭಮ್‌ = ಶುಭ ಹಾಗೂ ಅಶುಭ ವಿಷಯಗಳನ್‌ನು, ಪ್‌ರಾಪ್‌ಯ = ಪಡೆದಾಗ, ನ ಅಭಿನಂದತಿ = ಸಂತೋಷಪಡುವುದಿಲ್‌ಲವೋ, ನ ದ್‌ವೇಷ್‌ಟಿ = ದ್‌ವೇಷಿಸುವುದಿಲ್‌ಲವೋ, ತಸ್‌ಯ = ಆತನ, ಪ್‌ರಜ್‌ಞಾ  = ಬುದ್‌ಧಿಯು, ಪ್‌ರತಿಷ್‌ಠಿತಾ = ಸ್‌ಥಿರವಾಗಿರುವುದು.

ಯಾರು ಎಲ್‌ಲವುದರಲ್‌ಲಿಯೂ ಅನಾಸಕ್‌ತನಾಗಿ ಒಳ್‌ಳೆಯದಾದಾಗ ಹಿಗ್‌ಗುವುದಿಲ್‌ಲವೋ ಕೆಟ್‌ಟದ್‌ದಾದಾಗ ಕುಗ್‌ಗುವುದಿಲ್‌ಲವೋ ಆತನ ಬುದ್‌ಧಿಯು ಸ್‌ಥಿರವಾಗಿರುವುದು.

ಯದಾ ಸಂಹರತೇ ಚಾಯಂ ಕೂರ್‌ಮೋಂಽಗಾನೀವ ಸರ್‌ವಶಃ|
ಇಂದ್‌ರಿಯಾಣೀಂದ್‌ರಿಯಾರ್‌ಥೇಭ್‌ಯಸ್‌ತಸ್‌ಯ ಪ್‌ರಜ್‌ಞಾ ಪ್‌ರತಿಷ್‌ಠಿತಾ ||೨-೫೮||

ಚ = ಮತ್‌ತು, ಕೂರ್‌ಮಃ = ಆಮೆಯು, ಅಂಗಾನಿ  ಇವ = ಅಂಗಗಳನ್‌ನು ಒಳಗೆಳೆದುಕೊಳ್‌ಳುವಂತೆ, ಯದಾ = ಯಾವಾಗ, ಅಯಮ್‌ = ಇವನು, ಸರ್‌ವಶಃ = ಎಲ್‌ಲ, ಇಂದ್‌ರಿಯಾರ್‌ಥೇಭ್‌ಯಃ = ವಿಷಯಾಸಕ್‌ತಿಗಳಿಂದ, ಇಂದ್‌ರಿಯಾಣಿ = ಇಂದ್‌ರಿಯಗಳನ್‌ನು, ಸಂಹರತೇ = ಎಳೆದುಕೊಳ್‌ಳುವನೋ, (ಆಗ),  ತಸ್‌ಯ = ಆತನ, ಪ್‌ರಜ್‌ಞಾ  = ಬುದ್‌ಧಿಯು, ಪ್‌ರತಿಷ್‌ಠಿತಾ = ಸ್‌ತಿರವಾಗಿರುವುದು.

ಮತ್‌ತು, ಆಮೆಯು ತನ್‌ನ ಅಂಗಾಂಗಗಳನ್‌ನು ಚಿಪ್‌ಪಿನ ಒಳಸೆಳೆದುಕೊಳ್‌ಳುವಂತೆ ಯಾವಾಗ ಇವನು ಎಲ್‌ಲ ವಿಷಯಾಸಕ್‌ತಿಗಳಿಂದ ತನ್‌ನ ಇಂದ್‌ರಿಯಗಳನ್‌ನು ಒಳಸೆಳೆದುಕೊಳ್‌ಳುವನೋ ಆಗ ಇವನ ಬುದ್‌ಧಿಯು ಸ್‌ತಿರವಾಗಿರುವುದು.

ವಿಷಯಾ ವಿನಿವರ್‌ತಂತೇ ನಿರಾಹಾರಸ್‌ಯ ದೇಹಿನಃ|
ರಸವರ್‌ಜಂ ರಸೋಽಪ್‌ಯಸ್‌ಯ ಪರಂ ದೃಷ್‌‍ಟ್‌ವಾ ನಿವರ್‌ತತೇ ||೨-೫೯||

ನಿರಾಹಾರಸ್‌ಯ = ನಿರಾಹಾರಿಯಾದ, ದೇಹಿನಃ = ಮನುಷ್‌ಯನಲ್‌ಲಿ, ವಿಷಯಾ = ಇಂದ್‌ರಿಯ ವಿಷಯಗಳು, ವಿನಿವರ್‌ತಂತೇ = ನಿವೃತ್‌ತವಾಗುತ್‌ತವೆ, ರಸವರ್‌ಜಂ = ವಿಷಯಾಸಕ್‌ತಿಗಳನ್‌ನು ಬಿಟ್‌ಟು (ಆದರೆ ವಿಷಯಾಸಕ್‌ತಿಗಳು ಉಳಿದಿರುತ್‌ತವೆ). ಪರಂ ದೃಷ್‌‍ಟ್‌ವಾ = ಪರಮಾತ್‌ಮನ ಸಾಕ್‌ಷಾತ್‌ಕಾರದ ಬಳಿಕ, ಅಸ್‌ಯ =ಇವನ (ಸ್‌ಥಿತಪ್‌ರಜ್‌ಞನ), ರಸಃ = ವಿಷಯಾಸಕ್‌ತಿಗಳೂ, ನಿವರ್‌ತತೇ = ನಿವೃತ್‌ತವಾಗುತ್‌ತವೆ.

ನಿರಾಹಾರಿಯಾದ ಮನುಷ್‌ಯನಲ್‌ಲಿ ಇಂದ್‌ರಿಯ ವಿಷಯಗಳು ನಿವೃತ್‌ತವಾಗುತ್‌ತವೆ ಆದರೆ ಇಂದ್‌ರಿಯ ವಿಷಯಾಸಕ್‌ತಿಗಳು ಉಳಿದಿರುತ್‌ತವೆ.  ಪರಮಾತ್‌ಮನ ಸಾಕ್‌ಷಾತ್‌ಕಾರದ ಬಳಿಕ ಇವನ (ಸ್‌ಥಿತಪ್‌ರಜ್‌ಞನ) ವಿಷಯಾಸಕ್‌ತಿಗಳೂ ನಿವೃತ್‌ತವಾಗುತ್‌ತವೆ.

ಯತತೋ ಹ್‌ಯಪಿ ಕೌಂತೇಯ ಪುರುಷಸ್‌ಯ ವಿಪಶ್‌ಚಿತಃ|
ಇಂದ್‌ರಿಯಾಣಿ ಪ್‌ರಮಾಥೀನಿ ಹರಂತಿ ಪ್‌ರಸಭಂ ಮನಃ ||೨-೬೦||

ಕೌಂತೇಯ = ಎಲೈ ಕುಂತೀಪುತ್‌ರನೇ, ಪ್‌ರಮಾಥೀನಿ = ವಿಕ್‌ಷೇಪಗೊಳಿಸಬಲ್‌ಲ, ಇಂದ್‌ರಿಯಾಣಿ = ಇಂದ್‌ರಿಯಗಳು,  ಯತತಃ = ಪ್‌ರಯತ್‌ನಶೀಲನೂ, ವಿಪಶ್‌ಚಿತಃ = ಬುದ್‌ಧಿವಂತನೂ, ಹಿ = ಆದ, ಪುರುಷಸ್‌ಯ = ಮನುಷ್‌ಯನ, ಮನಃ  = ಮನಸ್‌ಸನ್‌ನೂ , ಅಪಿ = ಸಹ, ಪ್‌ರಸಭಂ = ಬಲವಂತವಾಗಿ, ಹರಂತಿ = ಅಪಹರಿಸುತ್‌ತವೆ.

ಕುಂತೀಪುತ್‌ರ (ಅರ್‌ಜುನ), ವಿಕ್‌ಷೇಪಗೊಳಿಸಬಲ್‌ಲ ಪಂಚೇದ್‌ರಿಯಗಳು ಪ್‌ರಯತ್‌ನಶೀಲನೂ  ಬುದ್‌ಧಿವಂತನೂ ಆದ ಮನುಷ್‌ಯನ ಮನಸ್‌ಸನ್‌ನೂ ಸಹ ಬಲವಂತವಾಗಿ ಅಪಹರಿಸುತ್‌ತವೆ.

ತಾನಿ ಸರ್‌ವಾಣಿ ಸಂಯಮ್‌ಯ ಯುಕ್‌ತ ಆಸೀತ ಮತ್‌ಪರಃ|
ವಶೇ ಹಿ ಯಸ್‌ಯೇಂದ್‌ರಿಯಾಣಿ ತಸ್‌ಯ ಪ್‌ರಜ್‌ಞಾ ಪ್‌ರತಿಷ್‌ಠಿತಾ ||೨-೬೧||

ತಾನಿ = ಆ, ಸರ್‌ವಾಣಿ = ಎಲ್‌ಲ (ಇಂದ್‌ರಿಯಗಳನ್‌ನು), ಸಂಯಮ್‌ಯ = ಸಂಯಮದಿಂದ (ನಿಗ್‌ರಹಿಸಿ), ಯುಕ್‌ತ = ಸಮಾಧಾನದಿಂದ, ಮತ್‌ಪರಃ ಆಸೀತ = ಪರಮಾತ್‌ಮನ ಧ್‌ಯಾನದಲ್‌ಲಿ ಕುಳಿತುಕೊಳ್‌ಳಬೇಕು, ಹಿ = ಏಕೆಂದರೆ, ಯಸ್‌ಯ = ಯಾರ, ಇಂದ್‌ರಿಯಾಣಿ = ಇಂದ್‌ರಿಯಗಳು, ವಶೇ = ನಿಯಂತ್‌ರಣದಲ್‌ಲಿರುತ್‌ತವೆಯೋ, ತಸ್‌ಯ= ಆತನ, ಪ್‌ರಜ್‌ಞಾ  = ಬುದ್‌ಧಿಯು, ಪ್‌ರತಿಷ್‌ಠಿತಾ = ಸ್‌ಥಿರವಾಗಿರುವುದು.

ಆ ಇಂದ್‌ರಿಯಗಳನ್‌ನೆಲ್‌ಲಾ ಸಂಯಮದಿಂದ ನಿಗ್‌ರಹಿಸಿ ಸಮಾಧಾನದಿಂದ ಪರಮಾತ್‌ಮನ ಧ್‌ಯಾನದಲ್‌ಲಿ ಕುಳಿತುಕೊಳ್‌ಳಬೇಕು; ಏಕೆಂದರೆ ಯಾರ ಇಂದ್‌ರಿಯಗಳು ನಿಯಂತ್‌ರಣದಲ್‌ಲಿರುತ್‌ತವೆಯೋ ಆತನ ಬುದ್‌ಧಿಯು ಸ್‌ಥಿರವಾಗಿರುವುದು.

ಧ್‌ಯಾಯತೋ ವಿಷಯಾನ್‌ ಪುಂಸಃ ಸಂಗಸ್‌ತೇಷೂಪಜಾಯತೇ|
ಸಂಗಾತ್‌ ಸಂಜಾಯತೇ ಕಾಮಃ ಕಾಮಾತ್‌ ಕ್‌ರೋಧೋಽಭಿಜಾಯತೇ ||೨-೬೨||

ವಿಷಯಾನ್‌ = ಇಂದ್‌ರಿಯ ವಿಷಯಗಳನ್‌ನು , ಧ್‌ಯಾಯತಃ = (ಕುರಿತು) ಚಿಂತಿಸುವ, ಪುಂಸಃ = ಮನುಷ್‌ಯನಿಗೆ, ತೇಷಃ = ಅವುಗಳಲ್‌ಲಿ, ಸಂಗಃ = ಆಸಕ್‌ತಿ, ಉಪಜಾಯತೇ = ಉಂಟಾಗುತ್‌ತದೆ, ಸಂಗಾತ್‌ = ಆಸಕ್‌ತಿಯಿಂದ, ಕಾಮಃ = ಕಾಮನೆಗಳು, ಸಂಜಾಯತೇ = ಹುಟ್‌ಟುತ್‌ತವೆ, ಕಾಮಾತ್‌ = ಕಾಮನೆಗಳಿಂದ, ಕ್‌‍ರೋಧಃ = ಕ್‌ರೋಧವು, ಅಭಿಜಾಯತೇ = ಹುಟ್‌ಟುತ್‌ತದೆ.

ಇಂದ್‌ರಿಯ ವಿಷಯಗಳನ್‌ನು ಕುರಿತು ಚಿಂತಿಸುವ ಮನುಷ್‌ಯನಿಗೆ ಅವುಗಳಲ್‌ಲಿ  ಆಸಕ್‌ತಿ ಉಂಟಾಗುತ್‌ತದೆ. ಆಸಕ್‌ತಿಯಿಂದ ಕಾಮನೆಗಳು ಹುಟ್‌ಟುತ್‌ತವೆ. ಕಾಮನೆಗಳಿಂದ ಕ್‌ರೋಧವು ಹುಟ್‌ಟುತ್‌ತದೆ.

ಕ್‌ರೋಧಾದ್‌ಭವತಿ ಸಮ್‌ಮೋಹಃ ಸಮ್‌ಮೋಹಾತ್‌ ಸ್‌ಮೃತಿವಿಭ್‌ರಮಃ|
ಸ್‌ಮೃತಿಭ್‌‍ರಂಶಾದ್‌ ಬುದ್‌ಧಿನಾಶೋ ಬುದ್‌ಧಿನಾಶಾತ್‌ಪ್‌‍ರಣಶ್‌ಯತಿ ||೨-೬೩||

ಕ್‌ರೋಧಾತ್‌ = ಕ್‌ರೋಧದಿಂದ, ಸಮ್‌ಮೋಹಃ = ವಿವೇಕಶೂನ್‌ಯತೆಯು, ಭವತಿ = ಉಂಟಾಗುತ್‌ತದೆ, ಸಮ್‌ಮೋಹಾತ್‌ = ವಿವೇಕಶೂನ್‌ಯತೆಯಿಂದ, ಸ್‌ಮೃತಿವಿಭ್‌ರಮಃ = ಸ್‌ಮೃತಿಭ್‌ರಮಣೆಯಾಗುತ್‌ತದೆ, ಸ್‌ಮೃತಿಭ್‌‍ರಂಶಾತ್‌ = ಸ್‌ಮೃತಿಭ್‌ರಮಣೆಯಿಂದ, ಬುದ್‌ಧಿನಾಶೋ = ಬುದ್‌ಧಿನಾಶವಾಗುತ್‌ತದೆ, ಬುದ್‌ಧಿನಾಶಾತ್‌ = ಬುದ್‌ಧಿನಾಶದಿಂದ, ಪ್‌‍ರಣಶ್‌ಯತಿ = ಪತನವಾಗುತ್‌ತಾನೆ.

ಕ್‌ರೋಧದಿಂದ ವಿವೇಕಶೂನ್‌ಯತೆಯು ಉಂಟಾಗುತ್‌ತದೆ. ವಿವೇಕಶೂನ್‌ಯತೆಯಿಂದ ಸ್‌ಮೃತಿಭ್‌ರಮಣೆಯಾಗುತ್‌ತದೆ. ಸ್‌ಮೃತಿಭ್‌ರಮಣೆಯಿಂದ ಬುದ್‌ಧಿನಾಶವಾಗುತ್‌ತದೆ. ಬುದ್‌ಧಿನಾಶದಿಂದ ಪತನವಾಗುತ್‌ತಾನೆ.

ರಾಗದ್‌ವೇಷವಿಯುಕ್‌ತೈಸ್‌ತು ವಿಷಯಾನಿಂದ್‌‍ರಿಯೈಶ್‌ಚರನ್‌|
ಆತ್‌ಮವಶ್‌ಯೈರ್‌ವಿಧೇಯಾತ್‌ಮಾ ಪ್‌ರಸಾದಮಧಿಗಚ್‌ಛತಿ ||೨-೬೪||

ತು = ಆದರೆ, ರಾಗದ್‌ವೇಷ ವಿಯುಕ್‌ತೈಃ = ರಾಗದ್‌ವೇಷಮುಕ್‌ತನಾದ, ಆತ್‌ಮವಶ್‌ಯೈಃ = ತನ್‌ನ ಅಂಕೆಯಲ್‌ಲಿಟ್‌ಟುಕೊಂಡಿರುವ, ಇಂದ್‌ರಿಯೈಃ = ಇಂದ್‌ರಿಯಗಳಿಂದ, ವಿಷಯಾನ್‌ = ವಿಷಯಗಳನ್‌ನು, ಚರನ್‌ = ಅನುಭವಿಸುತ್‌ತಿರುವವನು, ವಿಧೇಯಾತ್‌ಮಾ = ಸಮಚಿತ್‌ತವುಳ್‌ಳವನಾಗಿ, ಪ್‌ರಸಾದಮ್‌ = ಪ್‌ರಸನ್‌ನತೆಯನ್‌ನು, ಅಧಿಗಚ್‌ಛತಿ = ಹೊಂದುತ್‌ತಾನೆ.

ಆದರೆ ರಾಗದ್‌ವೇಷಮುಕ್‌ತನಾಗಿ ತನ್‌ನ ಅಂಕೆಯಲ್‌ಲಿಟ್‌ಟುಕೊಂಡಿರುವ ಇಂದ್‌ರಿಯಗಳಿಂದ ವಿಷಯಗಳನ್‌ನು ಅನುಭವಿಸುತ್‌ತಿರುವವನು ಸಮಚಿತ್‌ತವುಳ್‌ಳವನಾಗಿ  ಪ್‌ರಸನ್‌ನತೆಯನ್‌ನು ಹೊಂದುತ್‌ತಾನೆ.

ಪ್‌ರಸಾದೇ ಸರ್‌ವದುಃಖಾನಾಂ ಹಾನಿರಸ್‌ಯೋಪಜಾಯತೇ|
ಪ್‌ರಸನ್‌ನಚೇತಸೋ ಹ್‌ಯಾಶು ಬುದ್‌ಧಿಃ ಪರ್‌ಯಾವತಿಷ್‌ಠತೇ ||೨-೬೫||

ಪ್‌ರಸಾದೇ = ಮನಸ್‌ಸು ಪ್‌ರಸನ್‌ನವಾಗಿದ್‌ದರೆ, ಅಸ್‌ಯ = ಆತನ, ಸರ್‌ವದುಃಖಾನಾಂ = ಎಲ್‌ಲ ದುಃಖಗಳು, ಹಾನಿಃ ಉಪಜಾಯತೇ = ನಾಶವಾಗುತ್‌ತವೆ, ಹಿ = ಏಕೆಂದರೆ, ಪ್‌ರಸನ್‌ನಚೇತಸಃ = ಪ್‌ರಸನ್‌ನಚಿತ್‌ತನಾದವನ,  ಬುದ್‌ಧಿಃ = ಬುದ್‌ಧಿಯು, ಆಶು = ತಕ್‌ಷಣವೇ, ಪರ್‌ಯಾವತಿಷ್‌ಠತೇ = ಸ್‌ಥಿರವಾಗುತ್‌ತದೆ.

ಮನಸ್‌ಸು ಪ್‌ರಸನ್‌ನವಾಗಿದ್‌ದರೆ ಆತನ ಎಲ್‌ಲ ದುಃಖಗಳು ನಾಶವಾಗುತ್‌ತವೆ. ಏಕೆಂದರೆ  ಪ್‌ರಸನ್‌ನಚಿತ್‌ತನಾದವನ ಬುದ್‌ಧಿಯು ತಕ್‌ಷಣವೇ ಸ್‌ಥಿರವಾಗುತ್‌ತದೆ.

ನಾಸ್‌ತಿ ಬುದ್‌ಧಿರಯುಕ್‌ತಸ್‌ಯ ನ ಚಾಯುಕ್‌ತಸ್‌‍ಯ ಭಾವನಾ|
ನ ಚಾಭಾವಯತಃ ಶಾಂತಿರಶಾಂತಸ್‌ಯ ಕುತಃ ಸುಖಮ್‌ ||೨-೬೬||

ಅಯುಕ್‌ತಸ್‌ಯ = ಸಮಚಿತ್‌ತವಿಲ್‌ಲದವನಿಗೆ, ಬುದ್‌ಧಿಃ = ಬುದ್‌ಧಿಯು, ನ ಅಸ್‌ತಿ = ಇರುವುದಿಲ್‌ಲ, ಚ = ಮತ್‌ತು, ಅಯುಕ್‌ತಸ್‌ಯ = ಸಮಚಿತ್‌ತವಿಲ್‌ಲದವನಿಗೆ, ನ ಭಾವನಾ = (ಆಸ್‌ತಿಕ) ಭಾವನೆಯಿಲ್‌ಲ, ಅಭಾವಯತಃ = (ಆಸ್‌ತಿಕ) ಭಾವನೆಯಿಲ್‌ಲದವನಿಗೆ, ನ ಶಾಂತಿ = ಶಾಂತಿಯಿಲ್‌ಲ, ಅಶಾಂತಸ್‌ಯ = ಶಾಂತಿಯಿಲ್‌‍ಲದವನಿಗೆ, ಸುಖಮ್‌ = ಸುಖವು, ಕುತಃ = ಎಲ್‌ಲಿಯದು?

ಸಮಚಿತ್‌ತವಿಲ್‌ಲದವನಿಗೆ ಬುದ್‌ಧಿಯು ಇರುವುದಿಲ್‌ಲ; ಮತ್‌ತು ಸಮಚಿತ್‌ತವಿಲ್‌ಲದವನಿಗೆ ಆಸ್‌ತಿಕ ಭಾವನೆಯಿಲ್‌ಲ. ಆಸ್‌ತಿಕ ಭಾವನೆಯಿಲ್‌ಲದವನಿಗೆ ಶಾಂತಿಯಿಲ್‌ಲ. ಶಾಂತಿಯಿಲ್‌‍ಲದವನಿಗೆ ಸುಖವು ಎಲ್‌ಲಿಯದು?

ಇಂದ್‌ರಿಯಾಣಾಂ ಹಿ ಚರತಾ ಯನ್‌ಮನೋಽನುವಿಧೀಯತೇ|
ತದಸ್‌ಯ ಹರತಿ ಪ್‌ರಜ್‌ಞಾಂ ವಾಯುರ್‌ನಾವಮಿವಾಂಭಸಿ ||೨-೬೭||

ಹಿ = ಏಕೆಂದರೆ, ಚರತಾ = ಚಂಚಲವಾದ,  ಇಂದ್‌ರಿಯಾಣಾಂ = ಇಂದ್‌ರಿಯಗಳನ್‌ನು, ಯತ್‌ = ಯಾವ, ಮನಃ = ಮನಸ್‌ಸು, ಅನುವಿಧೀಯತೇ = ಹಿಂಬಾಲಿಸುತ್‌ತದೆಯೋ, ತತ್‌ = ಅದು, ವಾಯುಃ = ಗಾಳಿಯು, ಅಂಭಸಿ = ನೀರಿನಲ್‌ಲಿ, ನಾವಮ್‌ ಇವ = ದೋಣಿಯನ್‌ನು (ಗೊತ್‌ತುಗುರಿಯಿಲ್‌ಲದೇ) ತಳ್‌‍ಳುವ ಹಾಗೆ, ಅಸ್‌ಯ= ಈತನ, ಪ್‌ರಜ್‌ಞಾಂ = ಬುದ್‌ಧಿಯನ್‌ನು, ಹರತಿ = ಹರಿಬಿಡುತ್‌ತದೆ

ಏಕೆಂದರೆ ಚಂಚಲವಾದ ಇಂದ್‌ರಿಯಗಳನ್‌ನು ಯಾವ ಮನಸ್‌ಸು ಹಿಂಬಾಲಿಸುತ್‌ತದೆಯೋ ಅದು ಗಾಳಿಯು ನೀರಿನಲ್‌ಲಿ ದೋಣಿಯನ್‌ನು ಗೊತ್‌ತುಗುರಿಯಿಲ್‌ಲದೇ ತಳ್‌‍ಳುವ ಹಾಗೆ ಈತನ ಬುದ್‌ಧಿಯನ್‌ನು ಹರಿಬಿಡುತ್‌ತದೆ.

ತಸ್‌ಮಾದ್‌ ಯಸ್‌ಯ ಮಹಾಬಾಹೋ ನಿಗೃಹೀತಾನಿ ಸರ್‌ವಶಃ|
ಇಂದ್‌ರಿಯಾಣೀಂದ್‌ರಿಯಾರ್‌ಥೇಭ್‌ಯಸ್‌ತಸ್‌ಯ ಪ್‌ರಜ್‌ಞಾ ಪ್‌ರತಿಷ್‌ಠಿತಾ ||೨-೬೮||

ಮಹಾಬಾಹೋ = ಮಹಾಬಾಹುವೇ, ತಸ್‌ಮಾದ್‌ = ಆದುದರಿಂದ, ಯಸ್‌ಯ = ಯಾರ, ಇಂದ್‌ರಿಯಾಣೀ = ಇಂದ್‌ರಿಯಗಳು, ಸರ್‌ವಶಃ = ಎಲ್‌ಲ ರೀತಿಯಿಂದಲೂ, ಇಂದ್‌ರಿಯಾರ್‌ಥೇಭ್‌ಯಃ = ಇಂದ್‌ರಿಯ ವಿಷಯಗಳಿಂದ, ನಿಗೃಹೀತಾನಿ = ನಿಗ್‌ರಹಿಸಲ್‌ಪಟ್‌ಟಿರುತ್‌ತವೆಯೋ, ತಸ್‌ಯ = ಆತನ, ಪ್‌ರಜ್‌ಞಾ  = ಬುದ್‌ಧಿಯು, ಪ್‌ರತಿಷ್‌ಠಿತಾ = ಸ್‌ಥಿರವಾಗಿರುವುದು.

ಆಜಾನುಬಾಹುವೇ (ಅರ್‌ಜುನನೇ), ಆದುದರಿಂದ ಯಾರ ಇಂದ್‌ರಿಯಗಳು ಎಲ್‌ಲ ರೀತಿಯಿಂದಲೂ ಇಂದ್‌ರಿಯ ವಿಷಯಗಳಿಂದ ನಿಗ್‌ರಹಿಸಲ್‌ಪಟ್‌ಟಿರುತ್‌ತವೆಯೋ ಆತನ ಬುದ್‌ಧಿಯು ಸ್‌ಥಿರವಾಗಿರುವುದು.

ಯಾ ನಿಶಾ ಸರ್‌ವಭೂತಾನಾಂ ತಸ್‌ಯಾಂ ಜಾಗರ್‌ತಿ ಸಂಯಮೀ|
ಯಸ್‌ಯಾಂ ಜಾಗ್‌ರತಿ ಭೂತಾನಿ ಸಾ ನಿಶಾ ಪಶ್‌ಯತೋ ಮುನೇಃ ||೨-೬೯||

ಸರ್‌ವಭೂತಾನಾಂ = ಎಲ್‌ಲ ಜೀವರಾಶಿಗಳಿಗೆ, ಯಾ ನಿಶಾ = ಯಾವುದು ರಾತ್‌ರಿಯೋ, ತಸ್‌ಯಾಂ = ಆ ಸಮಯದಲ್‌ಲಿ, ಸಂಯಮೀ = ಸಂಯಮಿಯು, ಜಾಗರ್‌ತಿ = ಎಚ್‌ಚರವಿರುತ್‌ತಾನೆ, ಯಸ್‌ಯಾಂ = ಯಾವಾಗ, ಭೂತಾನಿ = ಜೀವರಾಶಿಗಳು, ಜಾಗ್‌ರತಿ = ಎಚ್‌ಚರವಿರುತ್‌ತವೆಯೋ, ಸಾ = ಅದು (ಆ ಸಮಯ), ಪಶ್‌ಯತಃ = ನೋಡಿತ್‌ತಿರುವ, ಮುನೇಃ = ಮುನಿಗೆ, ನಿಶಾ = ರಾತ್‌ರಿಯಾಗಿರುತ್‌ತದೆ.

ಎಲ್‌ಲ ಜೀವರಾಶಿಗಳಿಗೆ ಯಾವುದು ರಾತ್‌ರಿಯೋ ಆ ಸಮಯದಲ್‌ಲಿ ಸಂಯಮಿಯು ಎಚ್‌ಚರವಿರುತ್‌ತಾನೆ. ಯಾವಾಗ ಜೀವರಾಶಿಗಳು ಎಚ್‌ಚರವಿರುತ್‌ತವೆಯೋ ಆ ಸಮಯ  ನೋಡಿತ್‌ತಿರುವ ಮುನಿಗೆ ರಾತ್‌ರಿಯಾಗಿರುತ್‌ತದೆ.

ಆಪೂರ್‌ಯಮಾಣಮಚಲಪ್‌ರತಿಷ್‌ಠಂ ಸಮುದ್‌ರಮಾಪಃ ಪ್‌ರವಿಶಂತಿ ಯದ್‌ವತ್‌|
ತದ್‌ವತ್‌ ಕಾಮಾ ಯಂ ಪ್‌ರವಿಶಂತಿ ಸರ್‌ವೇ ಸ ಶಾಂತಿಮಾಪ್‌ನೋತಿ ನ ಕಾಮಕಾಮಿ ||೨-೭೦||

ಆಪೂರ್‌ಯಮಾಣಂ = ಪರಿಪೂರ್‌ಣವಾದ, ಅಚಲ = ನಿಶ್‌ಚಲವಾದ, ಸಮುದ್‌ರಂ = ಸಮುದ್‌ರವನ್‌ನು, ಆಪಃ = (ನದಿಗಳ) ನೀರು, ಯದ್‌ವತ್‌ = ಹೇಗೆ, ಪ್‌ರವಿಶಂತಿ = ಸೇರುವುದೋ, ತದ್‌ವತ್‌ = ಹಾಗೆ, ಸರ್‌ವೇ = ಎಲ್‌ಲ, ಕಾಮಾಃ = ಕಾಮನೆಗಳೂ, ಪ್‌ರವಿಶಂತಿ = ಸೇರುವುವೋ, ಸಃ = ಆತನು, ಶಾಂತಿಮ್‌ ಆಪ್‌ನೋತಿ = ಶಾಂತಿಯನ್‌ನು ಪಡೆಯುತ್‌ತಾನೆ, ನ ಕಾಮಕಾಮಿ = ಕಾಮನೆಗಳನ್‌ನು ಬಯಸುವವನು ಪಡೆಯುವುದಿಲ್‌ಲ.

ಪರಿಪೂರ್‌ಣವಾದ ನಿಶ್‌ಚಲವಾದ ಸಮುದ್‌ರವನ್‌ನು  ನದಿಗಳ ನೀರು ಹೇಗೆ ಸೇರುವುದೋ ಹಾಗೆ ಎಲ್‌ಲ ಕಾಮನೆಗಳೂ ಸೇರುವುವೋ ಆತನು  ಶಾಂತಿಯನ್‌ನು ಪಡೆಯುತ್‌ತಾನೆ;  ಕಾಮನೆಗಳನ್‌ನು ಬಯಸುವವನು ಪಡೆಯುವುದಿಲ್‌ಲ.

ವಿಹಾಯ ಕಾಮಾನ್‌ ಯಃ ಸರ್‌ವಾನ್‌ ಪುಮಾಂಶ್‌ಚರತಿ ನಿಸ್‌ಪೃಹಃ|
ನಿರ್‌ಮಮೋ ನಿರಹಂಕಾರಃ ಸ ಶಾಂತಿಮಧಿಗಚ್‌ಛತಿ ||೨-೭೧||

ಯಃ = ಯಾವ, ಪುಮಾನ್‌ = ಮನುಷ್‌ಯನು, ಸರ್‌ವಾನ್‌ = ಎಲ್‌ಲಾ, ಕಾಮಾನ್‌ = ಕಾಮನೆಗಳನ್‌ನು, ವಿಹಾಯ = ಬಿಟ್‌ಟು, ನಿಸ್‌ಪೃಹಃ = ಆಶೆಗಳಿಲ್‌‍ಲದವನಾಗಿ, ನಿರ್‌ಮಮಃ = ಮಮಕಾರವಿಲ್‌ಲದವನಾಗಿ, ನಿರಹಂಕಾರಃ = ಅಹಂಕಾರವಿಲ್‌ಲದವನಾಗಿ, ಚರತಿ = ನಡೆಯುತ್‌ತಾನೋ, ಸಃ = ಅವನು, ಶಾಂತಿಮ್‌ = ಶಾಂತಿಯನ್‌ನು, ಅಧಿಗಚ್‌ಛತಿ = ಪಡೆಯುತ್‌ತಾನೆ.

ಯಾವ ಮನುಷ್‌ಯನು ಎಲ್‌ಲಾ ಕಾಮನೆಗಳನ್‌ನು ಬಿಟ್‌ಟು ಆಶೆಗಳಿಲ್‌‍ಲದವನಾಗಿ, ಮಮಕಾರವಿಲ್‌ಲದವನಾಗಿ, ಅಹಂಕಾರವಿಲ್‌ಲದವನಾಗಿ ನಡೆಯುತ್‌ತಾನೋ ಅವನು ಶಾಂತಿಯನ್‌ನು ಪಡೆಯುತ್‌ತಾನೆ.

ಏಷಾ ಬ್‌ರಾಹ್‌ಮೀ ಸ್‌ಥಿತಿಃ ಪಾರ್‌ಥ ನೈನಾಂ ಪ್‌ರಾಪ್‌ಯ ವಿಮುಹ್‌ಯತಿ|
ಸ್‌ಥಿತ್‌ವಾಸ್‌ಯಾಮಂತಕಾಲೇಽಪಿ ಬ್‌ರಹ್‌ಮನಿರ್‌ವಾಣಮೃಚ್‌ಛತಿ ||೨-೭೨||

ಪಾರ್‌ಥ = ಎಲೈ, ಪಾರ್‌ಥನೇ, ಏಷಾ = ಇದು, ಬ್‌ರಾಹ್‌ಮೀ = ಬ್‌ರಹ್‌ಮಜ್‌ಞಾನಿಯ, ಸ್‌ಥಿತಿಃ = ಸ್‌ಥಿತಿ, ಏನಾಂ= ಇದನ್‌ನು, ಪ್‌ರಾಪ್‌ಯ = ಪಡೆದು, ನ ವಿಮುಹ್‌ಯತಿ = ಮರುಳಾಗುವುದಿಲ್‌ಲ, ಅಂತಕಾಲೇ ಅಪಿ = ಅಂತ್‌ಯಕಾಲದಲ್‌ಲಿಯೂ, ಅಸ್‌ಯಾಂ = ಈ ಸ್‌ಥಿತಿಯಲ್‌ಲಿ, ಸ್‌ಥಿತ್‌ವಾ =ಇದ್‌ದು, ಬ್‌ರಹ್‌ಮನಿರ್‌ವಾಣಂ = ಬ್‌ರಹ್‌ಮ ನಿರ್‌ವಾಣವನ್‌‍ನು, ಋಚ್‌ಛತಿ = ಪಡೆಯುತ್‌ತಾನೆ.

ಪಾರ್‌ಥ, ಇದು ಬ್‌ರಹ್‌ಮಜ್‌ಞಾನಿಯ ಸ್‌ಥಿತಿ. ಇದನ್‌ನು ಪಡೆದು ಮರುಳಾಗುವುದಿಲ್‌ಲ.  ಅಂತ್‌ಯಕಾಲದಲ್‌ಲಿಯೂ ಈ ಸ್‌ಥಿತಿಯಲ್‌ಲಿ ಇದ್‌ದು ಬ್‌ರಹ್‌ಮ ನಿರ್‌ವಾಣವನ್‌‍ನು ಪಡೆಯುತ್‌ತಾನೆ.

ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ - ಜಿ.ಪಿ. ರಾಜರತ್‌ನಂ (v1)

ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ


ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ ನಂಗೊಂದು ರೊಟ್‌ಟಿ ತಟ್‌ಟಪ್‌ಪ
ಪುಟಾಣಿ ರೊಟ್‌ಟಿ ಕೆಂಪಗೆ ಸುಟ್‌ಟು ಒಂಬತ್‌ತು ಕಾಸಿಗೆ ಕಟ್‌ಟಪ್‌ಪ
ಬಿದ್‌ದು ಹೋದೀತು ಕಿಟ್‌ಟಪ್‌ಪ
ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ ರೊಟ್‌ಟಿಯ ನೋಡಿದ ಮುಟ್‌ಟಪ್‌ಪ
ರೊಟ್‌ಟಿಯು ಸುಟ್‌ಟು ಹಸಿ ಹಸಿ ಹಿಟ್‌ಟು ರೊಟ್‌ಟಿಯ ಬೇರೆ ತಟ್‌ಟಪ್‌ಪ
ನನಗಿದು ಬೇಡ ಕಿಟ್‌ಟಪ್‌ಪ
ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ ಬೇರೆಯ ರೊಟ್‌ಟಿಯ ತಟ್‌ಟಪ್‌ಪಾ
ಗುಂಡಗೆ ರೊಟ್‌ಟಿ ಸುಡದೇ ಕೊಟ್‌‌ರೆ ಟೂ ಟೂ ಸಂಗ ಬಿಟ್‌ಟೇಪ್‌ಪ
ಬಿ`ಟರೆ ಪುನಹ ಕಟ್‌ಟೇಪ್‌ಪ ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ

ಕನ್ನಡದಲ್ಲಿ ಸಂಯುಕ್ತಾಕ್ಷರಗಳನ್ನು ಬರೆಯುವ ಕುರಿತ ಒಂದು ಸಂಭಾಷಣೆ

ಕನ್ನಡದಲ್ಲಿ ಸಂಯುಕ್ತಾಕ್ಷರಗಳನ್ನು ಬರೆಯುವ ಕುರಿತ ಒಂದು ಸಂಭಾಷಣೆ:

"ಶೋ"
"ಇದೇನು? ಓದಿ."
"ಶೋ"
"ಸರೀನಾ?"
"ಊಂ. ಸರಿ."
"ಇದು ಯಾವಾಗಲೂ ಶೋ "
"ಹೌದು. ಇದು ಯಾವಾಗಲೂ ಶೋ ನೇ. ಏನ್ರೀ ಇದು, ಸ್ಕೂಲ್ ಮಕ್ಕಳಿಗೆ ಕೇಳೋ ಹಾಗೆ ಕೇಳ್ತೀರಲ್ಲಾ?!"
"ಸ್ವಲ್ಪ ಇರಿ"
"ಶ್ಲೋ"
"ಈಗ ಓದಿ. ಇದು ಶೋನೇನಾ?"
"ಈಗ ಇದು ಶ್ಲೋ."
"ಆ ಹೌದು. ನೋಡೊದಕ್ಕೆ ಶೋ ಹಾಗೇ ಇದ್ದರೂ, ಕೆಳಗೆ ಲವತ್ತು ಕೊಟ್ಟ ತಕ್ಷಣ, ಅದು ಶ್ ಅಂತ ಉಚ್ಚರಿಸಬೇಕು. ಅಲ್ವಾ?"
"ಹೌದು. ಅದು ಹಾಗೇನೇ."
"ಇದನ್ನ ಓದಿ."
"ಶ್ರೋ"
"ಇದು ಶ್ರೋ"
"ಆ ಹೌದು. ನೋಡೊದಕ್ಕೆ ಶೋ ಹಾಗೇ ಇದ್ದರೂ, ಕೆಳಗೆ ರವತ್ತು ಕೊಟ್ಟ ತಕ್ಷಣ, ಅದು ಶ್ ಅಂತ ಉಚ್ಚರಿಸಬೇಕು. ಅಲ್ವಾ?"
"ಹೌದು."
"ಅಂದರೆ ಶ, ಶಾ, ಶಿ, ಶೀ, ಶು, ಶೂ, ಶೆ, ಶೇ, ಶೈ, ಶೊ, ಶೋ, ಶೌ, ಶಂ ಇವೆಲ್ಲಾನೂ ಸಂಯುಕ್ತಾಕ್ಷರಗಳಲ್ಲಿ ಬಂದಾಗ, ಶ್ ಅಂತಾನೇ ಉಚ್ಚರಿಸಬೇಕು. ಅಲ್ವಾ? ಶ್ಚ, ಶ್ಯಾ, ಶ್ರಿ, ಶ್ಲೀ, ಮುಂತಾಗಿ ಶ್ರಾಂ ವರೆಗೆ ಇವೆಲ್ಲದರಲ್ಲೂ ಶ್ ಅಂತಾನೇ ಉಚ್ಚರಿಸಬೇಕು. ಶ ನಿಂದ ಶಂ ವರೆಗಿನ ಎಲ್ಲಾ ಸ್ವರಗಳು ಸೇರಿದ ಶ್ ಅಕ್ಷರಗಳ ಚಾಕ್ಷುಷರೂಪ ಗುಣಿತಾಕ್ಷರಗಳಂತೆ ಕಂಡರೂ, ಅವುಗಳನ್ನು ಉಚ್ಚರಿಸುವಾಗ ಆ ಅಕ್ಷರಗಳು ಗುಣೀತಾಕ್ಷರಗಳೇ, ಸಂಯುಕ್ತಾಕ್ಷರಗಳೇ ಎಂಬುದನ್ನು ಮೊದಲು ನೋಡಿ ಆ ಬಳಿಕ ಉಚ್ಚಾರವನ್ನು ನಿರ್ಧರಿಸಬೇಕು. ಈ ದ್ವಂದವೇ ಸಂದಿಗ್ಧಕಾರಕ. ಹೌದಾ?"
"ಇಲ್ಲ. ಇದರಲ್ಲೇನು ಸಂದಿಗ್ಧ?"
"ಹೇಳ್ತೇನೆ."
"ಶ್ಲೋ, ಈಗ ಮತ್ತೆ ಹೇಳಿ ಇದೇನು?"
"ಇದು ಶ್ಲೋ."
“ಇದರಲ್ಲಿ ಓತ್ವ ಧೀರ್ಘ ಯಾವುದರದು ಶ ದ್ದೋ, ಲ ದ್ದೋ?”
“ಅದು ಲ ಗೇ ಸೇರಿದ್ದು. ಅದಕ್ಕೇ ಅದನ್ನ ಲ ಕ್ಕೇ ಸೇರಿಸಿ ಹೇಳೋದು.”
"ಹಾಗಾದರೆ ಓತ್ವ ಧೀರ್ಘನ ಲ ಗೆ ಏಕೆ ಕೊಟ್ಟಿಲ್ಲ."
" " (ಮೌನ)
"ಏಕೆ ಸುಮ್ಮನಾದಿರಿ? ಶ್ಲೋ ನಲ್ಲಿ ಶ ಕ್ಕೆ ಓತ್ವ ಧೀರ್ಘ ಕೊಟ್ಟು, ಲ ಕ್ಕೆ ಓತ್ವ ದೀರ್ಘ ಸೇರಿಸಿ ಹೇಳೋದು ಸರೀನಾ?"
" " (ಮೌನ)
"ಏನು ಹೇಳೋಕೆ ಗೊತ್ತಾಗ್ತಿಲ್ವಾ? ಹಾಗೇನೇ ಶ್ರೋ ನಲ್ಲಿ ಶ ಕ್ಕೆ ಓತ್ವ ಧೀರ್ಘ ಕೊಟ್ಟು, ರ ಕ್ಕೆ ಓತ್ವ ದೀರ್ಘ ಸೇರಿಸಿ ಹೇಳೋದು ಸರೀನಾ? ಇದನ್ನೇ ನಾನು ದ್ವಂದ್ವ ಮತ್ತು ಸಂದಿಗ್ಧ ಎಂದದ್ದು"
"ಇರಬಹುದು. ಆದರೂ ಈಗಿರುವ ಪದ್ಧತಿಗೆ ಜನ ಒಗ್ಗಿ ಹೋಗಿದ್ದಾರೆ. ಅಲ್ಲವೇ?"
"ಸರಿಯಿಲ್ಲ ಅನ್ನಿಸಿದ್ದನ್ನು ಸರಿಪಡಿಸಿಕೊಳ್ಳಬೇಕಲ್ಲವೇ? ಈಗ ಇದನ್ನು ಓದಿ:
ಪರಿಶ್‌ರಮ, ಆಶ್‌ಚರ್‌ಯ, ಶ್‌ಲಾಘನೆ, ಪ್‌ರಶ್‌ನಿಸು, ಶ್‌ರೇಯಸ್ಸು, ಶ್‌ಲೋಕ, ವಿಶ್‌ಲೇಷಣೆ, ಪ್‌ರಶ್‌ನೋತ್ತರ"
"ಓದೋದಕ್ಕೆ ಸ್ವಲ್ಪ ಕಷ್ಟ ಆಗ್ತಿದೆ."
"ಹೌದು. ನಿಮಗೆ ಇದು ಹೊಸದರಂತಿದೆ. ಅದಕ್ಕೆ ಹಾಗೆ. ಸ್ವಲ್ಪ ರೂಡಿಯಾದರೆ ಸುಲಭವಾಗುತ್ತದೆ. ಒಂದಷ್ಟು ಬಾರಿ ಪ್ರಯತ್ನಿಸಿ. ಆನಂತರ ನೋಡೋಣ. ಓಕೆ?"
"ಆಗಲಿ."

------------------------------------------------------------------------------------------------------

ಆನಂತರ ಮತ್ತೆ ಭೇಟಿಯಾದಾಗ -

"ನಮಸ್ಕಾರ"

"ನಮಸ್ಕಾರ. ನೀವು ಒತ್ತಕ್ಷರಗಳ ಬಗ್ಗೆ ಹೋದ ಸಾರಿ ಹೇಳಿದ್ದು ಯೋಚಿಸಿದೆ. ಸ್ವಲ್ಪ ಅಭ್ಯಾಸ ಆದ ಮೇಲೆ ಸುಲಭವಾಗಿ ಓದಬಹುದು ಎಂದು ನೀವಂದಿದ್ದು ನಿಜ ಅನ್ನಿಸಿತು."

"ನಿಮಗೆ ಗೊತ್ತಾ ಕೇವಲ ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಒತ್ತಕ್ಷರಗಳನ್ನು ಕೆಳಗೆ ಬರೆಯುವುದು ಮತ್ತ್ ಮೊದಲನೇ ವ್ಯಂಜನಕ್ಕೆ ಸ್ವರವನ್ನು ಸೇರಿಸುವುದು. ಬಹುತೇಕ ಭಾರತೀಯ ಭಾಷೆಗಳಲ್ಲಿ ಉಚ್ಚಾರಣೆಗೆ ಅನುಸಾರವಾಗಿಯೇ ಬರೆಯುತ್ತಾರೆ."

"ಹೌದಾ?"

"ಹೌದು. ಈಗ ನೋಡಿ ಕೆಲವು ಪದಗಳನ್ನ ಕನ್ನಡ ಮತ್ತು ಸಂಸ್ಕೃತದಲ್ಲಿ ಬರೆದಿರೋ ಈ ಹಾಳೆ ನೋಡಿ:

ಈರ್ಷ್ಯಾ ईर्ष्या
ಕ್ಲೇಶ क्लेश
ಧ್ಯಾನ ध्यान
ನಿತ್ಯ नित्य
ನಿಷ್ಠಾ निष्ठा
ಪರಹಸ್ತೇ परहस्ते
ವಸ್ತು वस्तु
ವಿಶ್ವಾಮಿತ್ರ विश्वामित्र
ವಿಶ್ವಾಸ विश्वास
ವಿಷ್ಣು विष्णु
ವ್ಯಾಪಾರೀ व्यापारी
ಶಬ್ದ शब्द
ಶ್ವೇತ श्वेत

ಈ ಪದಗಳನ್ನು ಕನ್ನಡದಲ್ಲಿ ಮತ್ತು ಸಂಸ್ಕೃತದಲ್ಲಿ ಬರೆದಿದೆ. ಸಂಸ್ಕೃತದಲ್ಲಿ ಸಂಯುಕ್ತಾಕ್ಷರಗಳನ್ನು ಬರೆದಿರುವುದು ಉಚ್ಚಾರಣೆಗೆ ಅನುಸಾರವಾಗಿದೆ; ಆದರೆ ಕನ್ನಡದಲ್ಲಿ ಹಾಗಿಲ್ಲ. ಹೌದೇ? ಯೋಚಿಸಿ."
"ನೀವು ಯಾವಾಗಲೂ ತಲೆ ಬಿಸಿಮಾಡೋ ಹಾಗಿರೋ ವಿಷಯನೇ ಹೇಳ್ತೀರಿ."
"ಓದಿ. ಏನನ್ನಿಸುತ್ತೆ ಹೇಳಿ."
"ಉಂ... ಓದಿದೆ. ನೀವು ಹೇಳುವುದು ನಿಜ. ಸಂಸ್ಕೃತದಲ್ಲಿ ನಾವು ಉಚ್ಚಾರ ಮಾಡೋ ಹಾಗೇ ಬರೆದಿದೆ. ಕನ್ನಡದಲ್ಲಿ ಹಾಗಿಲ್ಲ."
"ಸಂಸ್ಕೃತದಲ್ಲಿ ಮಾತ್ರ ಅಲ್ಲ, ಬಾರತದ ಬೇರೆ ಬಹಳ ಭಾಷೆಗಳಲ್ಲಿ ಸಂಸ್ಕೃತದ ಹಾಗೇ ಬರೆಯೋದು. ಕೇವಲ ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಒತ್ತಕ್ಷರಗಳನ್ನ ಕೆಳಗೆ ಬರೆಯೋದು; ಉಚ್ಚಾರಣೆ ಕ್ರಮ ಅನುಸರಿಸದೇ ಇರುವುದು."
"ಹೌದೇ?"
"ಹೌದು. ಅದಕ್ಕೇ ನಾನು ಹೇಳೋದು ಒತ್ತಕ್ಷರ ಬರೆಯೋದು ಬೇಡ. ಯೋಚಿಸಿ."
"ಉಂ........"
"ಮತ್ತೆ ಸಿಕ್ಕೋಣ"
"ಮತ್ತೆ .... ಪ್ರಶ್ನೆ ಸಮೇತ ಬರ್ತೀರಾ?"
ನಗು.
"ಬೈ"

---------------------------------------------------------------------------------------------------------------------

ಮೇಲಿನ ಸಂಭಾಷಣೆಗಳನ್ನು ಓದಿದ ನಂತರ ಈ ಕೆಳಗೆ ಸಂಯುಕ್ತಾಕ್ಷರಗಳನ್ನು ಕುರಿತು ಕೊಟ್ಟಿರುವ ವಿವರಣೆ ಸ್ಪಷ್ಟವಾಗುತ್ತದೆ:

ಸಂಯುಕ್ತಾಕ್ಷರಗಳು:

ಕನ್ನಡ ಲಿಪಿಯು ಧ್ವನ್ಯಾತ್ಮಕ ಲಿಪಿಯ ಮೂಲಸೂತ್ರಗಳಿಗೆ ಬಹಳ ಹೊಂದುತ್ತದೆ;  ಪ್ರಸ್ತುತ  ಸಂಯುಕ್ತಾಕ್ಷರಗಳನ್ನು ಬರೆಯುವ ರೀತಿಯನ್ನು  ಹೊರತುಪಡಿಸಿ.  ಸಂಯುಕ್ತಾಕ್ಷರದ ಸ್ವರವನ್ನು ಜೋಡಿಸಿದ ಮೊದಲ ವ್ಯಂಜನದ ಚಾಕ್ಷುಷರೂಪ ಗುಣಿತಾಕ್ಷರದಂತೆ ಕಂಡರೂ, ಅದನ್ನು ಉಚ್ಚರಿಸುವಾಗ ಅದು ಗುಣಿತಾಕ್ಷರವೇ ಅಥವಾ ಸಂಯುಕ್ತಾಕ್ಷರದ ಭಾಗವೇ ಎಂಬುದನ್ನು ಮೊದಲು ನೋಡಿ ಆ ಬಳಿಕ ಉಚ್ಚಾರವನ್ನು ನಿರ್ಧರಿಸಬೇಕು.  ಗುಣಿತಾಕ್ಷರವಾದಾಗ ಚಾಕ್ಷುಷರೂಪದಲ್ಲಿರುವಂತೆ ಉಚ್ಚರಿಸಬೇಕು; ಸಂಯುಕ್ತಾಕ್ಷರದ ಮೊದಲ ವ್ಯಂಜನವಾದಾಗ, ಸ್ವರರಹಿತ ಮೂಲವ್ಯಂಜನದಂತೆ ಉಚ್ಚರಿಸಿ ಈ ವ್ಯಂಜನಕ್ಕೆ ಲಗತ್ತಿಸಿರುವ ಸ್ವರವನ್ನು ಸಂಯುಕ್ತಾಕ್ಷರದ ಕೊನೆಯ ವ್ಯಂಜನದ ಜೊತೆ ಬೆರೆಸಲು ಉಳಿಸಿಕೊಳ್ಳಬೇಕು. ಇಂತಹ ಸಾಂದರ್ಭಿಕ ನಿರ್ಣಯ ಅನಪೇಕ್ಷಣೀಯ. ಸಂಯುಕ್ತಾಕ್ಷರಗಳನ್ನು ಬರೆಯುವ ರೀತಿ ಉಚ್ಚಾರಣೆಯ ಅನುಕ್ರಮದಲ್ಲಿ ಇಲ್ಲ. ಸಂಯುಕ್ತಾಕ್ಷರದ ಕೊನೆಯ ವ್ಯಂಜನಕ್ಕೆ ಸೇರಿದ ಸ್ವರವನ್ನು ಸಂಯುಕ್ತಾಕ್ಷರದ ಮೊದಲನೇ ವ್ಯಂಜನಕ್ಕೆ ಲಗತ್ತಿಸುತ್ತೇವೆ. ಇದೊಂದು ವ್ಯತಿಕ್ರಮ. ಇದು ಧ್ವನ್ಯಾತ್ಮಕ ಲಿಪಿಯ ಮೂಲಸೂತ್ರಕ್ಕೆ ಅನುಗುಣವಾಗಿಲ್ಲ. ಈ ದ್ವಂದವೇ ಸಂದಿಗ್ಧಕಾರಕ. ಮನಸ್ಸಿಗೂ ತ್ರಾಸಕರ. ಇಂತಹ ವ್ಯತಿಕ್ರಮಗಳು ಕನ್ನಡ ಲಿಪಿಯನ್ನು ಕಲಿಯುವುದನ್ನು ಕಷ್ಟಕರವನ್ನಾಗಿ ಮಾಡಿವೆ. ಈ ಕುರಿತು ಅವಶ್ಯವಾದ ಗಮನವೇ ಹರಿದಿಲ್ಲ. ಭಾಷಾಮನಶಾಸ್ತ್ರದ ದೃಷ್ಟಿಕೋನದಿಂದ ಇದರ ಅಧ್ಯಯನವಾಗಬೇಕು. ಈ ಬಗ್ಗೆ ಭಾಷಾಮನೋವಿಜ್ಞಾನಿಗಳು ಬೆಳಕು ಚೆಲ್ಲಬೇಕಾಗಿದೆ. ಸಂಯುಕ್ತಾಕ್ಷರಗಳನ್ನು ಸಂಪೂರ್ಣವಾಗಿ ಕೈಬಿಟ್ಟರೆ, ಆಗ ವರ್ಣಗಳ ಮತ್ತು ಗುಣಿತಾಕ್ಷರಗಳ ಶ್ರಾವಣರೂಪಗಳಿಗೂ ಚಾಕ್ಷುಷರೂಪಗಳಿಗೂ ಇರಬೇಕಾದ ಸಂಬಂಧಗಳು ಸಾಂದರ್ಭಿಕವಾಗಿ  ಬದಲಾಗದೇ ಯಾವಾಗಲೂ ಒಂದೇ ತೆರನಾಗಿ ಗಟ್ಟಿಯಾದ ಬೆಸುಗೆಯಂತಿರುತ್ತವೆ; ಮನಸ್ಸಿಗೆ ಸುಲಭವಾಗಿ ನಾಟುತ್ತವೆ. ಯಾವ ದ್ವಂದ್ವವಾಗಲೀ, ಸಂದಿಗ್ಧವಾಗಲೀ ಇರುವುದಿಲ್ಲ. ಉಚ್ಚಾರಣೆಗೆ ಸಾಂದರ್ಭಿಕ ನಿರ್ಣಯಗಳ ಅವಶ್ಯಕತೆಯಂತೂ ಇರುವುದೇ ಇಲ್ಲ. ಬರೆಯುವ ರೀತಿಯೂ ಸಹ ಉಚ್ಚಾರಣೆಯ ಅನುಕ್ರಮದಲ್ಲೇ ಇರುತ್ತದೆ. ಆಗ ಕನ್ನಡ ಲಿಪಿ ಸಂಪೂರ್ಣವಾಗಿ‍ ಧ್ವನ್ಯಾತ್ಮಕ ಲಿಪಿಯಾಗುತ್ತದೆ. ಅಂತಹ ಲಿಪಿಯನ್ನು ಕಲಿಯುವುದು ಸುಲಭವಾಗುತ್ತದೆ. ಅಂತಹ ಲಿಪಿಯಲ್ಲಿ ಬರೆಯುವುದು ಸುಲಭವಾಗುತ್ತದೆ. ಅಂತಹ ಲಿಪಿಯಲ್ಲಿ ಬರೆದಿದ್ದನ್ನು ಓದುವುದು ಸಲೀಸಾಗುತ್ತದೆ; ಓದುವ ವೇಗವೂ ಹೆಚ್ಚುತ್ತದೆ.  ಎಲ್ಲರೂ‍ ಮೆಚ್ಚುವಂತೆ ಆಗುತ್ತದೆ. ಅಂತಹ ಕನ್ನಡ ಲಿಪಿಯು ಮಾದರಿ ಲಿಪಿಯಾಗುತ್ತದೆ.

ಸಂಯುಕ್ತಾಕ್ಷರರಹಿತ ಕನ್ನಡ ಲಿಪಿಯ ಅನುಗತ ಲಾಭಗಳು:

1. ಬೇರೆಲ್ಲಾ ಅಕ್ಷರಗಳಿಗೆ ಹೋಲಿಸಿದರೆ ಸಾಪೇಕ್ಷವಾಗಿ ಸಣ್ಣವಾದ ಒತ್ತಕ್ಷರಗಳನ್ನು ಓದಲು ಶ್ರಮಪಡುವಂತಿಲ್ಲ. ಬರೆಯುವುದೆಲ್ಲಾ ಒಂದೇ ಗಾತ್ರದ ಅಕ್ಷರಗಳಿಂದ ಕೂಡಿರುವುದರಿಂದ ಅದನ್ನು ಓದಲು ಸುಲಭ.

2. ವ್ಯಂಜನಗಳ ಒತ್ತಕ್ಷರಗಳನ್ನು ಮರೆತೇ ಬಿಡಬಹುದು. ಹೊಸದಾಗಿ ಕನ್ನಡ ಕಲಿಯುವರು ಒತ್ತಕ್ಷರಗಳನ್ನು ಕಲಿಯಲೇಬೇಕಾಗಿಲ್ಲ.

3. ಮಕ್ಕಳಿಗೆ ಮತ್ತು ಅನ್ಯ ಭಾಷಿಕರಿಗೆ ಇಂತಹ ಕನ್ನಡ ಲಿಪಿ ಕಲಿಯುವುದು ಸುಲಭ.

ಪಂಪನ ಬನವಾಸಿಯ ವ್‌ಯಾಮೋಹ (v1)

ಪಂಪನ ಬನವಾಸಿಯ ವ್‌ಯಾಮೋಹ
(ಮಹಾಕವಿ ಪಂಪನ ವಿಕ್‌ರಮಾರ್‌ಜುನ ವಿಜಯದ ನಾಲ್‌ಕನೇ ಆಶ್‌ವಾಸದಿಂದ)

ಚಂ||    ಸೊಗಯಿಸಿ ಬಂದ ಮಾಮರನೆ ತಳ್‌ತೆಲವಳ್‌ಳಿಯೆ ಪೂತ ಜಾತಿ ಸಂ|
    ಪಗೆಯೆ ಕುಕಿಲ್‌ವ ಕೋಗಿಲೆಯೆ ಪಾಡುವ ತುಂಬಿಯೆ ನಲ್‌ಲರೊಳ್‌ ಮೊಗಂ|
    ನಗೆಮೊಗದೊಳ್‌ ಪಳಂಚಲೆಯೆ ಕೂಡುವ ನಲ್‌ಲರೆ ನೋೞ್‌ಪೊಡಾವ ಬೆ|
    ಟ್‌ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್‌||        ೪-೨೮

    ಬನವಾಸಿ ದೇಶದೊಳ್‌ - ಬನವಾಸಿ ದೇಶದಲ್‌ಲಿ, ನೋೞ್‌ಪೊಡೆ - ನೋಡಿದರೆ, ಆವ ಬೆಟ್‌ಟುಗಳೊಳಂ - ಯಾವುದೇ ಬೆಟ್‌ಟಗಳಲ್‌ಲಾಗಲೀ, ಆವ ನಂದನವನಂಗಳೊಳಂ - ಯಾವುದೇ ಉದ್‌ಯಾನವನಗಳಲ್‌ಲಾಗಲೀ, ಸೊಗಯಿಸಿ ಬಂದ ಮಾಮರನೆ - ಸೊಗಸಾಗಿ ಬೆಳೆದ ಮಾವಿನ ಮರಗಳೇ, ತಳ್‌ತೆಲೆವಳ್‌ಳಿಯೆ - ದಟ್‌ಟವಾದ ವೀಳ್‌ಯದೆಲೆಯ ಬಳ್‌ಳಿಗಳೇ, ಪೂತ ಜಾತಿ ಸಂಪಗೆಯೆ - ಹೂಬಿಟ್‌ಟ ಒಳ್‌ಳೇ ಜಾತಿಯ ಸಂಪಗೆ ಮರಗಳೇ, ಕುಕಿಲ್‌ವ ಕೋಗಿಲೆಯೆ - ಕುಹೂ ಕುಹೂ ಎಂದು ಹಾಡುವ ಕೋಗಿಲೆಗಳೇ, ಪಾಡುವ ತುಂಬಿಯೆ - ಝೇಂಕರಿಸುವ ದುಂಬಿಗಳೇ, ನಲ್‌ಲರೊಳ್‌ಮೊಗಂ ನಗೆಮೊಗದೊಳ್‌ ಪಳಂಚಲೆಯೆ ಕೂಡುವ ನಲ್‌ಲರೇ - ಮುಖಗಳನ್‌ನು ತಾಗಿಸಿಕೊಂಡು ನಗುವಿನಿಂದ ಕುಳಿತ ಪ್‌ರೇಮಿಗಳೇ (ಕಾಣುವುದು).

೪-೨೮: ಈ ಪದ್‌ಯದಲ್‌ಲಿ ಮಹಾಕವಿ ಪಂಪನು ಬನವಾಸಿ ದೇಶದ ಸೊಬಗನ್‌ನು ವರ್‌ಣಿಸುತ್‌ತಿದ್‌ದಾನೆ: ಬನವಾಸಿ ದೇಶದ ಯಾವುದೇ ಬೆಟ್‌ಟಗಳಲ್‌ಲಾಗಲೀ, ಯಾವುದೇ ಉದ್‌ಯಾನವನಗಳಲ್‌ಲಾಗಲೀ ನೋಡಿದರೆ ನಮಗೆ ಕಾಣಿಸುವುದು - ಸೊಗಸಾದ ಫಲಭರಿತ ಮಾವಿನಮರಗಳೇ, ದಟ್‌ಟವಾಗಿ ಹಬ್‌ಬಿದ ವೀಳ್‌ಯದೆಲೆಯ ಬಳ್‌ಳಿಗಳೇ, ಹೂ ಬಿಟ್‌ಟ ಒಳ್‌ಳೆಯ ಜಾತಿಯ ಸಂಪಗೆ ಮರಗಳೇ, ಕುಹೂ ಕುಹೂ ಎಂದು ಹಾಡುವ ಕೋಗಿಲೆಗಳೇ, ಝೇಂಕರಿಸುವ ದುಂಬಿಗಳೇ ಹಾಗೂ ಮುಖಗಳನ್‌ನು ತಾಗಿಸಿಕೊಂಡು ನಗುವಿನಿಂದ ಕುಳಿತ ಪ್‌ರೇಮಿಗಳೇ.

ಉ||    ಚಾಗದ ಭೋಗದಕ್‌ಕರದ ಗೇಯದ ಗೊಟ್‌ಟಿಯಲಂಪಿನಿಂಪುಗ|
    ಳ್‌ಗಾಗರಮಾದ ಮಾನಸರೆ ಮಾನಸರಂತವರಾಗಿ ಪುಟ್‌ಟಲೇ|
    ನಾಗಿಯುಮೇನೋ ತೀರ್‌ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್‌|
    ಕೋಗಿಲೆಯಾಗಿ ಪುಟ್‌ಟುವುದು ನಂದನದೊಳ್‌ ಬನವಾಸಿ ದೇಶದೊಳ್‌||        ೪-೨೯

ಚಾಗದ - ತ್‌ಯಾಗದ, ಭೋಗದ - ಭೋಗದ, ಅಕ್‌ಕರದ - ವಿದ್‌ಯೆಯ, ಗೇಯದ ಗೊಟ್‌ಟಿಯ - ಸಂಗೀತ ಗೋಷ್‌ಠಿಯ, ಆಲಂಪಿನ - ಸೊಗಸಾದ, ಇಂಪುಗಳಿಗೆ - ಮಾಧುರ್‌ಯಕ್‌ಕೆ, ಆಗರವಾದ - ಆಶ್‌ರಯವಾದ, ಮಾನಸರೇ ಮಾನಸರ್‌ - ಮನುಷ್‌ಯರೇ ಮನುಷ್‌ಯರು, ಅಂತವರಾಗಿ ಪುಟ್‌ಟಲು - ಅಂತಹ ಮನುಷ್‌ಯರಾಗಿ ಹುಟ್‌ಟಲು, ಏನಾಗಿಯುಂ ಏನೋ ತೀರದಪುದೆ - ಏನಾದರೂ ಸಾಧ್‌ಯವಾಗಬಹುದೇ? ತೀರದೊಡೆ - ಹಾಗೆ ಸಾಧ್‌ಯವಾಗದಿದ್‌ದರೂ,  ಮಱಿದುಂಬಿಯಾಗಿ - ಮರಿದುಂಬಿಯಾಗಿ, ಮೇಣ್‌ - ಇಲ್‌ಲವೇ, ಕೋಗಿಲೆಯಾಗಿ ಪುಟ್‌ಟುವುದು - ಕೋಗಿಲೆಯಾಗಿ ಹುಟ್‌ಟಬೇಕು, ಬನವಾಸಿ ದೇಶದೊಳ್‌ - ಬನವಾಸಿ ದೇಶದಲ್‌ಲಿ.

೪-೨೯: ಈ ಪದ್‌ಯದಲ್‌ಲಿ ಮಹಾಕವಿ ಪಂಪನು ಬನವಾಸಿ ದೇಶದ ಬಗ್‌ಗೆ ತನಗಿರುವ ಉತ್‌ಕಟ ವ್‌ಯಾಮೋಹವನ್‌ನು ಬಣ್‌ಣಿಸಿದ್‌ದಾನೆ: ತ್‌ಯಾಗಕ್‌ಕೆ, ಭೋಗಕ್‌ಕೆ, ವಿದ್‌ಯೆಗೆ, ಸಂಗೀತ ಸಭೆಗಳ ಮಾಧುರ್‌ಯಕ್‌ಕೆ ಆಕರವಾದ ಮನುಷ್‌ಯರೇ ಮನುಷ್‌ಯರು. ಅಂತಹ ಮನುಷ್‌ಯರಾಗಿ ಏನಾದರೂ ಹುಟ್‌ಟಲು ಸಾಧ್‌ಯವೇ? ಹಾಗೆ ಸಾಧ್‌ಯವಾಗದಿದ್‌ದರೆ, ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಹುಟ್‌ಟಬೇಕು ಬನವಾಸಿ ದೇಶದಲ್‌ಲಿ.

ಉ||    ತೆಂಕಣ ಗಾಳಿ ಸೋಂಕಿದೆಡಮೊಳ್‌ನುಡಿಗೇಳ್‌ದೊಡಮಿಂಪನಾಳ್‌ದ ಗೇ|
    ಯಂ ಕಿವಿವೊಕ್‌ಕೊಡಂ ಬಿರಿದ ಮಲ್‌ಲಿಗೆಗಂಡೊಡಮಾದಲಂಪಲಂ|
    ಪಂ ಗೆಡೆಗೊಂಡೊಡಂ ಮಧುಮಹೋತ್‌ಸವಮಾದೊಡಮೇನನಂಬೆನಾ|
    ರಂಕುಸವಿಟ್‌ಟೊಡಂ ನೆನೆವುದೆನ್‌ನ ಮನಂ ಬನವಾಸಿ ದೇಶಮಂ||            ೪-೩೦

    ತೆಂಕಣ ಗಾಳಿ ಸೋಂಕಿದೊಡಂ - ದಕ್‌ಷಿಣ ದಿಕ್‌ಕಿನಿಂದ ಬೀಸುವ (ಹಿತವಾದ) ಗಾಳಿ ಸೋಕಿದರೂ, ಒಳ್‌ನುಡಿಗೇಳ್‌ದೊಡಂ - ಒಳ್‌ಳೆಯ ಮಾತುಗಳನ್‌ನು ಕೇಳಿದರೂ, ಇಂಪನಾಳ್‌ದ ಗೇಯಂ ಕಿವಿವೊಕ್‌ಕಡಂ - ಇಂಪಾದ ಗಾನ ಕಿವಿಗೆ ಬಿದ್‌ದರೂ, ಬಿರಿದ ಮಲ್‌ಲಿಗೆಗಂಡೊಡಂ - ಅರಳಿದ ಮಲ್‌ಲಿಗೆಯನು ಕಂಡರೂ, ಆದ ಅಲಂಪಲಂಪಂ ಗೆಡೆಗೊಂಡೊಡಂ - ಎರಡು ಪ್‌ರೀತಿಗಳು ಸೇರಿದರೂ, ಮಧುಮಹೋತ್‌ಸವಮಾದೊಡಂ - ವಸಂತೋತ್‌ಸವವಾದರೂ, ಏನನಂಬೆನು - ಏನು ಹೇಳಲಿ, ಆರಂಕುಸವಿಟ್‌ಟೊಡಂ - ಯಾರೇ ಅಡ್‌ಡಿಪಡಿಸಿದರೂ, ನೆನೆವುದೆನ್‌ನ ಮನಂ ಬನವಾಸಿ ದೇಶಮಂ - ನನ್‌ನ ಮನಸ್‌ಸ ಬನವಾಸಿ ದೇಶವನ್‌ನೇ ನೆನೆಯುತ್‌ತದೆ.

೪-೩೦: ಈ ಪದ್‌ಯದಲ್‌ಲಿ ಮಹಾಕವಿ ಪಂಪನು ಬನವಾಸಿ ದೇಶದ ಬಗ್‌ಗೆ ತನಗಿರುವ ಉತ್‌ಕಟ ವ್‌ಯಾಮೇಹವನ್‌ನು ಮತ್‌ತೊಮ್‌ಮೆ ಮನೋಜ್‌ಞವಾಗಿ ಬಣ್‌ಣಿಸಿದ್‌ದಾನೆ: ದಕ್‌ಷಿಣ ದಿಕ್‌ಕಿನಿಂದ ಹಿತವಾಗಿ ಬೀಸುವ ಗಾಳಿ ಸೋಕಿದರೂ, ಒಳ್‌ಳೆಯ ಮಾತುಗಳನ್‌ನು ಕೇಳಿದರೂ, ಇಂಪಾದ ಗಾನ ಕಿವಿಗೆ ಬಿದ್‌ದರೂ, ಅರಳಿದ ಮಲ್‌ಲಿಗೆಯನ್‌ನು ಕಂಡರೂ, ಎರಡು ಪ್‌ರೀತಿಗಳು ಸೇರಿದರೂ, ವಸಂತೋತ್‌ಸವಾದರೂ, ಏನು ಹೇಳಲಿ? ಯಾರೇ ಅಡ್‌ಡಿಪಡಿಸಿದರೂ, ನನ್‌ನ ಮನಸ್‌ಸು ಬನವಾಸಿ ದೇಶವನ್‌ನೇ ನೆನೆಯುತ್‌ತದೆ.

ಕಾಫಿ ಕಪ್‌‌ನ ತಳದಲ್‌ಲಿ ಏನಿತ್‌ತು? (v1)

ರಾತ್‌ರಿ ಎಂಟು ಗಂಟೆ ಸಮಯ. ಟೀವಿ ನೋಡುತ್‌ತಾ ಕುಳಿತಿದ್‌ದೆ. ಕನ್‌ನಡ ಚಾನೆಲ್‌ ಒಂದರಲ್‌ಲಿ ಜೀವನದ ಕುತೂಹಲಕರ ವಿಷಯಗಳನ್‌ನು ಕುರಿತಂತೆ ಕಾರ್‌ಯಕ್‌ರಮವೊಂದು ಬರುತ್‌ತಿತ್‌ತು. ಸೋಮವಾರದಿಂದ ಶುಕ್‌ರವಾರದ ವರೆಗೆ ದಿನಾ ಬರುತ್‌ತಿದ್‌ದ ಕಾರ್‌ಯಕ್‌ರಮ ಅದು. ಸುಪ್‌ರಸಿಧ ವ್‌ಯಕ್‌ತಿಯೊಬ್‌ಬರು ನಿರೂಪಕಿಯಾಗಿ ನಡೆಸಿಕೊಡುತ್‌ತಿದ್‌ದರು. ಎಂದಿನಂತೆ ಆಕೆ ಸ್‌ಟೇಜ್‌‌ನ ಹಿಂದಿನಿಂದ ಪ್‌ರವೇಶಿಸಿ ಸ್‌ಟೇಜ್‌ ಮಧ್‌ಯದಲ್‌ಲಿ ನಿಂತು ಪ್‌ರೇಕ್‌ಷಕರಿಗೆ ಕೈ ಮುಗಿದು ಮುಗುಳ್‌ನಗೆಯಿಂದ ಕಾರ್‌ಯಕ್‌ರಮವನ್‌ನು ಆರಂಭಿಸಿದರು. "ಪ್‌ರತಿದಿನ ನಾವು ನೋಡಿತ್‌ತಾ ಇದ್‌ದೇವೆ ಜೀವನ ಎಷ್‌ಟೊಂದು ರೋಮಾಂಚಕ, ಕುತೂಹಲಕರ ಆಗಿರುತ್‌ತೆ ಅಂತ. ಇಂದು ಭವಿಷ್‌ಯ ಹೇಳುವ ಕುರಿತು ಕಾರ್‌ಯಕ್‌ರಮ ಇದೆ. ಭವಿಷ್‌ಯ ಹೇಳೋದು ನಿಜವಾಗಿರುತ್‌ತಾ? ಅಥವಾ ಅದು ಸುಳ್‌ಳಾ? ಈ ಅನುಮಾನ ಎಷ್‌ಟೋ ಸಾರಿ ನಮಗೆ ಬಂದಿರುತ್‌ತೆ. ಕೆಲವರು ಹೇಳುತ್‌ತಾರೆ ''ಭವಿಷ್‌ಯ ಹೇಳೋರು ಸರಿಯಾಗಿ ಹೇಳಿದರೆ ಅದು ನಿಜವಾಗುತ್‌ತೆ.'' ಈ ಬಗ್‌ಗೆ ನಮಗೆ ತಿಳಿಸೋದಕ್‌ಕೆ ಇಬ್‌ಬರು ವ್‌ಯಕ್‌ತಿಗಳು ಇಲ್‌ಲಿಗೆ ಬಂದಿದ್‌ದಾರೆ. ಮೇಡಂ ಬನ್‌ನಿ." ಎಂದು ಸ್‌ಟೇಜ್‌ ಹಿಂದೆ ನೋಡುತ್‌ತಾ ಕರೆದರು. ಸ್‌ಟೇಜ್‌‌ನ ಹಿಂದಿನಿಂದ ಪ್‌ರವೇಶಿಸಿದ ಮಹಿಳೆಯೊಬ್‌ಬರು ಪ್‌ರೇಕ್‌ಷಕರಿಗೆ ಕೈ ಮುಗಿದು ಮುಗುಳ್‌ನಗೆ ಬೀರುತ್‌ತಾ ನಿಂತರು. ಆಕೆಯತ್‌ತ ಕೈ ತೋರಿಸುತ್‌ತಾ ನಿರೂಪಕಿಯವರು "ಇವರು ವಿದೇಶದವರು. ಈಗ ಬೆಂಗಳೂರಿನಲ್‌ಲೇ ಇದ್‌ದಾರೆ. ಸೇವಾಸಂಘವೊಂದನ್‌ನು ನಡೆಸುತ್‌ತಿದ್‌ದಾರೆ. ವೆಲ್‌‌ಕಂ. ಬನ್‌ನಿ. ಕುಳಿತುಕೊಳ್‌ಳಿ." ಎಂದು ಅಲ್‌ಲಿದ್‌ದ ಕುರ್‌ಚಿಯತ್‌ತ ಕೈ ತೋರಿಸಿದರು. ಆಕೆ ತನಗೆ ತೋರಿಸಿದ ಕುರ್‌ಚಿಯಲ್‌ಲಿ ಕುಳಿತರು.

    ನಿರೂಪಕಿಯವರು ಮುಂದುವರೆಸುತ್‌ತಾ, "ಮತ್‌ತೊಬ್‌ಬರು ಇಲ್‌ಲಿಯವರು. ಉತ್‌ತರ ಕರ್‌ನಾಟಕದವರು. ಬನ್‌ನಿ ಸ್‌ವಾಮಿಗಳೇ." ಎಂದು ಸ್‌ಟೇಜ್‌ ಹಿಂದೆ ನೋಡುತ್‌ತಾ ಕರೆದರು. ಒಬ್‌ಬ ಯುವಕ ಹಿಂದಿನಿಂದ ಸ್‌ಟೇಜ್‌‌ನ ಒಳಕ್‌ಕೆ ಕಾವಿ ಬಣ್‌ಣದ ಉಡುಪು ಧರಿಸಿದ್‌ದ ವಯಸ್‌ಸಾದವರೊಬ್‌ಬರನ್‌ನು ಕೈ ಹಿಡಿದುಕೊಂಡು ನಿಧಾನವಾಗಿ ಕರೆದುಕೊಂಡು ಬಂದ. ಅವರಿಗೆ ಕಣ್‌ಣು ಕಾಣುತ್‌ತಿರಲ್‌ಲಿಲ್‌ಲವೆಂದು ಗೊತ್‌ತಾಗುತ್‌ತಿತ್‌ತು. "ನೀವಿಬ್‌ಬರೂ ಅಲ್‌ಲಿ ಕುಳಿತುಕೊಳ್‌ಳಿ." ಎಂದು ಕುಳಿತುಕೊಳ್‌ಳಲು ನಿರೂಪಕಿಯವರು ಸೂಚಿಸಿದರು. ಅವರಿಬ್‌ಬರೂ ಕುಳಿತ ನಂತರ ನಿರೂಪಕಿಯವರು ಪ್‌ರೇಕ್‌ಷಕರನ್‌ನು ನೋಡುತ್‌ತಾ ಹೇಳತೊಡಗಿದರು, "ಇವರು ತಮ್‌ಮ ಮನೆಯ ಹತ್‌ತಿರದ ಆಶ್‌ರಮಕ್‌ಕೆ ಸೇರಿದ ದೇವಸ್‌ಥಾನದ ಮುಂದಿನ ಅರಳೀಕಟ್‌ಟೆಯ ಮೇಲೆ ಕುಳಿತು ಧ್‌ಯಾನಾಸಕ್‌ತರಾಗಿ ಬಂದವರ ಪ್‌ರಶ್‌ನೆಗಳನ್‌ನು ಕೇಳಿ ಭವಿಷ್‌ಯ ನುಡಿಯುತ್‌ತಾರೆ. ಬಹಳ ಜನ ಇವರ ಬಳಿ ಬರುತ್‌ತಾರೆ. ಇವರ ಬಗ್‌ಗೆ ಅಲ್‌ಲಿಯ ಜನಗಳಿಗೆ ಬಹಳ ನಂಬಿಕೆ. ಇವರು ವಾರದಲ್‌ಲಿ ಎರಡು ದಿನ ಮಾತ್‌ರ ಭವಿಷ್‌ಯ ಹೇಳುವುದು. ಕೆಲವೊಮ್‌ಮೆ ದೈವಪ್‌ರೇರಣೆ ಆಗದಿದ್‌ದರೆ ಅಂದು ಭವಿಷ್‌ಯ ಹೇಳುವುದಿಲ್‌ಲ. ಸ್‌ಟೇಜ್‌‌ನ ಈ ಕಡೆ ನೋಡಿ ಆಡಿಯನ್‌ಸ್‌ ಕುಳಿತಿದ್‌ದಾರೆ. ಆಡಿಯನ್‌ಸ್‌‌ನಲ್‌ಲಿ ಯಾರು ಬೇಕಾದರೂ ಇವರಿಬ್‌ಬರನ್‌ನು ಪ್‌ರಶ್‌ನೆ ಕೇಳಬಹುದು. ತಮ್‌ಮ ಭವಿಷ್‌ಯ ತಿಳಿದುಕೊಳ್‌ಳಬಹುದು. ಈಗ ಕಾರ್‌ಯಕ್‌ರಮ ಆರಂಭಿಸೋಣ." ಎಂದು ಹೇಳಿದರು.

    "ಮೊದಲಿಗೆ ಸ್‌ವಾಮೀಜಿಯವರಿಂದ ಪ್‌ರಾರಂಭಿಸೋಣ. ಸ್‌ವಾವೀಜಿ ನಿಮಗೆ ಇಲ್‌ಲಿ ಇರುವ ಆಡಿಯನ್‌ಸ್‌ ಪ್‌ರಶ್‌ನೆ ಕೇಳುತ್‌ತಾರೆ. ನೀವು ಅವರ ಪ್‌ರಶ್‌ನೆಗಳಿಗೆ ಉತ್‌ತರ ಕೊಡುತ್‌ತೀರಾ. ಆಗಬಹುದಾ?" ಎಂದು ನಿರೂಪಕಿಯವರು ಕೇಳಿದರು. ಅದಕ್‌ಕೆ ಸ್‌ವಾಮೀಜಿಯವರು ಹೇಳಿದರು, "ಯಾರು ಬೇಕಾದರೂ ನನ್‌ನ ಪ್‌ರಶ್‌ನೆ ಕೇಳಬಹುದು. ನಾನು ಉತ್‌ತರ ಹೇಳುತ್‌ತೇನೆ. ಆದರೆ ಇಲ್‌ಲಲ್‌ಲ. ನಮ್‌ಮ ಆಶ್‌ರಮದ ದೇವಸ್‌ಥಾನದ ಮುಂದಿನ ಅರಳೀಕಟ್‌ಟೆಯಲ್‌ಲಿ ನಾನು ಕುಳಿತಾಗ ಮಾತ್‌ರ. ಅಲ್‌ಲಿ ಮಾತ್‌ರವೇ ನನಗೆ ಪ್‌ರೇರಣೆ ಆಗೋದು." ಇದನ್‌ನು ಕೇಳಿದ ನಿರೂಪಕಿಯವರು "ಸ್‌ವಾಮೀಜಿ ನಿಮ್‌ಮನು ಇಲ್‌ಲಿಗೆ ಕರೆಸಿದ್‌ದು ಈಗ ಇಲ್‌ಲಿ ಟೀವಿಯಲ್‌ಲಿ ಆಡಿಯನ್‌ಸ್‌ ಪ್‌ರಶ್‌ನೆಗಳಿಗೆ ಉತ್‌ತರ ಕೊಡಲಿ ಅಂತ." "ಅದೆಲ್‌ಲಾ ಆಗೋಲ್‌ಲ. ನನಗೆ ಇಲ್‌ಲಿ ಪ್‌ರೇರಣೆ ಆಗೋಲ್‌ಲ. ಪ್‌ರಶ್‌ನೆ ಕೇಳೋರು ಆಶ್‌ರಮಕ್‌ಕೇ ಬರಬೇಕು", ಎಂದು ಖಡಖಂಡಿತವಾಗಿ ಹೇಳಿದರು.  ಆಗ ನಿರೂಪಕಿಯವರು ಆ ಸ್‌ವಾಮೀಜಿಯವರನ್‌ನು ಕರೆತಂದಿದ್‌ದ ಯುವಕನನ್‌ನು ಕೇಳಿದರು, "ಏನ್‌ರೀ ಇದು? ಪ್‌ರಶ್‌ನೆಗಳಿಗೆ ಉತ್‌ತರ ಹೇಳೋದಿಕ್‌ಕೆ ತಾನೇ ಇವರನ್‌ನು ಇಲ್‌ಲಿ ಕರೆಸಿದ್‌ದು?" ಅದಕ್‌ಕೆ ಆ ಯುವಕ "ಮೇಡಂ, ನಿಮ್‌ಮ ಟೀವಿಯವರು ನಮ್‌ಮ ಊರಿಗೆ ಬಂದಿದ್‌ದಾಗ ಸ್‌ವಾಮೀಜಿ ಬಗ್‌ಗೆ ಎಲ್‌ಲಾ ವಿಚಾರಿಸಿಕೊಂಡು ಬಂದಿದ್‌ದಾರೆ. ಅವರು ಬಂದಿದ್‌ದಾಗ ಎಷ್‌ಟೊಂದು ಜನ ಇದ್‌ದರು. ಅವರನ್‌ನೇ ಕೇಳಿ. ಟೀವಿಯವರಿಗೆ ಸ್‌ಪಷ್‌ಟವಾಗಿ ಹೇಳಿದ್‌ದೇವೆ ಸ್‌ವಾಮೀಜಿಯವರು ಅವರ ಸ್‌ವಸ್‌ಥಾನದಲ್‌ಲಿ ಮಾತ್‌ರ ಪ್‌ರಶ್‌ನೆಗಳಿಗೆ ಉತ್‌ತರಿಸುವುದು ಅಂತ. ಸ್‌ಥಳ ಮಹಾತ್‌ಮೆ ಅಂತಾ ಇರೋಲ್‌ಲವಾ ಮೇಡಂ? ಧರ್‌ಮಸ್‌ಥಳ, ತಿರುಪತಿ ಅಂತಾ ಯಾಕೆ ಹೋಗ್‌ತೀವಿ?" ಎಂದ. ನಿರೂಪಕಿಯವರು ಏನು ಹೇಳುವುದು ಎಂದು ಯೋಚಿಸುತ್‌ತಿರುವಾಗಲೇ, ಆಡಿಯನ್‌ಸ್‌‌ನಲ್‌ಲಿ ಒಬ್‌ಬಾತ ಎದ್‌ದು ನಿಂತು "ಮೇಡಂ", ಎನ್‌ನುತ್‌ತಾ ಬಲಗೈಯನ್‌ನು ಮೇಲೆತ್‌ತಿದ. "ನಾನು ಮಾತನಾಡಬಹುದಾ ಮೇಡಂ?" ಎಂದು ಕೇಳಿದ. "ಸರಿ ಮಾತಾಡಿ. ಏನು ಹೇಳಬೇಕೂಂತ ಇದ್‌ದೀರಿ?" ಎಂದರು ನಿರೂಪಕಿಯವರು. "ಮೇಡಂ, ನನ್‌ನ ಹೆಸರು ರವಿ. ಇವರ ಆಶ್‌ರಮಕ್‌ಕೆ 6 ಕಿಲೋಮೀಟರ್‌ ದೂರದಲ್‌ಲಿ ನಮ್‌ಮ ಹಳ್‌ಳಿ ಇರೋದು. ಹೋದ ವರ್‌ಷ ನಾವು ಈ ಸ್‌ವಾಮೀಜಿಯವರನ್‌ನು ಪ್‌ರಶ್‌ನೆ ಕೇಳೋಕೆ ಹೋಗಿದ್‌ವಿ. ನಮ್‌ಮ ಮನೆಯ ಎತ್‌ತು ಕಳೆದು ಹೋಗಿತ್‌ತು. ಆಗ ನಮ್‌ಮ ಸೋದರಮಾವ, ಇಲ್‌ಲಿ ನನ್‌ನ ಪಕ್‌ಕ ಕುಳಿತಿದ್‌ದಾರಲ್‌ಲ ಇವರು, ''ಈ ಸ್‌ವಾಮೀಜಿ ಬಗ್‌ಗೆ ಕೇಳಿದ್‌ದೇನೆ. ಅವರು ಬಹಳ ಸರಿಯಾಗಿ ಹೇಳುತ್‌ತಾರಂತೆ. ಹೋಗಿ ಕೇಳಿ ನೋಡಿ.'' ಎಂದು ನಮ್‌ಮನ್‌ನು ಇವರ ಹತ್‌ತಿರ ಕಳುಹಿಸಿದರು. ಆದರೆ ಅವರು ಹೇಳಿದ್‌ದು ನಿಜವಾಗಲಿಲ್‌ಲ. ನಮ್‌ಮ ಎತ್‌ತು ಸಿಕ್‌ಕಲೇ ಇಲ್‌ಲ." ಎಂದು ಆತ ಹೇಳಿದ. "ಹಾಗಾದರೆ ಅವರಿಂದ ನಿಮಗೆ ಮೋಸ ಆಯಿತು ಅಂತೀರಾ?" ಎಂದು ನಿರೂಪಕಿಯವರು ಅವನನ್‌ನು ಕೇಳಿದರು. ಆ ಯುವಕ ಏನೋ ಹೇಳಲು ಬಾಯಿ ತೆಗೆದ. ಆಷ್‌ಟರಲ್‌ಲಿ ಆ ಯುವಕನ ಸೋದರಮಾವ ಆತನ ಕೈ ಹಿಡಿದು ಎಳೆದು ಕೂಡಿಸಿ, ಸುಮ್‌ಮನಿರಲು ಸನ್‌ನೆ ಮಾಡಿ, ತಾನು ಎದ್‌ದು ನಿಂತು ನಿರೂಪಕಿಯವರ ಪ್‌ರಶ್‌ನೆಗೆ ತಾನೇ ಉತ್‌ತರ ಹೇಳಿದ. "ಮೋಸ ಅಂತ ಇವರ ಬಗ್‌ಗೆ ಹೇಳೋಕೆ ನನಗೆ ಮನಸ್‌ಸು ಬರ್‌ತಾ ಇಲ್‌ಲ ಮೇಡಂ. ಅವರು ನಮ್‌ಮಿಂದ ಹಣ ತೆಗೆದುಕೊಳ್‌ಳಲಿಲ್‌ಲ. ಏನಾದರೂ ಕೊಡುವುದಿದ್‌ದರೆ ಆಶ್‌ರಮಕ್‌ಕೆ ಕೊಡಿ ಎಂದರು. ನಾವು ಕೇಳುವ ಪ್‌ರಶ್‌ನೆಗೆ ಅವರು ತಮಗೆ ಅನ್‌ನಿಸಿದ್‌ದನ್‌ನು ಪ್‌ರಾಮಾಣಿಕವಾಗಿ ಹೇಳುತ್‌ತಾರೆ. ಕೆಲವರಿಗೆ ನಿಜ ಆಗಿದೆ. ಕೆಲವರಿಗೆ ಇಲ್‌ಲ. ಎನು ಮಾಡೋಕೆ ಆಗುತ್‌ತೆ?" ಆಗ ನಿರೂಪಕಿಯವರು ಆ ಯುವಕ ರವಿಯ ಸೋದರಮಾವ ಅವರನ್‌ನು ಕುಳಿತುಕೊಳ್‌ಳಲು ಹೇಳಿ, ಪ್‌ರೇಕ್‌ಷಕರ ಕಡೆ ತಿರುಗಿ ಹೇಳತೊಡಗಿದರು, "ಇವರನ್‌ನು ನೋಡಿ. ಈ ಸ್‌ವಾಮೀಜಿಯವರು ಇವರ ಪ್‌ರಶ್‌ನೆಗೆ ಸರಿಯಾಗಿ ಹೇಳದಿದ್‌ದರೂ, ಅವರನ್‌ನು ದೂರಲಿಲ್‌ಲ. ಏಕೆಂದರೆ ಈ ಸ್‌ವಾಮೀಜಿಯವರು ಮೋಸಮಾಡುವವರಲ್‌ಲ. ಅವರು ತಮಗೆ ಪ್‌ರೇರಣೆಯಾದುದ್‌ದನ್‌ನು ಪ್‌ರಾಮಾಣಿಕವಾಗಿ ಹೇಳುತ್‌ತಾರೆ. ನಿಜ. ಆದರೆ ಈ ಜ್‌ಯೋತಿಷಿಗಳಲ್‌ಲಿ ಬಹಳ ಜನ ಮೋಸಮಾಡುವವರು ಇದ್‌ದಾರೆ. ನನ್‌ನ ಅನುಭವಾನೇ ಹೇಳುತ್‌ತೇನೆ. ಕೇಳಿ" ಎಂದು ಮುಂದುವರಿಸಿದರು. "ಕೆಲವು ವರ್‌ಷಗಳ ಹಿಂದೆ ಒಂದು ದಿನ. ನನ್‌ನ ಮಗಳು ಇದ್‌ದಕ್‌ಕಿದಂತೆ ಕಾಣೆಯಾದಳು. ಬಹಳ ಗಾಬರಿ ಆಯಿತು. ಸ್‌ನೇಹಿತರ ಮನೆಗೆಲ್‌ಲಾ ಫೋನ್‌ ಮಾಡಿದೆ. ನೆಂಟರ ಮನೆಗೆಲ್‌ಲಾ ಫೋನ್‌ ಮಾಡಿದೆ. ಅವಳು ಓದುತ್‌ತಿದ್‌ದ ಕಾಲೇಜಿನಲ್‌ಲೂ ವಿಚಾರಿಸಿದೆ. ಅವಳು ಹೋಗುತ್‌ತಿದ್‌ದ ಎಲ್‌ಲಾ ಕಡೆ ವಿಚಾರಿಸಿದೆ. ಅವಳ ಸುದ್‌ದೀನೇ ಇಲ್‌ಲ. ಸಾಕಷ್‌ಟು ಅತ್‌ತೆ. ತುಂಬಾ ದುಃಖ ಆಯಿತು. ನನಗೆ ದಿಕ್‌ಕೇ ತೋಚಲಿಲ್‌ಲ. ಏನು ಮಾಡಬೇಕು? ಎಲ್‌ಲಿದ್‌ದಾಳೆ? ದೇವರಿಗೆ ಹರಕೆ ಹೊತ್‌ತೆ."

    "ನನ್‌ನ ಹಿತೈಷಿಯೊಬ್‌ಬರು ಬೆಂಗಳೂರಿನಲ್‌ಲಿರುವ ಒಬ್‌ಬ ಜ್‌ಯೋತಿಷಿಯ ಅಡ್‌ರಸ್‌ ಕೊಟ್‌ಟು ಅವರನ್‌ನ ಕಾಣೋದಕ್‌ಕೆ ಹೇಳಿದರು. ಸಿನಿಮಾತಾರೆಯರು, ರಾಜಕಾರಿಣಿಗಳು ಬಹಳ ಜನ ಅವರ ಸಲಹೆ ತಗೋತಾರೆ ಅಂದರು. ಅವರಿಂದ ನನ್‌ನ ಸಮಸ್‌ಯೆಗೆ ಪರಿಹಾರ ಸಿಕ್‌ಕಬಹುದು ಅಂತಾ ಅವರನ್‌ನು ನೋಡಿದೆ. ಅವರು ನನ್‌ನ ಸಮಸ್‌ಯೆಯನ್‌ನು ಕೇಳಿ, ನನ್‌ನ ಮಗಳ ಜಾತಕ ಇದೆಯಾ ಎಂದು ಕೇಳಿದರು. ನನ್‌ನಲ್‌ಲಿ ಆಗ ನನ್‌ನ ಮಗಳ ಜಾತಕ ಇರಲಿಲ್‌ಲ. ಅವಳು ಹುಟ್‌ಟಿದ ಜಾಗ, ಸಮಯ ತಿಳಿದುಕೊಂಡು ತಮ್‌ಮ ಲ್‌ಯಾಪ್‌‌ಟಾಪ್‌‌ನಲ್‌ಲಿ ನನ್‌ನ ಮಗಳ ಜಾತಕ ತೆಗೆದು ನೋಡಿದರು. ನಿಮ್‌ಮ ಮಗಳಿಗೆ ಈಗ ಸಮಯ ಚೆನ್‌ನಾಗಿಲ್‌ಲ. ದುಷ್‌ಟಗ್‌ರಹಗಳ ಕಾಟದಿಂದ ಅವಳಿಗೆ ಹೀಗಾಗಿದೆ. ನೀವು ಈ ದುಷ್‌ಟಗ್‌ರಹಗಳ ಶಾಂತಿಗಾಗಿ ಹೋಮ ಹವನ ಮಾಡಬೇಕು. ಆಗ ನಿಮ್‌ಮ ಮಗಳಿಗೆ ದುಷ್‌ಟಗ್‌ರಹಗಳಿಂದ ಬಿಡುಗಡೆ ಸಿಗುತ್‌ತದೆ. ನಿಮ್‌ಮ ಮಗಳು ವಾಪಸ್‌ ಬರುತ್‌ತಾಳೆ. ನಿಮ್‌ಮ ಎಲ್‌ಲಾ ಸಮಸ್‌ಯೆ ಬಗೆಹರಿಯುತ್‌ತೆ ಎಂದು ಹೇಳಿದರು. ನನ್‌ನ ಮಗಳು ನನಗೆ ಸಿಕ್‌ಕಿದರೆ ಸಾಕು ಅಂತಾ ಹಾತೊರೆಯುತ್‌ತಿದ್‌ದ ನಾನು ಅವರು ಹೇಳಿದ್‌ದನೆಲ್‌ಲಾ ಮಾಡಿಸಿದೆ. ಆ ಪೂಜೆ, ಈ ಹೋಮ, ಹವನ, ಶಾಂತಿ ಅಂತೆಲ್‌ಲಾ ಸಾಕಷ್‌ಟು ಖರ್‌ಚು ಮಾಡಿಸಿದ. ನಾನಿದ್‌ದ ಪರಿಸ್‌ಥಿತಿ ಮತ್‌ತು ಈಕೆ ಖರ್‌ಚು ಮಾಡುತ್‌ತಾರೆ ಎಂದು ಅವನು ಲೆಕ್‌ಕ ಹಾಕಿದ್‌ದ ಅಂತ ಕಾಣುತ್‌ತೆ. ನೀವು ನಂಬುತ್‌ತೀರೋ ಇಲ್‌ಲವೋ ಹನ್‌ನೆರಡು ಲಕ್‌ಷದ ಮೇಲೆ ಖರ್‌ಚು ಮಾಡಿಸಿದ." ಎಂದು ನಿರೂಪಕಿಯವರು ಹೇಳಿದರು.

    "ಹೋಗಲಿ, ನಿಮ್‌ಮ ಮಗಳು ನಿಮಗೆ ಸಿಕ್‌ಕಿದರಾ ಮೇಡಂ?" ಎಂದು ಆಡಿಯನ್‌ಸ್‌‌ನಲ್‌ಲಿ ಒಬ್‌ಬರು ಕೇಳಿದರು.

    "ಇಲ್‌ಲಾ ರೀ. ಆ ಜ್‌ಯೋತಿಷಿಯಿಂದ ಏನೂ ಆಗಲಿಲ್‌ಲ. ಸುಮ್‌ಮನೆ ದುಡ್‌ಡು ಕಳಕೊಂಡೆ", ಎಂದರು ನಿರೂಪಕಿಯವರು.

    "ಆ ಜ್‌ಯೋತಿಷೀನಾ ಸುಮ್‌ಮನೆ ಬಿಟ್‌ರಾ ಮೇಡಂ?" ಆಡಿಯನ್‌ಸ್‌ ಪ್‌ರಶ್‌ನೆ.

    "ಏನ್‌ರೀ ಮಾಡೋದು? ಅವನೇನು ಹಣ ತಗೊಂಡಿದ್‌ದಕ್‌ಕೆ ರಶೀದಿ ಕೊಟ್‌ಟಿದ್‌ದಾನಾ?", ಎಂದು ಸುಮ್‌ಮನಾದರು ನಿರೂಪಕಿಯವರು.

    ಅಷ್‌ಟರಲ್‌ಲಿ ಟೀವಿ ಸಿಬ್‌ಬಂದಿಯವರು ಎಲ್‌ಲರಿಗೂ ಕಾಫೀ ಕೊಡಲು ವೇದಿಕೆಯನ್‌ನು ಪ್‌ರವೇಶಿಸಿದರು. ತನ್‌ನದೇ ಶೈಲಿಯಲ್‌ಲಿ ಭವಿಷ್‌ಯ ಹೇಳೋಕೆ ಬಂದಿದ್‌ದ ವಿದೇಶಿ ಮಹಿಳೆಯು ತನ್‌ನ ಸ್‌ಥಾನದಿಂದ ಎದ್‌ದು ಎಲ್‌ಲರಿಗೂ ಕಾಫಿ ಕೊಡುತ್‌ತಿದವರ ಹತ್‌ತಿರ ಹೋದಳು. ಅವಳ ಕೈಯಲ್‌ಲಿ ಒಂದು ಕಪ್‌ ಇತ್‌ತು. ಅದಕ್‌ಕೆ ಕಾಫಿ ಹಾಕಿಸಿಕೊಂಡಳು. ಆ ಕಾಫಿ ತುಂಬಿದ ಕಪ್‌ಪನ್‌ನು ತಂದು ನಿರೂಪಕಿಯವರಿಗೆ ಕೊಟ್‌ಟು, "ನನ್‌ನ ಕೈಯಾರೆ ನಿಮಗೆ ಕಾಫಿ. ತಗೊಳ್‌ಳಿ." ಎಂದು ಕೊಟ್‌ಟಳು. ನಿರೂಪಕಿಯವರು ಆಕೆಯು ತಾನೇ ಕೈಯಾರೆ ಕಾಫಿ ತಂದು ಕೊಟ್‌ಟದ್‌ದಕ್‌ಕೆ ಮೆಚ್‌ಚಿ ಮುಗುಳ್‌ನಕ್‌ಕು ಆ ಕಪ್‌ಪನ್‌ನು ತೆಗೆದುಕೊಂಡರು. ವಿದೇಶಿ ಮಹಿಳೆ ತನ್‌ನ ಜಾಗಕ್‌ಕೆ ಹೋಗಿ ಕುಳಿತಳು. ಎಲ್‌ಲರಿಗೂ ಕಾಫಿ ಸರಬರಾಜಾಯಿತು. ಎಲ್‌ಲರೂ ತಮ್‌ಮತಮ್‌ಮಲಿ ಮಾತನಾಡಿಕೊಳ್‌ಳುತ್‌ತಾ ಕಾಫಿ ಕುಡಿದರು.

    "ಎಲ್‌ಲರೂ ಕಾಫಿ ಕುಡಿದಾಯಿತಾ? ಇನ್‌ನು ಪ್‌ರೋಗ್‌ರಾಂ ಮುಂದುವರಿಸೋಣ" ಎಂದು ನಿರೂಪಕಿಯವರು ಹೇಳುತ್‌ತಿದ್‌ದಾಗ, ಟೀವಿ ಸಿಬ್‌ಬಂದಿಯಲ್‌ಲೊಬ್‌ಬ ಅವರು ಕಾಫಿ ಕುಡಿದಿಟ್‌ಟಿದ್‌ದ ಕಪ್‌‌ಅನ್‌ನು ಎತ್‌ತಿಕೊಂಡು ಟ್‌ರೇಯಲ್‌ಲಿ ಇಟ್‌ಟುಕೊಂಡು ಸ್‌ಟೇಜ್‌‌ನ ಹಿಂದಕ್‌ಕೆ ಹೋಗುತ್‌ತಿದ್‌ದ. ವಿದೇಶೀ ಮಹಿಳೆ ಅವನನ್‌ನು ಕರೆದು, "ಅದು ನನ್‌ನ ಕಪ್‌. ಕೊಡಿ", ಎಂದಳು. ಅದಕ್‌ಕೆ ಆತ "ತೊಳೆದು ತಂದು ಕೊಡುತ್‌ತೇನೆ, ಮೇಡಂ" ಎಂದ. "ಇರಲಿ ಹಾಗೇ ಕೊಡಿ" ಎಂದು ಆಕೆ ಅದನ್‌ನು ಆತನಿಂದ ವಾಪಸ್‌ ಇಸಕೊಂಡಳು. ಅದರಲ್‌ಲಿ ಉಳಿದಿರಬಹುದಾದ ಕಾಫಿಯನ್‌ನು ತನ್‌ನ ಕರ್‌‌ಚೇಫ್‌ ಮೇಲೆ ಸುರಿದು ಆ ಕಪ್‌‌ಅನ್‌ನು ಗುಂಡಗೆ ತಿರಿಗಿಸುತ್‌ತಾ ಅತ್‌ತ ಇತ್‌ತ ಅಲ್‌ಲಾಡಿಸಿ ನಂತರ ಅದರ ಒಳಗೆ ನೋಡಿದಳು. ಸೀಟಿನಿಂದ ಎದ್‌ದು ನಿಂತು ನಿರೂಪಕಿಯವರನ್‌ನು ಕುರಿತು, "ಮೇಡಂ ನೋಡಿ ಇಲ್‌ಲಿ" ಎಂದು ಆ ಕಾಫಿ ಲೋಟವನ್‌ನು ಅವರಿಗೆ ತೋರಿಸಿದಳು. ಅವರು ಹತ್‌ತಿರ ಬಂದು  ಆ ಲೋಟವನ್‌ನು ಇಸಕೊಂಡು "ಏನು?" ಎಂದರು. "ಕಪ್‌‌ನ ಒಳಗಡೆ ನೋಡಿ." ಎಂದಳು ವಿದೇಶಿ ಮಹಿಳೆ. "ಅರೆ ಇದೇನು? ಓಂ ಅಂತಾ ಇದೆ! ಹೇಗೆ ಬಂತು ಇದು?" ಎಂದು ಆಶ್‌ಚ್‌ರರ್‌ಯ ವ್‌ಯಕ್‌ತಪಡಿಸಿದರು. ಆಗ ವಿದೇಶಿ ಮಹಿಳೆ ಎದ್‌ದು ನಿಂತು, "ಈ ಕಪ್‌‌ನ ವಿಶೇಷ ಏನು ಅಂದರೆ: ಇದರಲ್‌ಲಿ ಕಾಫಿ ಕುಡಿದ ಮೇಲೆ ತಳದಲ್‌ಲಿ ಏನಾದರೂ ಬರೆದಿರುವುದು ಕಾಣುತ್‌ತದೆ. ಕಾಫಿಯ ಚರಟ ಉಳಿದಿರುತ್‌ತಲ್‌ಲಾ ಅದರಿಂದ ಬರೆದ ಹಾಗೆ ಕಾಣುತ್‌ತೆ. ಅದು ಒಳ್‌ಳೆಯದೋ  ಕೆಟ್‌ಟದೋ ಎನ್‌ನುವುದು ಅದರಲ್‌ಲಿ ಕಾಫಿ ಕುಡಿದವರ ಅದೃಷ್‌ಟ ಇದ್‌ದ ಹಾಗೆ. ಈಗ ನೋಡಿ ನಿಮಗೆ ಶುಭವಾದ ಓಂ ಬಂದಿದೆ. ಕೆಲವರಿಗೆ ಕ್‌ರಿಶ್‌ಚಿಯನ್‌ನರ ಶಿಲುಬೆಯ ಶುಭ ಚಿತ್‌ರ, ಕೆಲವರಿಗೆ ತಲೆಬುರುಡೆಯ ಕೆಟ್‌ಟ ಚಿತ್‌ರ.  ಹೀಗೆ ಒಳ್‌ಳೆಯದೋ ಕೆಟ್‌ಟದೋ ಬರುತ್‌ತದೆ. ನನಗೆ ಜ್‌ಯೋತಿಷ್‌ಯ ಕಲಿಸಿಕೊಟ್‌ಟವರು ಇದನ್‌ನು ನನಗೆ ಕೊಟ್‌ಟು ಇದರ ವಿಶೇಷತೆ ಬಗ್‌ಗೆ ತಿಳಿಸಿದ್‌ದಾರೆ. ನೋಡಿದಿರಾ ಈಗ ನಿಮಗೆ ಒಳ್‌ಳೇ ಕಾಲ. ನೀವು ಸುಖವಾಗಿರುತೀರಾ. ನಿಮಗೆ ದುಡ್‌ಡಿನದೇ ಆಗಲೀ ಬೇರೇ ಯಾವುದೇ ಆಗಲಿ ಸಮಸ್‌ಯೆ ಇಲ್‌ಲ. ಬೇಕಾದರೆ ನೋಡಿ ಇನ್‌ನು ಆರು ತಿಂಗಳು ಕಳೆದ ಮೇಲೆ ನೀವೇ ನನಗೆ ಹೇಳುತ್‌ತೀರಿ ಹೌದು ಅಂತ." "ಆರು ತಿಂಗಳೇನು ಈಗಲೇ ಹೇಳುತ್‌ತೇನೆ ಹೌದು ಅಂತ. ಏಕೆ ಅಂದರೆ ಈಗ ಸಧ್‌ಯಕ್‌ಕೆ ಯಾವ ಸಮಸ್‌ಯೇನೂ ಇಲ್‌ಲ. ಈ ಕಾರ್‌ಯಕ್‌ರಮ ನಡಿಸಿಕೊಡುತ್‌ತಿರುವುದರಿಂದ ಸಧ್‌ಯಕ್‌ಕೆ ದುಡ್‌ಡಿನ ಸಮಸ್‌ಯೇನೂ ಇಲ್‌ಲ." ಎಂದು ನಿರೂಪಕಿಯವರು ಹೇಳಿದರು. ಟೀವಿ ಕ್‌ಯಾಮರಾ ಕಡೆ ನೋಡುತ್‌ತಾ ಪ್‌ರೇಕ್‌ಷಕರನ್‌ನು ಉದ್‌ದೇಶಿಸಿ ಹೇಳಿದರು, "ನೋಡಿದಿರಾ! ಎಂಥಾ ವಿಚಿತ್‌ರ!! ನಾನು ಕಾಫಿ ಕುಡಿದ ಕಪ್‌‌ನ ತಳದಲ್‌ಲಿ ಓಂ ಅಂತಾ ಹೇಗೆ ಬಂದಿದೆ" ಎಂದು ಕಪ್‌‌ನ ತಳವನ್‌ನು ಕ್‌ಯಾಮರಾಗೆ ಕಾಣುವಂತೆ ಹಿಡಿದು, "ಕ್‌ಯಾಮರಾನ ಇಲ್‌ಲಿ ಫೋಕಸ್‌‌ಮಾಡಿ.  ಪ್‌ರೇಕ್‌ಷಕರಿಗೆ ಸರಿಯಾಗಿ ಕಾಣಿಸಲಿ." ಎಂದು ಟೀವಿ ಕ್‌ಯಾಮರಾಮ್‌ಯಾನ್‌‌ಗೆ ಹೇಳಿದರು. ಕಾಫಿ ಕಪ್‌‌ನ ತಳ ಟೀವಿ ಪರದೆಯನ್‌ನು ತುಂಬಿತು. ತಳದಲ್‌ಲಿ ಕಾಫಿಯ ಬಣ್‌ಣದಲ್‌ಲಿ ಬರೆದಂತಿದ್‌ದ ''ಓಂ'' ಅಕ್‌ಷರ ಚೆನ್‌ನಾಗಿ ಕಾಣಿಸಿತು. "ನೋಡಿದಿರಾ! ಎಂಥಾ ವಿಚಿತ್‌ರ!! ನಾವು ಇಂತಹ ವಿಚಿತ್‌ರವಾದ ಅನೇಕ ಘಟನೆಗಳನ್‌ನು ಆಗಾಗ ಕೇಳ್‌ತಾ ಇರ್‌ತೇವೆ. ನಮಗೆ ಗೊತ್‌ತಾಗದ ಎಷ್‌ಟೋ ಇಂಥಾ ವಿಷಯಗಳಿವೆ. ದೇವರ ಲೀಲೆ ಅದ್‌ಭುತ."

    "ಸರಿ. ಈಗ ಈ ವಿದೇಶಿ ಮಹಿಳೆಯವರ ಸರದಿ. ಏನು ಮೇಡಂ, ನೀವು ರೆಡೀನಾ? ಆಡಿಯನ್‌ಸ್‌ ಪ್‌ರಶ್‌ನೆ ಕೇಳಬಹುದಾ?"

    "ಆಗಲೇ ತನ್‌ನ ಮೋಡಿಯನ್‌ನು ಮಾಡಿದ್‌ದ ಆ ವಿದೇಶಿ ಮಹಿಳೆ "ಆಗಲಿ" ಎಂದಳು. ಕಾರ್‌ಯಕ್‌ರಮ ಮುಂದುವರಿಯಿತು...

    ಈ ಕಾರ್‌ಯಕ್‌ರಮವನ್‌ನು ವೀಕ್‌ಷಿಸಿದ ಪ್‌ರೇಕ್‌ಷಕರಿಗೆ ಕೆಲವು ಸಂದೇಹಗಳು ಬರಬಹುದು:

    ಆ ಕುರುಡು ಸ್‌ವಾಮಿ ಎಷ್‌ಟೋ ಜನಕ್‌ಕೆ ಅವರವರ ಪ್‌ರಶ್‌ನೆಗಳಿಗೆ ಪರಿಹಾರ ಹೇಳಿರಬಹುದು. ಬಹುಸಂಖ್‌ಯಾಶಾಸ್‌ತ್‌ರದ (Theory of Big Numbers, Statistics) ಸೂತ್‌ರದಂತೆ ಅವರು ಹೇಳಿದ್‌ದು ಕೆಲವರಿಗೆ ನಿಜ ಆಗುತ್‌ತೆ, ಕೆಲವರಿಗೆ ಇಲ್‌ಲ. ಅವರು ಹೇಳಿದ್‌ದು ನಿಜವಾಗದಿದ್‌ದಾಗ ಜನ ಬೇಸರಿಸಿಕೊಂಡು ಸುಮ್‌ಮನಾಗುತ್‌ತಾರೆ. ಆದರೂ ಪ್‌ರಶ್‌ನೆ ಕೇಳಲು ಅವರ ಬಳಿ ಜನರು ಹೋಗುತ್‌ತಲೇ ಇರುತ್‌ತಾರೆ. ಈ ಬಗ್‌ಗೆ ಜನ ಏಕೆ ಯೋಚಿಸುವುದಿಲ್‌ಲ.

ಕಾಫಿಯ ಕಪ್‌‌ಅನ್‌ನು ವಿದೇಶಿ ಮಹಿಳೆ ತಂದಿದ್‌ದಳು. ಕಾಫಿಯನ್‌ನು ಅದರ ಒಳಕ್‌ಕೆ ಸುರಿಯುವ ಮೊದಲು ಬೇರೇ ಯಾರೂ ನೋಡಿರಲಿಲ್‌ಲ. ಆಕೆ ಅದನ್‌ನು ಒಳಕ್‌ಕೆ ಸುರಿಯುವ ಮೊದಲು ಬೇರೆ ಯಾರೂ ನೋಡಿರಲಿಲ್‌ಲ. ಆಕೆ ಅದನ್‌ನು ಯಾರಿಗೂ ತೋರಿಸಲಿಲ್‌ಲ.

ಕಾಫಿ ಕಪ್‌‌ಅನ್‌ನು ಆಕೆ ಹೇಗೆ ಸಿದ್‌ಧ ಮಾಡಿರಬಹುದು? ಈಗ ಬಗೆಬಗೆಯ ಅಂಟುಗಳು (Resins)ಮಾರುಕಟ್‌ಟೆಗೆ ಬಂದಿವೆ. ಹಾಳೆಯ ಒಂದು ಅಂಚಿಗೆ ಒಂದು ಬಗೆಯ ಅಂಟನ್‌ನು ಸವರಿರುವ ಹಾಳೆಗಳಿರುವ ಪ್‌ಯಾಡ್‌‌ಗಳು ಲಭ್‌ಯವಿವೆ. ಅಂತಹ ಪ್‌ಯಾಡ್‌‌ಗಳನ್‌ನು ಎಷ್‌ಟೋ ಜನ ನೆನಪಿನ ಟಿಪ್‌ಪಣಿ ಬರೆದು ತಮ್‌ಮ ಟೇಬಲ್‌, ಪುಸ್‌ತುಕಗಳು ಅಥವಾ ಗೋಡೆಯ ಮೇಲೆ ಅಂಟಿಸಿಕೊಳ್‌ಳುತ್‌ತಾರೆ, ತಮ್‌ಮ ದಿನನಿತ್‌ಯದ ಕೆಲಸಗಳ ನಿರ್‌ವಹಣೆಗೆ ಸಹಕಾರಿಯಾಗಿ ಇರಲೆಂದು. ಇದರಲ್‌ಲಿನ ಅಂಟು ಒಣಗುವುದಿಲ್‌ಲ.  ಹಾಗೆಯೇ ನಾವು ಸೀರೆ, ಷರಟ್‌ ಮುಂತಾದ ವಸ್‌ತುಗಳನ್‌ನು ಕೊಂಡಗ ಒಂದು ಬಗೆಯ ಪ್‌ಲಾಸ್‌ಟಿಕ್‌ ಚೀಲದಲ್‌ಲಿ ಹಾಕಿ ಕೊಡುತ್‌ತಾರೆ. ಅಂತಹ ಚೀಲವನ್‌ನು ಕೆಳಗಡೆಯಿಂದ ಸುಲಭವಾಗಿ ತೆಗೆಯಲು ಆಗುವಂತೆ ಒಂದು ಅಂಚಿನ ಉದ್‌ದಕ್‌ಕೂ ಒಂದು ಬಗೆಯ ಅಂಟನ್‌ನು ಹಾಕಿರುತ್‌ತಾರೆ. ಈ ಅಂಟು ಒಣಗುವುದಿಲ್‌ಲ; ತನ್‌ನ ಅಂಟುವ ಗುಣವನ್‌ನು ಕಳೆದುಕೊಳ್‌ಳುವುದಿಲ್‌ಲ. ಅಂತಹ ಅಂಚನ್‌ನು ಸುಲಭವಾಗಿ ಮೇಲಕ್‌ಕೆ ಎತ್‌ತಬಹುದು. ಮತ್‌ತೆ ಒತ್‌ತಿದರೆ ಮೊದಲಿನ ಹಾಗೆ ಅಂಟಿಕೊಳ್‌ಳುತ್‌ತದೆ. ಇಂತಹ ಬಗೆ ಬಗೆಯ ಅಂಟುಗಳು ಮಾರುಕಟ್‌ಟೆಯಲ್‌ಲಿ ಲಭ್‌ಯವಿವೆ. ನೀರಿನಲ್‌ಲಿಯೂ ತಮ್‌ಮ ಅಂಟುವ ಗುಣವನ್‌ನು ಉಳಿಸಿಕೊಳ್‌ಳುವ ಅಂಟುಗಳು ದೊರೆಯುತ್‌ತವೆ. ಇಂತಹ ಯಾವುದೋ ಅಂಟನ್‌ನು ಬಳಸಿ ಕಫ್‌‌ಇನ ತಳದಲ್‌ಲಿ ಆಕೆ ಮೊದಲೇ ತನಗೆ ಬೇಕಾದ ಹಾಗೆ ಬರೆದುಕೊಂಡು ಬಂದಿದ್‌ದಿರಬಹುದಲ್‌ಲವೇ? ಕಪ್‌‌ನ ಒಳಕ್‌ಕೆ ಕಾಫಿ ಸುರಿಯುವ ಮೊದಲು ಆಕೆ ಅದನ್‌ನು ಅಲ್‌ಲಿದವರಿಗೆಲ್‌ಲಾ ಏಕೆ ತೋರಿಸಲಿಲ್‌ಲ? ಯೋಚಿಸಿ.

ಯಾರೂ ಇದರ ಬಗ್‌ಗೆ ಏಕೆ ಯೋಚಿಸಲಿಲ್‌ಲ? ಜ್‌ಯೋತಿಷಿಯೊಬ್‌ಬನಿಂದ ಮೇಸ ಹೋದ ಮೇಲೂ ನಿರೂಪಕಿಯವರು ನಿಧಾನವಾಗಿ ಯೋಚಿಸುತ್‌ತಿಲ್‌ಲ. ಮೇಲುನೋಟಕ್‌ಕೆ ಕಾಣುವುದನ್‌ನೇ ನಿಜವೆಂದು ನಂಬುತ್‌ತಾರೆ. ನೋಡಿದ್‌ದೂ ಸುಳ್‌ಳಾಗಬಹುದು. ಪ್‌ರತ್‌ಯಕ್‌ಷವಾದರು ಪ್‌ರಮಾಣಿಸಿ ನೋಡು ಎಂದು ಬಲ್‌ಲವರು ಹೇಳುತ್‌ತಲೇ ಇರುತ್‌ತಾರೆ. ನಾವು ನಿಧಾನವಾಗಿ ವಿವೇಕದಿಂದ ಯೋಚಿಸುವುದಿಲ್‌ಲ, ಎಚ್‌ಚರಿಕೆಯಿಂದ ವರ್‌ತಿಸುವುದಿಲ್‌ಲ. ನಮ್‌ಮ ದೌರ್‌ಬಲ್‌ಯವನ್‌ನು ಇಂತಹ ಮೋಸಗಾರರು ತಮ್‌ಮ ಲಾಭಕ್‌ಕೆ ಬಳಸಿಕೊಳ್‌ಳುತ್‌ತಾರೆ. ಮೋಸ ಹೋದ ಮೇಲೆ ಬೊಬ್‌ಬೆಯಿಡುವುದಕ್‌ಕಿಂತ ಮೊದಲೇ ಎಚ್‌ಚರದಲ್‌ಲಿರುವುದು ಲೇಸಲ್‌ಲವೇ?

ಕೇವಲ ಒಂದು ಕ್‌ಷಣದ ಆತುರದಿಂದ (v1)

ಸುಮಾರು ವರ್‌ಷಗಳ ಹಿಂದಿನ ಘಟನೆ. ನಾನು ಕೆಲಸದ ನಿಮಿತ್‌ತ ಆಗಾಗ ಬೆಂಗಳೂರಿನಿಂದ ತುಮಕೂರಿಗೆ ಹೋಗಿ ಬರುತ್‌ತಿದ್‌ದೆ. ಅಂಥದೊಂದು ದಿನ. ಬೆಳಿಗ್‌ಗೆ ಸುಮಾರು ಹನ್‌ನೊಂದು ಗಂಟೆ ಸಮಯ. ಬೆಂಗಳೂರಿನಿಂದ ತುಮಕೂರಿಗೆ ಸರ್‌ಕಾರಿ ಬಸ್‌ಸಿನಲ್‌ಲಿ ಹೊರಟಿದ್‌ದೆ. ಬೆಂಗಳೂರು ತುಮಕೂರು ಮಧ್‌ಯೆ ಹೆದ್‌ದಾರಿಯ ಕೆಲಸ ನಡೆಯುತ್‌ತಿತ್‌ತು. ನೆಲಮಂಗಲದ ವರೆಗೆ ಕೆಲಸ ಆಗಿತ್‌ತು. ನೆಲಮಂಗಲದಿಂದ ಮುಂದಕ್‌ಕೆ ರಸ್‌ತೆ ಮಧ್‌ಯೆ ಮೀಡಿಯನ್‌ ಇರಲ್‌ಲಿಲ್‌ಲ. ಹಳದಿ ಬಣ್‌ಣದ ಪಟ್‌ಟಿ ಇತ್‌ತು. ಬಸ್‌ಸು ದಾಬಸ್‌ಪೇಟೆ ದಾಟಿ ನಿಜಗಲ್‌ ಕಡೆ ಹೋಗುತ್‌ತಿತ್‌ತು. ರಸ್‌ತೆಯಲ್‌ಲಿ ಅಂಥಹ ಟ್‌ರಾಫಿಕ್‌ ಇರಲ್‌ಲಿಲ್‌ಲ. ಬಸ್‌ ವೇಗವಾಗಿ ಹೋಗುತ್‌ತಿತ್‌ತು. ಬಿಸಿಲಿನ ಝಳದಿಂದಾಗಿ ಸೆಖೆಯಿದ್‌ದು, ಬಸ್‌ಸಿನಲ್‌ಲಿ ಮೌನ ಆವರಿಸಿತ್‌ತು. ಡ್‌ರೈವರ್‌ ಹಿಂದಿನ ಸಾಲಿನಲ್‌ಲಿ ಕಿಟಕಿಯ ಪಕ್‌ಕ ಕುಳಿತಿದ್‌ದೆ. ಬಸ್‌ಸು ಹೋಗುತ್‌ತಿದ್‌ದ ರಸ್‌ತೆಯನ್‌ನೇ ನೋಡುತ್‌ತಾ ಇದ್‌ದೆ. ಆವಾಗೀವಾಗ ಒಂದು ಬಸ್‌ಸು, ಒಂದು ಕಾರು ಎದುರಿನಿಂದ ಹಾದು ಹೋಗುತ್‌ತಿದ್‌ದವು. ಬಿಸಿ ಗಾಳಿ ಬೀಸುತಿತ್‌ತು. ಕೆಲವರು ನಿದ್‌ದೆಗೆ ಶರಣಾಗಿದ್‌ದರು.

ರಸ್‌ತೆಯ ಎಡಗಡೆ ಭಾಗದ ಗದ್‌ದೆಯಲ್‌ಲಿ ಭತ್‌ತದ ಬೆಳೆ ಚೆನ್‌ನಾಗಿತ್‌ತು. ರಸ್‌ತೆಯ ಬದಿಯ ಅಡಿಕೆಯ ತೋಟಗಳು ದೂರದಲ್‌ಲಿ ಕಾಣುತಿದ್‌ದವು. ನಾನು ಹೋಗುತ್‌ತಿದ್‌ದ ಬಸ್‌ಸಿನಿಂದ ಸುಮಾರು ಒಂದೂವರೆ ಕಿಲೋಮೀಟರ್‌ ದೂರದಲ್‌ಲಿ, ರಸ್‌ತೆಗೆ ಇನ್‌ನೂರು ಅಡಿ ಒಳಕ್‌ಕೆ ಒಂದು ನೀರಾವರಿ ಭಾವಿ ಕಾಣುತ್‌ತಿತ್‌ತು. ಸಮೀಪದಲ್‌ಲಿ ಒಂದು ಆಲದ ಮರವಿತ್‌ತು. ಅಲ್‌ಲಿ ಒಂದು ಸಣ್‌ಣ ಪಂಪ್‌ಹೌಸ್‌ ಕಾಣಿಸುತ್‌ತಿತ್‌ತು. ಪಂಪ್‌ ಆನ್‌ ಆಗಿತ್‌ತು. ಸುಮಾರು ಎರಡು ಅಂಗುಲ ಗಾತ್‌ರದ ಪೈಪಿನಿಂದ ನೀರು ಧಾರಾಳವಾಗಿ ಬರುತ್‌ತಿತ್‌ತು. ರಸ್‌ತೆಯ ಆ ಕಡೆ ಒಂದು ಕಾರು ನಿಂತಿತ್‌ತು. ಕಾರು ಕೆಟ್‌ಟು ನಿಂತಿದ್‌ದಿರಬೇಕು. ಬೆಂಗಳೂರಿನ ಕಡೆ ಹೋಗುತ್‌ತಿದ್‌ದಿರಬೇಕು. ಕಾರಿನ ಬಾನೆಟ್‌ ಮೇಲೆ ತೆರೆದಿದ್‌ದು ಕಾಣುತಿತ್‌ತು. ಕಾರಿನ ಹಿಂದಿನ ಡಿಕ್‌ಕಿ ಕೂಡ ತೆರೆದಿತ್‌ತು. ವ್‌ಯಕ್‌ತಿಯೊಬ್‌ಬ ಬಗ್‌ಗಿ ಕಾರಿನ ಒಳಗೆ ಏನೋ ನೋಡುತ್‌ತಿದ್‌ದ. ಆ ವ್‌ಯಕ್‌ತಿಯ ಪಕ್‌ಕದಲ್‌ಲಿ ಒಬ್‌ಬ ಹುಡುಗ, ಒಂದು ಹುಡುಗಿ ನಿಂತಿದ್‌ದರು. ಹುಡುಗನಿಗೆ ಬಹುಶಃ ಹೈಸ್‌ಕೂಲ್‌ ೮ನೇ ಅಥವಾ ೯ ನೇ ಕ್‌ಲಾಸ್‌ ಓದುತ್‌ತಿರಬಹುದು ಎನ್‌ನುವಂಥಹ ವಯಸ್‌ಸು. ಹುಡುಗಿ ೨ ಅಥವಾ ೩ ವರ್‌ಷ ಚಿಕ್‌ಕವಳಿರಬಹುದು. ಇದನ್‌ನು ನಾನು ಗಮನಿಸುತ್‌ತಿದ್‌ದಂತೆ ನಾನಿದ್‌ದ ಬಸ್‌ಸು ಆ ಕಾರನ್‌ನು ಸಮೀಪಿಸುತ್‌ತಿತ್‌ತು. ಬಸ್‌ಸಿನ ವೇಗ ಸುಮಾರು ಗಂಟೆಗೆ ೬೦ - ೭೦ ಕಿಲೋಮೀಟರ್‌ ಇದ್‌ದಿರಬಹುದು.

ಆ ವ್‌ಯಕ್‌ತಿ ಹುಡುಗನತ್‌ತ ತಿರುಗಿ ಏನೋ ಹೇಳಿದ. ಆ ಹುಡುಗ ಇದ್‌ದಕ್‌ಕಿದಂತೆ ಕಾರಿನ ಹಿಂದುಗಡೆಗೆ ಹೋದ. ಒಂದರ್‌ಧ ನಿಮಿಷದಲ್‌ಲಿ ಸರ್‌ರನೆ ರಸ್‌ತೆಯನ್‌ನು ದಾಟಲು ಓಡುತ್‌ತಿದ್‌ದ. ಅವನ ಕೈಯಲ್‌ಲಿ ಒಂದು ಕ್‌ಯಾನ್‌ ಇತ್‌ತು. ಬಹುಶ ರಸ್‌ತೆಯ ಆ ಕಡೆ ಇದ್‌ದ ಪಂಪ್‌ಹೌಸ್‌ನಿಂದ ನೀರು ತರಲು ಓಡುತ್‌ತಿದ್‌ದಿರಬೇಕು. ಆ ಹುಡುಗ ರಸ್‌ತೆಯ ಅರ್‌ಧಕ್‌ಕೆ ಬರುವಷ್‌ಟರಲ್‌ಲಿ ನಾವು ಹೋಗುತ್‌ತಿದ್‌ದ ಬಸ್‌ ಅವನಿಗೆ ತೀರಾ ಸಮೀಪಕ್‌ಕೆ ಬಂದಿತ್‌ತು. ನೋಡನೋಡುತ್‌ತಿದಂತೆಯೇ ಅನಾಹುತ ಆಗಿಯೇ ಹೋಯಿತು. ಬಸ್‌ಸು ಆ ಹುಡುಗನಿಗೆ ಜೋರಾಗಿ ಡಿಕ್‌ಕಿ ಹೊಡೆಯಿತು. ಹುಡುಗನ ದೇಹ ಜೋರಾಗಿ ಒದ್‌ದ ಕಾಲ್‌ಚೆಂಡಿನಂತೆ ವೇಗವಾಗಿ ಉರುಳುತ್‌ತಾ ಸುಮಾರು ನೂರು ಅಡಿ ಮುಂದಿದ್‌ದ ರಸ್‌ತೆ ಬದಿಯ ಮರಕ್‌ಕೆ ಅಪ್‌ಪಳಿಸಿ ಮೇಲಕ್‌ಕೆ ಚಿಮ್‌ಮಿ ದೊಪ್‌ಪನೆ ಕಳಕ್‌ಕೆ ಬಿದ್‌ದಿತು. ಆ ದೇಹ ಉರುಳಿದ ಜಾಗದ ಉದ್‌ದಕ್‌ಕೂ ರಕ್‌ತದ ಗೆರೆಗಳು. ದೇಹ ಮಾಂಸದ ಮುದ್‌ದೆಯಂತೆ ರಕ್‌ತಸಿಕ್‌ತವಾಯಿತು. ಕುಲುಮೆಯ ತಿದಿಯಂತೆ ಜೋರಾಗಿ ಏದುಸಿರು ಬರುತ್‌ತಿತ್‌ತು. ಸ್‌ವಲ್‌ಪ ದೂರದಲ್‌ಲಿ ಬಸ್‌ಸನ್‌ನು ನಿಲ್‌ಲಿಸಿದ ಡ್‌ರೈವರ್‌ ಕೆಳಗಿಳಿದು ಬಂದ. ಬಸ್‌ಸಿನಲ್‌ಲಿದ್‌ದವರೆಲ್‌ಲಾ ಕೆಳಗೆ ಇಳಿದೆವು. ಛಿದ್‌ರಛಿದ್‌ರವೂ, ರಕ್‌ತಸಿಕ್‌ತವೂ ಆದ ದೇಹದ ಕೊನೆಯ ಗಳಿಗೆಯ ನರಳಾಟ ನೋಡಲು ಭೀಕರವಾಗಿತ್‌ತು. ಬಸ್‌ಸಿನ ಪ್‌ರಯಾಣಿಕರು ಆ ದೇಹದ ಸ್‌ಥಿತಿಯನ್‌ನು ನೋಡಲಾರದಾದರು. ಕೆಲವರು ಒಂದೆರಡು ಕ್‌ಷಣ ನೋಡಿ ಸಹಿಸಲಾಗದೆ ದೂರ ಹೋಗಿ ನಿಂತರು. ಕಾರಿನ ವ್‌ಯಕ್‌ತಿ ಮತ್‌ತು ಅವನ ಜೊತೆಯಲ್‌ಲಿದ್‌ದ ಹುಡುಗಿ ಓಡಿ ಬಂದರು. ಆ ಹುಡುಗಿ ಜೋರಾಗಿ ಅಳುತ್‌ತಾ ಆತನ ಪ್‌ಯಾಂಟ್‌ ಹಿಡಿದುಕೊಂಡಿದ್‌ದಳು. ಆ ವ್‌ಯಕ್‌ತಿಗೆ ಕೈ ನಡುಗುತ್‌ತಿತ್‌ತು. ಕಣ್‌ಣಲ್‌ಲಿ ನೀರು ಉಕ್‌ಕಿ ಕೆಳಗೆ ಸುರಿಯುತ್‌ತಿತ್‌ತು. ಕಾಲು ಕಂಪಿಸುತ್‌ತಿತ್‌ತು.

ಪ್‌ರಯಾಣಿಕರಲ್‌ಲಿ ಇಬ್‌ಬರು ಮಾತನಾಡಿಕೊಳ್‌ಳುತ್‌ತಿದ್‌ದರು, "ಅರೆ, ಇವರು ನಮ್‌ಮ ಕಾಲೇಜಿನ ಅಸಿಸ್‌ಟೆಂಟ್‌ ಪ್‌ರೊಫೆಸರ್‌ ನರಸಿಂಹ ಮೂರ್‌ತಿ." ಅವರಾಡುತ್‌ತಿದ್‌ದ ಮಾತುಗಳನ್‌ನು ಕೇಳಿಸಿಕೊಂಡವರು "ಹೌದಾ. ಆ ಹುಡುಗರು ಅವರ ಮಕ್‌ಕಳಿರಬಹುದು ಅಲ್‌ವಾ?" ಎಂದು ಕೇಳಿದರು. ಅದಕ್‌ಕವರು "ಹೌದು, ನಾವಿಬ್‌ಬರೂ ಅದೇ ಕಾಲೇಜಿನಲ್‌ಲಿ ಕೆಲಸ ಮಾಡ್‌ತಿರೋದು. ಈ ಹುಡುಗ ಅವರ ಮಗ ಪ್‌ರಶಾಂತ. ಹೈಸ್‌ಕೂಲ್‌ ೯ನೇ ಕ್‌ಲಾಸ್‌. ಆ ಹುಡುಗಿ ಅವನ ತಂಗಿ ಸೌಮ್‌ಯ. ೬ನೇ ಕ್‌ಲಾಸ್‌. ಎಂಥಾ ಕೆಲಸಾ ಆಗಿ ಹೋಯ್‌ತು. ಸುಖವಾದ ಸಂಸಾರ. ಗಂಡ ಹೆಂಡತಿ; ಇಬ್‌ಬರೇ ಮಕ್‌ಕಳು. ಮೊನ್‌ನೇ ತಾನೇ ಅಸಿಸ್‌ಟೆಂಟ್‌ ಪ್‌ರೊಫೆಸರ್‌ ಅವರ ಹೆಂಡತಿಯನ್‌ನು ಊರಿಗೆ ಕಳಿಸ್‌ ಕೊಟ್‌ಟಿದ್‌ರು. ಆಯಮ್‌ಮನ ದೊಡ್‌ಡಕ್‌ಕನ ಮಗಳ ಮದುವೆ ಅಂತ ಹೇಳ್‌ತಿದ್‌ರು. ಪರೀಕ್‌ಷೆ ಮುಗಿಸ್‌ಕೊಡು ಇವತ್‌ತು ಅಸಿಸ್‌ಟೆಂಟ್‌ ಪ್‌ರೊಫೆಸರ್‌ ಮತ್‌ತು ಮಕ್‌ಕಳು ಊರಿಗೆ ಹೊರಟಿದ್‌ರೂಂತ ಕಾಣುತ್‌ತೆ; ಮದುವೆ ಸಂಭ್‌ರಮದಲ್‌ಲಿ ಖುಷಿಯಾಗಿ ಇರೋದಕ್‌ಕೆ ಹೊರಟವರಿಗೆ ಹೀಗಾಗಿ ಹೋಯಿತು", ಎಂದು ಹೇಳಿದರು. ಅವರಿಬ್‌ಬರೂ ಅಸಿಸ್‌ಟೆಂಟ್‌ ಪ್‌ರೊಫೆಸರ್‌ ನರಸಿಂಹ ಮೂರ್‌ತಿಯವರ ಹತ್‌ತಿರ ಬಂದು "ಎಂಥಾ ಕೆಲಸ ಆಗಿ ಹೋಯ್‌ತಲ್‌ಲಾ ಸಾರ್‌", ಎಂದು ಹೇಳಿದರು. ಸ್‌ವಲ್‌ಪ ದೂರದಲ್‌ಲಿ ತಲೆ ತಗ್‌ಗಿಸಿ ನಿಂತುಕೊಂಡರು.

ಪ್‌ರಯಾಣಿಕರಲ್‌ಲಿ ಸ್‌ವಲ್‌ಪ ವಯಸ್‌ಸಾದರೊಬ್‌ಬರು ನರಸಿಂಹ ಮೂರ್‌ತಿಯವರ ಬಳಿ ಸಾಗಿ "ಏನೋ ಆಗಬಾರದ್‌ದು ಆಗಿ ಹೋಯಿತು. ಎಲ್‌ಲಾ ದೈವೇಚ್‌ಛೆ. ಕೊನೆ ಸಮೀಪಿಸುತ್‌ತಿದೆ. ಬಾಯಿಗೆ ಗಂಗಾಜಲ ಬಿಡಿ. ಮಗೂ ಆತ್‌ಮಕ್‌ಕೆ ಶಾಂತಿ ಸಿಕ್‌ಕಲಿ." ಎನ್‌ನುತ್‌ತಾ ಅವರ ಬೆನ್‌ನು ಸವರಿದರು. ನರಸಿಂಹ ಮೂರ್‌ತಿಯವರು ಏನೂ ಹೇಳಲಾಗದ, ಏನೂ ಮಾಡಲಾಗದ ಸ್‌ಥಿತಿಯಲ್‌ಲಿದ್‌ದರು. "ಕಾರಿನಲ್‌ಲಿ ರೈಲ್‌ಚಂಬಿದೆ. ತನ್‌ನಿ", ಎಂದು ಅವರ ಕಾಲೇಜಿನಲ್‌ಲಿ ಕೆಲಸ ಮಾಡುತ್‌ತಿದವರಿಗೆ ಹೇಳಿದರು. ಅವರಲ್‌ಲೊಬ್‌ಬ ರೈಲ್‌ಚಂಬನ್‌ನು ತಂದು ನರಸಿಂಹ ಮೂರ್‌ತಿಯವರ ಕೈಗೆ ಕೊಟ್‌ಟ. ಒಂದಿಬ್‌ಬರು ಸೇರಿ ನುಜ್‌ಜುಗುಜ್‌ಜಗಿದ್‌ದ ಆ ದೇಹವನ್‌ನು ಮರಕ್‌ಕೆ ಆನಿಸಿ ಒರಗಿಸಿದರು. ಕತ್‌ತು ಪಕ್‌ಕಕ್‌ಕೆ ವಾಲಿತ್‌ತು. ಕುಲುಮೆಯ ತಿದಿಯಂತೆ ಏದುಸಿರು ಜೋರಾಗಿತ್‌ತು. ನರಸಿಂಹ ಮೂರ್‌ತಿಯವರು "ಕೃಷ್‌ಣ ಕೃಷ್‌ಣ" ಎನ್‌ನುತ್‌ತಾ ರೈಲುಚಂಬಿನಿಂದ ನೀರನ್‌ನು ತಮ್‌ಮ ಮಗನ ಬಾಯಿಗೆ ಸುರಿಯತೊಡಗಿದರು. ನೀರು ಬಾಯಿಂದ ಒಳಗೆ ಇಳಿಯುತ್‌ತಿಲ್‌ಲ. ಪಕ್‌ಕಕ್‌ಕೆ ವಾಲಿದ್‌ದ ಬಾಯಿಯಿಂದ ಕೆಳಕ್‌ಕೆ ನೆಲಕ್‌ಕೆ ಬೀಳುತ್‌ತಿತ್‌ತು. ಏದುಸಿರು ನಿಂತಿತು. ಪ್‌ರಾಣ ಹೋಯಿತು ಎಂದು ಎಲ್‌ಲರೂ ಅಂದುಕೊಂಡರು.

ಆ ಬಸ್‌ಸಿನಲ್‌ಲಿ ಬಂದಿದ್‌ದ ಪ್‌ರಯಾಣಿಕರು ಬೇರೆ ಬಸ್‌ಸು ಲಾರಿಗಳನ್‌ನು ಅರಸುತ್‌ತಿದ್‌ದರು. ನಾನು ಇನ್‌ನೊಂದು ಸರ್‌ಕಾರಿ ಬಸ್‌ಸಿನಲ್‌ಲಿ ಪ್‌ರಯಾಣ ಮುಂದುವರಿಸಿದೆ. ಹಾಗೇ ಯೊಚಿಸುತ್‌ತಿದ್‌ದೆ. ಅಸಿಸ್‌ಟೆಂಟ್‌ ಪ್‌ರೊಫೆಸರ್‌ ನರಸಿಂಹ ಮೂರ್‌ತಿಯವರು ತಮ್‌ಮ ಮಕ್‌ಕಳಿಗೆ ರಸ್‌ತೆ ಸುರಕ್‌ಷತೆ ಬಗ್‌ಗೆ ಚೆನ್‌ನಾಗಿ ತಿಳಿಸಿ ಅಭ್‌ಯಾಸ ಮಾಡಿಸಿದ್‌ದಿದ್‌ದರೆ ಎಷ್‌ಟು ಚೆನ್‌ನಾಗಿತ್‌ತು. ರಸ್‌ತೆ ದಾಟುವ ಮುನ್‌ನ ಆ ಹುಡುಗ ಪ್‌ರಶಾಂತ ಒಂದು ಕ್‌ಷಣ ರಸ್‌ತೆಯ ಎರಡೂ ಕಡೆ ನೋಡಿದ್‌ದಿದ್‌ದರೆ, ಆಕ್‌ಸಿಡೆಂಟ್‌ ಆಗುತ್‌ತಲೇ ಇರಲಿಲ್‌ಲ. ಕೇವಲ ಒಂದು ಕ್‌ಷಣದ ಆತುರದಿಂದ ತನ್‌ನ ಜೀವವನ್‌ನೇ ತೆತ್‌ತನಲ್‌ಲಾ ಆ ಚಿಕ್‌ಕ ಹುಡುಗ.

ತಲೆ ದಿಂ ಎನ್‌ನುತ್‌ತಿತ್‌ತು. ಮನಸ್‌ಸು ಭಾರವಾಗಿತ್‌ತು.

ಮಂತ್‌ರಿಸಿದ ನಿಂಬೆಹಣ್‌ಣು ಹೇಗೆ ಮಾಯವಾಯಿತು!? (v1)

ಸಾಯಂಕಾಲ ೬ ಗಂಟೆ ಸಮಯ. ನಾನು ಮತ್‌ತು ನನ್‌ನ ಹೆಂಡತಿ ವಾಕಿಂಗ್‌‌ಗೆ ಹೂರಟಿದ್‌ದೆವು. ದಿನವೂ ಸಂಜೆ ನಾವಿಬ್‌ಬರೂ ವಾಕಿಂಗ್‌‌ಗೆ ಹೋಗಿ ಬರುವಾಗ ತರಕಾರಿ ಮತ್‌ತು ಮನೆಗೆ ಬೇಕಾದ ಸಾಮಾನುಗಳನ್‌ನು ತೆಗೆದುಕೊಂಡು ಬರುವುದು ರೂಢಿ. ಸರ್‌ಕಲ್‌ ಹತ್‌ತಿರ ಬಂದಾಗ ರಸ್‌ತೆ ಬದಿಯಲ್‌ಲಿ ಮನೆ ಮುಂದೆ ನಿಲ್‌ಲಿಸಿದ್‌ದ ಒಂದು ಬೋರ್‌ಡ್‌ ಕಡೆ ಗಮನ ಹರಿಯಿತು. ದಿನಾ ನೋಡುತ್‌ತಿದ್‌ದ ಬೊರ್‌ಡ್‌ ಅದು. ಅವತ್‌ತು ಅದರ ಕಡೆ ಗಮನ ಹರಿದು ಅಲ್‌ಲಿ ಓದುತ್‌ತಾ ನಿಂತೆ. ಅದು ಜ್‌ಯೋತಿಷಿಯೊಬ್‌ಬನ ಮನೆ ಮುಂದೆ ಇದ್‌ದ ಅವನ ಪ್‌ರಚಾರದ ಬೋರ್‌ಡ್‌. "ಶ್‌ರೀ ಕಾಳಿಕಾಂಬಾ ಜ್‌ಯೋತಿಷ್‌ಯಾಲಯ. ನಿಮ್‌ಮ ಎಲ್‌ಲ ಸಮಸ್‌ಯಗಳಿಗೆ ನಮ್‌ಮಿಂದ ಪರಿಹಾರ ಪಡೆಯಿರಿ. ಕೌಟುಂಬಿಕ ಸಮಸ್‌ಯೆ, ಪ್‌ರೇಮ ವ್‌ಯವಹಾರ, ಕೋರ್‌ಟ್‌ ಕಚೇರಿ ವ್‌ಯವಹಾರ, ಉದ್‌ಯೋಗ ಮತ್‌ತಿತರ ಸಮಸ್‌ಯೆಗಳಿಗೆ ತೃಪ್‌ತಿಕರ ಸಮಾಧಾನ ಕಂಡುಕೊಳ್‌ಳಿ. ಜ್‌ಯೋತಿಷಿ ಪಂ.ಶಂಕರ ಭಟ್‌." ನಾನು ಅದನ್‌ನು ಓದಿ ಸಣ್‌ಣಗೆ ನಗುತ್‌ತಾ ನನ್‌ನ ಶ್‌ರೀಮತಿಯತ್‌ತ ನೋಡಿದೆ. ಅವಳು "ನಡೀರಿ, ಸುಮ್‌ಮನೆ. ಲೇಟಾಗಿದೆ. ಏನಕ್‌ಕೆ ಇದು?" ಎಂದಳು. "ಸುಮ್‌ಮನೆ. ಏನು ಹೇಳ್‌ತಾನೋ, ನೋಡೋಣ." ಅಂದೆ. ಆ ದಿನಗಳಲ್‌ಲಿ ನನಗೆ ಜ್‌ಯೊತಿಷ್‌ಯದ ಬಗ್‌ಗೆ ಆಸಕ್‌ತಿಯುಂಟಾಗಿ, ಜ್‌ಯೊತಿಷ್‌ಯ ಕುರಿತ ಹಲವಾರು ಪುಸ್‌ತುಕಗಳನ್‌ನು ಓದಿ ತಿಳಿದುಕೊಳ್‌ಳುತಿದ್‌ದೆ. ಕೆಲವಾರು ಸಂದೇಹಗಳು ನನ್‌ನನ್‌ನು ಕಾಡಿತ್‌ತಿದ್‌ದವು. ಫಲಜ್‌ಯೋತಿಷ್‌ಯದ ಬಗ್‌ಗೆ ನನ್‌ನ ನಂಬಿಕೆ ಕುಸಿಯತೊಡಗಿತ್‌ತು. ಈಗೀಗ ನನಗೆ ಅದು ಒಂದು ರೀತಿಯಲ್‌ಲಿ ಕೆಲವರ ಉದರಂಭರಣಕ್‌ಕೆ ಎಂದು ಅನ್‌ನಿಸತೊಡಗಿತ್‌ತು. ನನ್‌ನ ಬಲವಂತದಿಂದ ನನ್‌ನ ಶ್‌ರೀಮತಿಯು ನನ್‌ನ ಜೊತೆ ಆ ಜ್‌ಯೋತಿಷ್‌ಯಾಲಯಕ್‌ಕೆ ಬಂದಳು.

ಜ್‌ಯೋತಿಷ್‌ಯಾಲಯದ ಒಳಗೆ ಪ್‌ರವೇಶ ಮಾಡಿದಾಗ, ಒಳಗಡೆ ಒಂದು ರೀತಿಯ ಭಯವನ್‌ನು ಉಂಟುಮಾಡುವ ವಾತಾವರಣ ಇದ್‌ದಂತೆ ಅನ್‌ನಿಸಿತು. ನಾವು ಒಳಗೆ ಬಂದ ಬಾಗಿಲಿನ ಎದುರಿನ ಗೋಡೆಯ ಮೇಲೆ ಶಕ್‌ತಿಸ್‌ವರೂಪಣಿ ಪಾರ್‌ವತಿಯ ವಿವಿಧ ಫೋಟೋಗಳು.ಕೆಲವು ಅಪರೂಪದ ಚಿತ್‌ರಗಳು - ಕಾಮಾಖ್‌ಯ, ಮಹಿಷಾಸುರಮರ್‌ಧಿನಿ, ಸಂತೋಷಿ ಮಾ, ಶಿವ ಪಾರ್‌ವತಿ, .ಕಾಳಿಕಾದೇವಿ. ಅವುಗಳಲ್‌ಲಿ ಕಾಳಿಕಾದೇವಿಯ ಚಿತ್‌ರವೇ ಎಲ್‌ಲಕ್‌ಕಿಂತ ದೊಡ್‌ಡದಾಗಿ ಮಧ್‌ಯದಲ್‌ಲಿ ಇತ್‌ತು. ಆ ಚಿತ್‌ರದಲ್‌ಲಿ ಕಾಳಿಕಾದೇವಿಗೆ ನಾಲ್‌ಕು ಕೈಗಳು - ಒಂದು ಎಡ ಕೈಯಲ್‌ಲಿ ರಾಕ್‌ಷಸ ಚಂಡನ ತಲೆ, ಇನ್‌ನೊಂದು ಎಡಗೈಯಲ್‌ಲಿ ಒಂದು ಪಾತ್‌ರೆ. ಚಂಡನ ರುಂಡದಿಂದ ಸುರಿಯುತ್‌ತಿರುವ ರಕ್‌ತ ಈ ಪಾತ್‌ರೆಗೆ ಬೀಳುತ್‌ತಿದೆ. ಬಲಗೈವೊಂದರಲ್‌ಲಿ ಕೊಂಕಿದ ಖಡ್‌ಗ, ಇನೊಂದು ಬಲಗೈಯಲ್‌ಲಿ ತ್‌ರಿಶೂಲ. ರುಂಡಗಳ ನೀಳವಾದ ಮಾಲೆಯನ್‌ನು ಧರಿಸಿದ್‌ದಾಳೆ. ಸೊಂಟದ ಸುತ್‌ತ ಕತ್‌ತರಿಸಲ್‌ಪಟ್‌ಟ ರಾಕ್‌ಷಸರ ಕೈಗಳಿಂದ ಮಾಡಿದ ಡಾಬು! ಅವಳ ಬಲಗಾಲು ಕೆಳಗೆ ಬಿದ್‌ದಿರುವ ಶಿವನ ಎದೆಯ ಮೇಲೆ. ಕೋಪದಿಂದ ಕೂಡಿದ ಮುಖ. ಅವಳು ನಾಲಿಗೆಯನ್‌ನು ಹೊರಚಾಚಿದ್‌ದಾಳೆ. ನೋಡಲು ಭಯ ಹುಟ್‌ಟುಸುವಂತಿತ್‌ತು. ಪ್‌ರತಿ ಚಿತ್‌ರಕ್‌ಕೂ ಕೆಂಪು ಹೂವಿನ ಹಾರ. ದೇವಿಯ ಮುಖಕ್‌ಕೆ ಅರಿಸಿನ ಕುಂಕಮದ ದಪ್‌ಪನೆಯ ಬೊಟ್‌ಟುಗಳು. ಎಲ್‌ಲಾ ಚಿತ್‌ರಗಳಿಗೂ ವಿಭೂತಿಯ ಗೆರೆಗಳು. ಕೆಳಗೆ ಆ ಗೋಡೆಯ ಉದ್‌ದಕ್‌ಕೂ ಎರಡು ಅಡಿ ಅಗಲದ  ಒಂದು ವೇದಿಕೆ. ಅದರ ಮೇಲೆ ಪಾರ್‌ವತಿ ಮತ್‌ತು ಗಣೇಶನ ಪ್‌ರತಿಮೆಗಳಿದ್‌ದವು. ಅವುಗಳ ಸುತ್‌ತಾ ಹೂವು ಚೆಲ್‌ಲಿತ್‌ತು. ಕೆಂಪು ಬಣ್‌ಣದ ಹೂವುಗಳೇ ಜಾಸ್‌ತಿ. ಗುಲಾಬಿ, ಕನಕಾಂಬರ, ಕಣಗಲೆ, ಸೇವಂತಿ ಹೂವುಗಳಿದ್‌ದವು. ಪಾರ್‌ವತಿಯ ಪ್‌ರತಿಮೆಯ ಹತ್‌ತಿರ ಸುತ್‌ತಾ ಕುಂಕುಮ ಚೆಲ್‌ಲಿತ್‌ತು. ಬಹುಷಃ ಕುಂಕುಮಾರ್‌ಚನೆ ಮಾಡಿದ್‌ದಿರಬೇಕು. ಪ್‌ರತಿಮೆಗಳ ಎರಡೂ ಕಡೆ ದೀಪದ ಕಂಬಗಳು, ಐದು ಬತ್‌ತಿಯವು. ಎರಡೂ ದೀಪಗಳ ಒಂದೊಂದು ಬತ್‌ತಿಯನ್‌ನು ಹೊತ್‌ತಿಸಿದ್‌ದರು. ಎರಡೂ ಕಡೆ ದೀಪದ ಪಕ್‌ಕ ಸ್‌ಟೀಲ್‌ ಲೋಟದಲ್‌ಲಿ ಊದುಬತ್‌ತಿ ಹೊತ್‌ತಿಸಿತ್‌ತು. ಊದುಬತ್‌ತಿಯ ಹೊಗೆ ಜೋರಾಗಿಯೇ ಬರುತ್‌ತಿತ್‌ತು; ಆರತಿ ತಟ್‌ಟೆ, ಸಾಮ್‌ರಾಣಿ ತಟ್‌ಟೆ ಮತ್‌ತಿತರ ಪೂಜಾ ಸಾಮಗ್‌ರಿಗಳಿದ್‌ದವು. ವೇದಿಕೆಯ ಮುಂದೆ ನೆಲದಲ್‌ಲಿ ಎನಾಮಲ್‌ ಬಣ್‌ಣದಲ್‌ಲಿ ಕಪ್‌ಪು, ಬಿಳಿ, ಕಿತ್‌ತಳೆ, ಹಸಿರು ಮತ್‌ತು ಹಳದಿ ಬಣ್‌ಣಗಳನ್‌ನು ಬಳಸಿ ಬರೆದ ಕಾಳಿಯಂತ್‌ರದ ಚಿತ್‌ತಾರವಿತ್‌ತು. ಇದರ ಮಧ್‌ಯೆ ಒಂದು ಕಳಶ. ಒಳಗೆ ಮಾವಿನ ಸೊಪ್‌ಪಿನ ಒಂದು ಸಣ್‌ಣ ಗೊಂಚಲು. ಕಳಶಕ್‌ಕೆ ಅರಿಸಿನ ಕುಂಕುಮಗಳಿಂದ ಪೂಜಿಸಿದ್‌ದರು.

ರಸ್‌ತೆ ಕಡೆಗಿದ್‌ದ ಗೋಡೆಯ ಮೂಲೆಗೆ ಗೋಡೆಗೆ ಲಗತ್‌ತಿಸಿದಂತೆ ಒಂದು ಮೇಜು. ಮೇಜಿನ ಒಂದು ಕಡೆ ಜ್‌ಯೋತಿಷಿಗೆ ಒಂದು ಕುರ್‌ಚಿ. ಇದರಲ್‌ಲಿ ಕುಳಿತ ಜ್‌ಯೋತಿಷಿಗೆ ಎದುರಿನ ರಸ್‌ತೆ ಕಾಣುವಂತಿತ್‌ತು. ಮೇಜಿನ ಮೇಲೆ ಒಂದಷ್‌ಟು ಕವಡೆಗಳು. ಒಂದು ಹಲಗೆ, ಕೆಲವು ಬಳಪಗಳು ಸಹ ಇದ್‌ದವು. ಹಾಗೂ ಕೆಲವು ಪುಸ್‌ತಕಗಳಿದ್‌ದವು. ಬಹುಷಃ ಜ್‌ಯೋತಿಷ್‌ಯ ಮತ್‌ತು ದೇವರ ಕುರಿತ ಪುಸ್‌ತಕಗಳಿದ್‌ದಿರಬಹುದು. ಎದುರು ಬದಿಯಲ್‌ಲಿ ನಾಲ್‌ಕು ಕುರ್‌ಚಿಗಳು. ಈ ನಾಲ್‌ಕು ಕುರ್‌ಚಿಗಳು ರಸ್‌ತೆ ಬದಿಯ ಗೋಡೆಗೆ ಹತ್‌ತಿಕೊಂಡತೆ ಇದ್‌ದವು. ನಾವು ಒಳ ಬಂದ ಬಾಗಿಲನ್‌ನು ಬಿಟ್‌ಟು ಉಳಿದ ಜಾಗವನ್‌ನು ಪೂರ್‌ತಿ ಅಕ್‌ರಮಿಸಿಕೊಂಡಿದ್‌ದವು. ಈ ಕುರ್‌ಚಿಗಳು ಬಂದವರು ಕುಳಿತುಕೊಳ್‌ಳಲು. ಈ ಕುರ್‌ಚಿಗಳಲ್‌ಲಿ ಕುಳಿತವರಿಗೆ ಫೋಟಗಳಿದ್‌ದ ಗೋಡೆ ಎದುರಿಗೆ ಕಾಣುತ್‌ತಿತ್‌ತು. ಪೂಜೆಗೆ ಇಟ್‌ಟಿದ್‌ದ ವಿಗ್‌ರಹಗಳು, ಕಳಶ, ಕಾಳಿಯಂತ್‌ರ ಎಲ್‌ಲಾ ಕಾಣುತ್‌ತಿದ್‌ದವು.

ರಸ್‌ತೆಗೆ ಮುಖಮಾಡಿದ ಕುರ್‌ಚಿಯಲ್‌ಲಿ ಒಬ್‌ಬ ವ್‌ಯಕ್‌ತಿ ಕುಳಿತಿದ್‌ದ. ಅವನ ತೋಳುಗಳು, ಹೊಟ್‌ಟೆ ಮತ್‌ತು ಹಣೆಯ ಮೇಲೆಲ್‌ಲಾ ವಿಭೂತಿಯ ಪಟ್‌ಟೆಗಳಿದ್‌ದವು. ಹಣೆಯ ಮಧ್‌ಯೆ ಒಂದು ದೊಡ್‌ಡ ಕೆಂಪು ಕುಂಕುಮದ ಬೊಟ್‌ಟಿತ್‌ತು. ಎರಡೂ ಕೈಗಳ ನಾಲ್‌ಕೂ ಬೆರಳುಗಳಿಗೂ ಉಂಗುರಗಳು. ವಿವಿಧ ಹರಳುಗಳಿದ್‌ದ ಎಂಟು ಉಂಗುರಗಳು. ಬಲಗೈಗೆ ಒಂದು ಚಿನ್‌ನದ ಕಡಗ. ಕುತ್‌ತಿಗೆಯಲ್‌ಲಿ ಎರಡು ದಪ್‌ಪ ಚೈನ್‌ ಸರಗಳು. ಈತನೇ ಹೊರಗೆ ಇದ್‌ದ ಬೋರ್‌ಡಿನಲ್‌ಲಿ ಹೇಳಿರುವ ಜ್‌ಯೋತಿಷಿ ಪಂ. ಶಂಕರ ಭಟ್‌ ಇರಬೇಕು ಅನ್‌ನಿಸಿತು. ಶ್‌ರೀಮಂತ ಜ್‌ಯೋತಿಷಿ ಎನ್‌ನಿಸಿತು. ವ್‌ಯಾಪಾರ ಚೆನ್‌ನಾಗಿರಬಹುದು ಎನ್‌ನಿಸಿತು. ನಾವು ಆತನಿಗೆ ನಮಸ್‌ಕರಿಸಿದೆವು. ಆತ ಮರುನಮಸ್‌ಕಾರ ಮಾಡಿ, "ಬನ್‌ನಿ. ಕುಳಿತುಕೊಳ್‌ಳಿ" ಎಂದು ತನ್‌ನ ಎದುರಿಗೆ ಇದ್‌ದ ಕುರ್‌ಚಿಗಳತ್‌ತ ಕೈ ತೋರಿಸಿದ. ನಾವು ಕುಳಿತ ನಂತರ ಅವನು "ಏನು ವಿಷಯ? ನಿಮ್‌ಮ ಸಮಸ್‌ಯೆ ಏನು?" ಎಂದು ಕೇಳಿದ. ನಾನು ಗೋಡೆಯ ಮೇಲಿದ್‌ದ ಫೋಟೋಗಳನ್‌ನು ಮತ್‌ತೊಮ್‌ಮೆ ನಿಧಾನವಾಗಿ ನೋಡಿ ನಂತರ ಆತನತ್‌ತ ತಿರುಗಿ "ನಿಮ್‌ಮ ಸಲಹೆ ಬೇಕಾಗಿತ್‌ತು. ನನ್‌ನ ಒಂದು ಕೆಲಸ ಆಗಬೇಕಿದೆ. ಅದು ಆಗುವುದೋ ಇಲ್‌ಲವೋ ಎಂದು ಚಿಂತೆ. ಅದಕ್‌ಕೆ ನಿಮ್‌ಮ ಸಲಹೆ ಪಡೆಯೋಣ ಅಂತ ಬಂದೆ" ಎಂದೆ. "ಏನು ನಿಮ್‌ಮ ಸಮಸ್‌ಯೆ ಹೇಳಿ", ಎಂದು ಆತ ಕೇಳಿದ. "ಅದು" ಎಂದು ಹೇಳಲು ಅನುಮಾನಿಸುವಂತೆ ಮಾಡಿದೆ. "ಹೇಳಿ ಏನು ಸಮಸ್‌ಯೆ? ಯಾವ ಸಂಕೋಚವೂ ಬೇಡ. ಇಲ್‌ಲಿ ಸಂಪೂರ್‌ಣ ಗೌಪ್‌ಯತೆ ಕಾಪಾಡುತ್‌ತೇವೆ" ಅಂತ ಆಶ್‌ವಾಸನೆ ಕೊಟ್‌ಟ. ಆಗ ನಾನು "ಕೊರ್‌ಟ್‌‌ನಲ್‌ಲಿ ಒಂದು ಕೇಸಿದೆ. ಬಿಸಿನೆಸ್‌ ವಿಚಾರವಾಗಿ. ನನ್‌ನ ಪರವಾಗಿ ಆಗುತ್‌ತೋ ಇಲ್‌ಲವೋ ಅಂತ" ಎಂದು ಹೇಳಿದೆ. ನಾನು ಹೇಳುತ್‌ತಿದ್‌ದ ಮಾತುಗಳನ್‌ನು ಕೇಳಿಸಿಕೊಳ್‌ಳುತ್‌ತಾ ಇದ್‌ದ ಆತ ಪೂಜಾಸ್‌ಥಳದಲ್‌ಲಿದ್‌ದ ಒಂದು ನಿಂಬೆಹಣ್‌ಣನ್‌ನು ಎತ್‌ತಿಕೊಂಡು ಬಂದು ಮೇಜಿನ ಮೇಲಿಟ್‌ಟ. ಮೇಜಿನ ಡ್‌ರಾಯರ್‌ ತೆಗೆದು ಒಳಗಿನಿಂದ ಹಸಿದಾರದ ಉಂಡೆ ತೆಗೆದುಕೊಂಡ. ಹಸಿದಾರವು ಅರಿಸಿನದ ನೀರಿನಲ್‌ಲಿ ಅದ್‌ದಿ ಅದ್‌ದಿ ತೆಗೆದ ಹಾಗೆ ಹಳದಿ ಬಣ್‌ಣವಾಗಿತ್‌ತು. ಆ ಅರಿಸಿನ ಬಣ್‌ಣದ ದಾರವನ್‌ನು ನಿಂಬೆಹಣ್‌ಣಿನ ಮೇಲೆಲ್‌ಲಾ ಸುತ್‌ತತೊಡಗಿದ. "ಸಾಕಷ್‌ಟು ಹಣ ಬರಬಹುದು ಅಂತ ಕಾಣುತ್‌ತೆ." ಅಂತ ಆತ ಕೇಳಿದ. "ಹೌದು, ಹತ್‌ತು ಲಕ್‌ಷದ ವ್‌ಯವಹಾರ" ಎಂದು ನಾನು ಹೇಳಿದೆ. "ಯಾವಾಗಿನಿಂದ ಈ ಕೇಸ್‌ ಕೋರ್‌ಟಿನಲ್‌ಲಿದೆ?" ಎಂದು ಕೇಳುತ್‌ತಾ ನಿಂಬೆ ಹಣ್‌ಣಿನ ಮೇಲೆಲ್‌ಲಾ ಅರಿಸಿನದ ದಾರ ಸುತ್‌ತುವ ಕೆಲಸ ಮುಂದುವರೆಸಿದ್‌ದ. ದಾರ ಸುತ್‌ತುವ ದಿಕ್‌ಕನ್‌ನು ಅಗಾಗ ಬದಲಿಸುತ್‌ತ ನಿಂಬೆ ಹಣ್‌ಣು ಮೇಲೆ ಪೂರ್‌ತಿ ದಾರ ಬರುವಂತೆ ದಾರ ಸುತ್‌ತುತ್‌ತಾ ಮಾತನಾಡುತಿದ್‌ದ. "ಸುಮಾರು ಹತ್‌ತು ವರ್‌ಷಗಳಿಂದ" ಎಂದೆ. "ಊಂ.." ಎನ್‌ನುತ್‌ತಾ ಇದ್‌ದ ಆತ ದಾರ ಸುತ್‌ತಿದ ಕೆಲಸ ಮುಗಿಸಿ ನಿಂಬೆ ಹಣ್‌ಣನ್‌ನು ಮೇಜಿನ ಮೇಲೆ ತನ್‌ನ ಹತ್‌ತಿರ ಇರಿಸಿಕೊಂಡ. "ಯಾರಿಂದ ಹಣ ಬರಬೇಕಿದೆ?" ಎಂದ. "ಅದು ಬೇಡ. ನಿಮಗೆ ನನ್‌ನ ಸಮಸ್‌ಯೆ ಬಗೆ ಹರಿಸಲು ಸಾಧ್‌ಯವೋ ಇಲ್‌ಲವೋ ತಿಳಿಸಿ" ಎಂದೆ. "ಆಯ್‌ತು. ಸಮಸ್‌ಯೆ ಪರಿಹರಿಸೋಣ." ಎಂದು ಹೇಳುತ್‌ತಾ ದಾರ ಸುತ್‌ತಿದ ಆ ನಿಂಬೆ ಹಣ್‌ಣನು ಮೇಜಿನ ಡ್‌ರಾಯರ್‌ ಒಳಗೆ ಇಟ್‌ಟ, ನಂತರ ಮೇಜಿನ ಮೇಲಿದ್‌ದ ಪಂಚಾಗ ತೆಗೆದುಕೊಂಡ. ನಿಮ್‌ಮ ಹುಟ್‌ಟಿದ್‌ದ ದಿನ, ಜಾಗ, ಸಮಯ ಹೇಳ್‌ತೀರಾ?" ಎಂದ. ನಾನು "ತಗೊಳ್‌ಳಿ ನನ್‌ನ ಜಾತಕ ಇಲ್‌ಲಿದೆ." ಎಂದು ಹೇಳಿ ನನ್‌ನ ಜೋಬಿನಿಂದ ಜಾತಕ ತೆಗೆದುಕೊಟ್‌ಟೆ. "ಜಾತಕ ಇರೋದು ಬಹಳ ಅನುಕೂಲ ಆಯ್‌ತು." ಎನ್‌ನುತ್‌ತಾ ಜಾತಕವನ್‌ನು ಪರಿಶೀಲಿಸತೊಡಗಿದ. ಸ್‌ವಲ್‌ಪ ಸಮಯ ಜಾತಕ ನೋಡಿ ನಂತರ ಪಂಚಾಗ ತೆಗೆದುಕೊಂಡು ಅವತ್‌ತಿನ ಪುಟ ತೆಗೆದು ನೋಡಿದ. "ಗೋಚಾರದಲ್‌ಲಿ ಅಶುಭ ಗ್‌ರಹಗಳಿಂದ ನಿಮಗೆ ತೊಂದರೆ ಇದೆ. ಈಗ ಒಂದು ನಿಂಬೆ ಹಣ್‌ಣನ್‌ನು ಮಂತ್‌ರಿಸಿ ಕೊಡುತ್‌ತೇನೆ. ನಾನೀಗ ಹೇಳುವ ಹಾಗೆ ಮಾಡಿ. ಈಗ ನೇರವಾಗಿ ಮನೆಗೆ ಹೋಗಿ, ಕೈಕಾಲು ಮುಖ ತೊಳೆದುಕೊಂಡು ಪೂಜಾರೂಂನಲ್‌ಲಿ ಒಂದು ಕಳಶವನ್‌ನಿಟ್‌ಟು ಅದಕ್‌ಕೆ ನೀರನ್‌ನು ತುಂಬಿ. ಅದರ ಒಳಗೆ ನಾನು ಮಂತ್‌ರಿಸಿಕೊಡುವ ನಿಂಬೆ ಹಣ್‌ಣನ್‌ನು ಮುಳುಗಿಸಿ. ಅರಿಸಿನ, ಕುಂಕುಮ ಮತ್‌ತು ಹೂವುಗಳಿಂದ ಕಳಶದ ನೀರನ್‌ನು ಪೂಜಿಸಿ. ಊದುಬತ್‌ತಿ ಮತ್‌ತು ಕರ್‌ಪೂರದಾರತಿಯಿಂದ ಪೂಜೆ ಮಾಡಿ. ನಿಮ್‌ಮ ಮನೆದೇವರ ಪೂಜೆಯನ್‌ನೂ ಮಾಡಿ. ಪೂಜೆ ಎಲ್‌ಲಾ ಮುಗಿದ ಮೇಲೆ ಪೂಜಾರೂಂಗೆ ಬೀಗವನ್‌ನು ಹಾಕಿ. ನಾಳೆ ಸಂಜೆ ಇಲ್‌ಲಿಗೆ ಬರುವ ಒಂದು ಗಂಟೆ ಮೊದಲು ಪೂಜಾರೂಂ ಬೀಗ ತೆಗೆದು ಬಾಗಿಲು ತೆಗೆಯಿರಿ. ಕಳಶದ ಪೂಜೆಯನ್‌ನು ಮಾಡಿ ನಂತರ ನಿಮ್‌ಮ ಮನೆದೇವರ ಪೂಜೆಯನ್‌ನೂ ಮಾಡಿ. ಪೂಜೆಯಾದ ಮೇಲೆ ಕಳಶದಲ್‌ಲಿಟ್‌ಟಿದ್‌ದ ನಿಂಬೆಯ ಹಣ್‌ಣನ್‌ನು ಹೊರ ತೆಗೆದು ಚನ್‌ನಾಗಿ ಒರೆಸಿ ಶುಭ್‌ರವಾದ ಕೆಂಪು ಬಟ್‌ಟೆಯಲ್‌ಲಿ ಸುತ್‌ತಿಕೊಂಡು ಮಡಿಯಿಂದ ಇಲ್‌ಲಿಗೆ ತೆಗೆದುಕೊಂಡು ಬನ್‌ನಿ. ನೀವು ತರುವ ನಿಂಬೇ ಹಣ್‌ಣನ್‌ನಿಟ್‌ಟು ನಾನು ದೇವಿ ಪೂಜೆ ಮಾಡಿ ನಿಮ್‌ಮ ಸಮಸ್‌ಯಗೆ ಪರಿಹಾರ ಕೇಳುತ್‌ತೇನೆ. ದೇವಿ ಏನು ಸೂಚಿಸುವಳೋ ನೋಡೋಣ. ಎಲ್‌ಲೂ ಎನೂ ಲೋಪವಾಗದಂತೆ ಎಚ್‌ಚರವಹಿಸಿ" ಎಂದ. "ಆಗಬಹುದು" ಎಂದೆ. ಜ್‌ಯೋತಿಷಿ ಮೇಜಿನ ಡ್‌ರಾಯರ್‌ ಹೊರಕ್‌ಕೆಳೆದು ಹಳದಿಯ ಹಸಿದಾರ ಸುತ್‌ತಿದ್‌ದ ನಿಂಬೆ ಹಣ್‌ಣನ್‌ನು ತೆಗೆದುಕೊಂಡು ಪೂಜೆಯ ಸ್‌ಥಳಕ್‌ಕೆ ಹೋಗಿ ಅರಿಸಿನ ಕುಂಕುಮ ಸ್‌ವಲ್‌ಪ ಸಿಂಪಡಿಸಿ ಊದುಬತ್‌ತಿಯ ಹೊಗೆಯಲ್‌ಲಿ ಕ್‌ಷಣ ಹೊತ್‌ತು ಹಿಡಿದ. ಪಾರ್‌ವತಿಯ ಪ್‌ರತಿಮೆಗೆ ಮತ್‌ತು ಕಾಳಿಕಾದೇವಿಯ ಫೋಟೋಗೆ ತೊರಿಸಿ ನಂತರ ನಿಂಬೆಯ ಹಣ್‌ಣನ್‌ನು ಮುಷ್‌ಠಿಯಲ್‌ಲಿ ಹಿಡಿದು ಮೂಗಿನ ಮೇಲೆ ಹುಬ್‌ಬಿನ ಮಧ್‌ಯ ಒತ್‌ತಿಕೊಂಡು ಕಣ್‌ಣು ಮುಚ್‌ಚಿ ಯಾವುದೋ ಮಂತ್‌ರವನ್‌ನು ಹೇಳಿಕೊಂಡ. ನಂತರ ಮಂತ್‌ರಿಸಿದ ಆ ನಿಂಬೆ ಹಣ್‌ಣನ್‌ನು ನನ್‌ನ ಬಲಗೈಗೆ ಕೊಟ್‌ಟ. "ಈಗ ನೂರು ರೂಪಾಯಿ ದಕ್‌ಷಿಣೆ ಕೊಡಿ. ನಾಳೆ ದೇವಿಯ ಸೂಚನೆ ನೋಡಿ ಖರ್‌ಚು ಎಷ್‌ತಾಗುತ್‌ತೆ ಅಂತ ಗೊತಾಗುತ್‌ತೆ" ಎಂದು ಹೇಳಿದ. "ಸರಿ ಆಗಲಿ" ಎಂದು ಹೇಳಿ ಅವನಿಗೆ ನೂರು ರೂಪಾಯಿ ದಕ್‌ಷಿಣೆ ಕೊಟ್‌ಟೆ. ನಾನು ಮತ್‌ತು ನನ್‌ನ ಹೆಂಡತಿ ಮನೆಯ ಕಡೆಗೆ ಹೊರೆಟೆವು.

ಮನೆಗೆ ಹೋಗುತ್‌ತಾ ನನ್‌ನ ಹೆಂಡತಿ ಕೇಳಿದಳು, "ಯಾವುದ್‌ ರೀ, ಕೇಸು; ನನಗೆ ಗೊತ್‌ತಿಲ್‌ಲದ್‌ದು?" "ಯಾವ್‌ ಕೇಸೂ ಇಲ್‌ಲ. ಸುಮ್‌ನೆ ಹೇಳ್‌ದೆ." ಎಂದು ನಾನಂದೆ. "ನೀವ್‌ ಒಬ್‌ಬರು. ಮಂತ್‌ರಿಸಿದ ನಿಂಬೆಹಣ್‌ಣು ಬೇರೆ ಕೊಟ್‌ಟಿದಾನೆ." ಎಂದಳು ನನ್‌ನ ಶ್‌ರೀಮತಿ. "ಏನ್‌ ಮಾಡ್‌ ಬೇಕ್‌ ಅಂತ ಹೇಳಿದಾನಲ್‌ಲ. ನಿಂಗೆ ಇಷ್‌ಟ ಇದ್‌ರೆ ಮಾಡು." ಎಂದೆ. ನನ್‌ನ ಶ್‌ರೀಮತಿಗೆ ಪೂಜೆ ಪುನಸ್‌ಕಾರಗಳಲ್‌ಲಿ ಬಹಳ ಶ್‌ರದ್‌ಧೆ. ಮನೆಗೆ ಹೋದ ಮೇಲೆ, ಅವಳು ಸ್‌ನಾನ ಮಾಡಿ ಬಂದು ಕಳಶವನ್‌ನಿಟ್‌ಟು, ಅದರಲ್‌ಲಿ ನಿಂಬೆ ಹಣ್‌ಣನ್‌ನು ಮುಳುಗಿಸಿದಳು. ಕಳಶದ ನೀರಿಗೆ ಅರಿಸಿನ ಕುಂಕುಮ ಹಾಕಿದಳು. ಹೂವನ್‌ನೂ ಹಾಕಿದಳು. ಊದುಬತ್‌ತಿ ಮತ್‌ತು ಕರ್‌ಪೂರದಾರತಿಯಿಂದ ಪೂಜೆ ಮಾಡಿದಳು. ಆ ಜ್‌ಯೋತಿಷಿ ಹೇಳಿದ ಹಾಗೆ ಪೂಜೆಯನ್‌ನು ಮಾಡಿದ ನಂತರ ಪೂಜಾರೂಂನ ಬಾಗಿಲಿಗೆ ಬೀಗ ಹಾಕಿದಳು.ಮಾರನೆಯ ದಿನ ಮಧ್‌ಯಾಹ್‌ನ ಊಟವಾದ ನಂತರ ಸ್‌ವಲ್‌ಪ ಮಲಗಿದ್‌ದೆ. ನನ್‌ನ ಶ್‌ರೀಮತಿ "ಏನ್‌ ರೀ, ಬನ್‌ನಿ ಇಲ್‌ಲಿ ಬೇಗ" ಎಂದು ಜೋರಾಗಿ ಕರೆದಳು. ಧ್‌ವನಿಯಲ್‌ಲಿ ಭಯವಿದ್‌ದಂತೆ ಅನ್‌ನಿಸಿತು. "ಏನು? ಬಂದೆ" ಅನ್‌ನುತ್‌ತಾ ನಾನು ಬೆಡ್‌‌ರೂಂನಿಂದ ಬಂದೆ. ನನ್‌ನ ಹೆಂಡತಿ ಪೂಜಾರೂಂನಲ್‌ಲಿದ್‌ದಳು. "ಏನಾಯಿತು?" ಎಂದೆ. "ನೋಡೀಂದ್‌ರೆ,. ಮಂತ್‌ರಿಸಿದ ನಿಂಬೆ ಹಣ್‌ಣು ಇಲ್‌ಲ. ಮಾಯವಾಗಿದೆ." ಎಂದಳು. ಅವಳ ಕೈಯಲ್‌ಲಿ ಅರಿಸಿನದ ದಾರ ಗೋಜಲಾಗಿ ಉಂಡೆಯಂತೆ ಅವಳ ಕೈಯಲ್‌ಲಿತ್‌ತು. ಅವಳ ಕೈ ಅರಿಸಿನ ಕುಂಕುಮದ ಓಕಳಿ ನೀರಿನಲ್‌ಲಿ ಅದ್‌ದಿದಂತಿತ್‌ತು. ಆಗ ನನಗರ್‌ಥವಾಯಿತು: ಅವಳು ಆ ಜ್‌ಯೋತಿಷಿ ಹೇಳಿದಂತೆ ಪೂಜಾರೂಂನ್‌ ಬಾಗಿಲು ತೆಗೆದು ಕಳಶಕ್‌ಕೆ ಪೂಜೆ ಮಾಡಿದ್‌ದಾಳೆ. ಕೆಂಪು ಬಟ್‌ಟೆಯೊಂದನ್‌ನು ಸಿದ್‌ಧವಾಗಿಟ್‌ಟುಕೊಂಡು ಕಳಶದ ನೀರಿನಿಂದ ಮಂತ್‌ರಿಸಿದ ನಿಂಬೆ ಹಣ್‌ಣನ್‌ನು ಹೊರಗೆ ತೆಗೆಯಲು ಹೋಗಿದ್‌ದಾಳೆ. ಅಲ್‌ಲಿ ಮಂತ್‌ರಿಸಿದ ನಿಂಬೆಹಣ್‌ಣು ಇಲ್‌ಲ! ಕೇವಲ ಅದರ ಮೇಲೆ ಸುತ್‌ತಿದ್‌ದ ದಾರದ ಗೋಜಲು ಮಾತ್‌ರ ಅವಳ ಕೈಯಲ್‌ಲಿದೆ. "ಅಷ್‌ಟೇ ತಾನೆ. ಬಿಡು." ಎಂದು ನಾನಂದಾಗ ಅವಳು "ಏನು, ಅಷ್‌ಟೇ ತಾನೆ?! ಒಳ್‌ಳೇ ಫಜೀತಿ ತಂದಿಟ್‌ರಿ. ಏನೋ ಮಾಟ ಮಾಡಿದ್‌ದಾನೆ? ಗ್‌ರಹಚಾರ. ಏನಾಗುತ್‌ತೋ? ಬನ್‌ನಿ ಅವನ ಹತ್‌ತಿರ ಹೋಗೋಣ" ಎಂದಳು. "ಏನೂ ಬೇಡ. ಏನಾಗಿದೆ ಅಂತ ಯೋಚಿಸೋಣ", ಎಂದು ನಾನಂದೆ. ನನ್‌ನ ಹೆಂಡತಿ ಮಾತ್‌ರ ಬೇಜಾರು ಮತ್‌ತು ಆತಂಕದಿಂದ ಚಡಪಡಿಸುತ್‌ತಿದ್‌ದಳು.

ಮಾರನೆಯ ದಿನ ಬೆಳಿಗ್‌ಗೆ ನನ್‌ನ ಶ್‌ರೀಮತಿ ತನ್‌ನ ವಾರಗಿತ್‌ತಿ ಅಂದರೆ ನನ್‌ನ ತಮ್‌ಮನ ಹೆಂಡತಿಯ ಹತ್‌ತಿರ ಆ ಜ್‌ಯೋತಿಷಿಯ ಬಗ್‌ಗೆ ವಿಚಾರಿಸುತ್‌ತಿದ್‌ದಳು. ನನ್‌ನ ತಮ್‌ಮನಿಗೆ ಜ್‌ಯೋತಿಷಿಗಳ ಬಳಿ ಭವಿಷ್‌ಯ ಕೇಳುವ ಚಟ. ನನ್‌ನ ನಾದಿನಿ ಹೇಳಿದಳು "ಓ, ಹೌದಾ? ಆ ಜ್‌ಯೋತಿಷೀನೇ ಇವರ ಕೊಲೀಗ್‌ ಒಬ್‌ಬರಿಗೆ ಹೀಗೇ ಮಾಡಿದ್‌ದನಂತೆ..." ಅವರು ಅವನ ಹತ್‌ತಿರ ಜ್‌ಯೋತಿಷ್‌ಯ ಕೇಳಲು ಹೋಗಿದ್‌ದಾಗ ಇದೇ ರೀತಿ ನಿಂಬೇಹಣ್‌ಣನ್‌ನು ಮಂತ್‌ರಿಸಿ ಕೊಟ್‌ಟಿದ್‌ದನಂತೆ. ನಿಂಬೇಹಣ್‌ಣು ಮಾಯವಾದಾಗ ಅವರು ಹೆದರಿ ಅವನ ಹತ್‌ತಿರ ಹೋದಾಗ ಅವನು "ಏನೋ ಅಪಚಾರವಾಗಿದೆ. ದೇವಿ ನಿಮ್‌ಮ ಮೇಲೆ ಮುನಿಸಿಕೊಂಡಿದ್‌ದಾಳೆ. ನಿಮಗೆ ಕಷ್‌ಟ ಕಾದಿದೆ." ಎಂದೆಲ್‌ಲಾ ಹೆದರಿಸಿದನಂತೆ. ಆಗಲಂತೂ ಅವರಿಗೆ ತುಂಬಾ ಭಯವಾಯಿತಂತೆ. "ಈಗ ಏನು ಮಾಡೋದು?" ಎಂದು ಅವನನ್‌ನು ಕೇಳಿದರಂತೆ. ದೇವಿಯನ್‌ನು ಶಾಂತಗೊಳಿಸಲು ಯಾವುದೋ ಹೋಮ, ಪೂಜೆ ಮಾಡಬೇಕು ಎಂದೆಲ್‌ಲಾ ಹೇಳಿ ಸುಮಾರು ಎಂಟು ಹತ್‌ತು ಸಾವಿರ ಖರ್‌ಚು ಮಾಡಿಸಿದನಂತೆ. "ಅದೇ, ನಮ್‌ಮ ಅಪಾರ್‌ಟ್‌‌ಮೆಂಟ್‌ ಪಕ್‌ಕದ ಅಪಾರ್‌ಟ್‌‌ಮೆಂಟ್‌‌ನಲ್‌ಲಿ ಇದ್‌ದರಲ್‌ಲಾ ರವಿ, ಅವರಿಗೇ ಹೀಗೆ ಮಾಡಿದ್‌ದು ಅವನು" ಎಂದು ಹೇಳಿದಳು ನನ್‌ನ ನಾದಿನಿ. ನನ್‌ನ ತಮ್‌ಮ, ಅವನ ಹೆಂಡತಿ ಮತ್‌ತು ಮಗ ಮನೆಗೆ ಬಂದಿದ್‌ದರು. ಸಂಕ್‌ರಾಂತಿ ಹಬ್‌ಬಕ್‌ಕೆ ಇಬ್‌ಬರೂ ಸೇರಿ ಸಕ್‌ಕರೆ ಅಚ್‌ಚು ಮಾಡಿಕ್‌ಕೊಳ್‌ಳುತ್‌ತಿದ್‌ದರು. ಹಾಲ್‌‌ನಲ್‌ಲಿ ಕುಳಿತಿದ್‌ದ ನನಗೆ ನನ್‌ನ ಶ್‌ರೀಮತಿ ಮತ್‌ತು ನನ್‌ನ  ನಾದಿನಿ ಮಾತನಾಡುವುದು ಕೇಳಿಸಿತ್‌ತಿತ್‌ತು. "ಏನೋ ಅದು ಕೃಷ್‌ಣ?" ಅಂತ ನನ್‌ನ ಪಕ್‌ಕದಲಿ ಕುಳಿತಿದ್‌ದ ನನ್‌ನ ತಮ್‌ಮನನ್‌ನು ಕೇಳಿದೆ. "ರವಿ ಅವರಿಗೆ ಸುಮ್‌ಮನೆ ಖರ್‌ಚು ಮಾಡಿಸಿದ ಆ ಢೋಂಗಿ ಜ್‌ಯೋತಿಷಿ. ರವಿ ಅವನ್‌ ಹತ್‌ತಿರ ಯಾವ ಪ್‌ರಶ್‌ನೆ ಕೇಳಿದ್‌ದರೋ ಅದಕ್‌ಕೆ ಅವನಿಂದ ಪರಿಹಾರನೂ ಸಿಗಲಿಲ್‌ಲ.", ಎಂದು ಹೇಳಿದ ನನ್‌ನ ತಮ್‌ಮ. "ಭವಿಷ್‌ಯ ಕೇಳೋಕೇ ಹೋಗಬಾರದು", ಎಂದು ನಾನು ಹೇಳಿದೆ. ಇದನ್‌ನು ಕೇಳಿಸಿಕೊಂಡ ನನ್‌ನ ಶ್‌ರೀಮತಿ ಅಡುಗೆಮನೆಯಿಂದ ಹಾಲ್‌‍ಗೆ ಬಂದು "ಆಹಾ, ಏನ್‌ ಮಾತಡ್‌ತೀರಿ? ನಿನ್‌ನೆ ನೀವು ಏಕೆ ಹೋಗಿದ್‌ದು?" ಎಂದು ನನ್‌ನನ್‌ನು ಮೂದಲಿಸಿದಳು. "ನಾನೇನೂ ಯಾವುದೇ ಪರಿಹಾರಕ್‌ಕೆ ಅವನ ಹತ್‌ತಿರ ಹೋಗಿರಲ್‌ಲಿಲ್‌ಲ. ಸುಮ್‌ಮನೆ ಕುತೂಹಲಕ್‌ಕೆ. ಅದು ನಿನಗೂ ಗೊತ್‌ತು." ಎಂದೆ. "ಏನೋ? ಈಗ ನೋಡಿ ಏನಾಗಿದೆ?" ಎಂದು ಕೇಳಿದಳು ನನ್‌ನ ಶ್‌ರೀಮತಿ.

ಅಷ್‌ಟರಲ್‌ಲಿ ನನ್‌ನ ತಮ್‌ಮನ ಮಗ ಮೂರು ವರ್‌ಷದ ಅಭಿಷೇಕ್‌ ಅಳುತ್‌ತಾ ಅವನ ಅಮ್‌ಮನ ಹತ್‌ತಿರ ಬಂದ. "ಏನಾಯಿತೋ?" ಎಂದು ಅವನನ್‌ನು ನನ್‌ನ ನಾದಿನಿ ಕೇಳಿದಳು. "ಅಮ್‌ಮ ನೀನು ಕೊಟ್‌ಟ ಆನೆ ನೀರಲ್‌ಲಿ ಬಿದ್‌ ಹೋಯ್‌ತು. ತೆಕ್‌ಕೊಡು ಬಾ." ಅಂದ. ಆನೆ ಆಕಾರದ ಸಕ್‌ಕರೆ ಅಚ್‌ಚು ಡೈನಿಂಗ್‌ ಟೇಬಲ್‌ ಮೇಲಿದ್‌ದ ನೀರಿನ ಮಗ್‌‌ನಲ್‌ಲಿ ಬಿದ್‌ದುಬಿಟ್‌ಟಿತ್‌ತು. "ಇರು ಒಂದ್‌ ನಿಮಿಷ. ಪಾಕ ಆರಿ ಹೋಗುತ್‌ತೆ. ಅಚ್‌ಚಲ್‌ಲಿ ಹಾಕಿ ಬಂದು ತೆಕೋಡ್‌ತೀನಿ" ಎಂದು ಅಡಿಗೆ ಮನೆಗೆ ಹೋದಳು ನನ್‌ನ ನಾದಿನಿ ತನ್‌ನ ಅತ್‌ತಿಗೆ ಜೊತೆ. ಸ್‌ವಲ್‌ಪ ಸಮಯದ ನಂತರ ಬಂದು ನೀರಿನಲ್‌ಲಿ ಬಿದ್‌ದಿದ್‌ದ ಸಕ್‌ಕರೆ ಅಚ್‌ಚನ್‌ನು ತೆಗೆದು ಮಗನಿಗೆ ಕೊಟ್‌ಟಳು. ಅವನು ಅಳಲು ಷುರು ಮಾಡಿದ. "ಏನೋ ಅಯ್‌ತು?" ಎಂದು ನಾನು ಅವನನ್‌ನು ಕೇಳಿದೆ. ಅವನು ಅಳುತ್‌ತಾ "ನೋಡಿ ದೊಡ್‌ಡಪ್‌ಪ, ಆನೆ ಕಾಲು ಇಲ್‌ವೇ ಇಲ್‌ಲ." ಎಂದ. "ಎಲ್‌ಲಿ ಕೊಡು ಇಲ್‌ಲಿ" ಎಂದು ಅವನ ಹತ್‌ತಿರ ಇದ್‌ದ ಸಕ್‌ಕರೆ ಅಚ್‌ಚನ್‌ನು ಇಸಕೊಂಡೆ. ನೋಡಿದರೆ ಸಕ್‌ಕರೆ ಅಚ್‌ಚು ನೀರಿನಲ್‌ಲಿ ಐದು ಹತ್‌ತು ನಿಮಿಷ ಮುಳುಗಿದ್‌ದರಿಂದ ಸ್‌ವಲ್‌ಪ ಕರಗಿತ್‌ತು. ಆನೆಯ ಕಾಲುಗಳು, ಸೊಂಡಿಲು ಹಾಗೂ ಸುತ್‌ತಾ ಅಂಚೆಲ್‌ಲಾ ನೀರಿನಲ್‌ಲಿ ಕರಗಿದ್‌ದವು. ಆ ಸಕ್‌ಕರೆ ಅಚ್‌ಚನ್‌ನು ನೋಡುತ್‌ತಿದಂತೆ ನನಗೆ ಹೊಳೆಯಿತು ಆ ಜ್‌ಯೋತಿಷಿ ಏನು ಮಾಡಿದ್‌ದಾನೆ ಎಂದು. "ಲೇ ಪದ್‌ಮ ಬಾರೇ ಇಲ್‌ಲಿ. ನೀನೂ ಬಾಮ್‌ಮ ಲಕ್‌ಷ್‌ಮಿ", ಎಂದು ಅಡಿಗೆ ಮನೆಯಲ್‌ಲಿದ್‌ದ ನನ್‌ನ ಹೆಂಡತಿ ಮತ್‌ತು ನನ್‌ನ ತಮ್‌ಮನ ಹೆಂಡತಿ ಇಬ್‌ಬರನ್‌ನೂ ಕರೆದೆ. ಅವರಿಬ್‌ಬರೂ ಹಾಲ್‌‌ಗೆ ಬಂದು ದೀವಾನ ಮೇಲೆ ಕುಳಿತುಕೊಳ್‌ಳೂತ್‌ತಾ "ಏನು?" ಎಂದರು. "ಆ ಜ್‌ಯೋತಿಷಿ ಏನ್‌ ಟ್‌ರಿಕ್‌ ಮಾಡ್‌ತಿದ್‌ದಾನೆ ಅಂತ ಗೊತ್‌ತಾಗಿ ಹೋಯಿತು." ಎಂದೆ. "ಇಲ್‌ಲಿ ನೋಡಿ ಸಕ್‌ಕರೆ ಅಚ್‌ಚು ಐದ್‌ ಹತ್‌ ನಿಮಿಷ ನೀರಲ್‌ಲಿ ಇದ್‌ದಿದ್‌ದಕ್‌ಕೆ ಎಷ್‌ಟ್‌ ಕರಗಿ ಹೋಗಿದೆ. ಅವನು ನಮಗೆ ನಿಂಬೆ ಹಣ್‌ಣಿನಂತೆ ಗುಂಡಗಿದ್‌ದ ಸಕ್‌ಕರೆ ಅಥವಾ ಬತ್‌ತಾಸು ಉಂಡೆಗೆ ದಾರ ಸುತ್‌ತಿ ಕೊಟ್‌ಟಿದ್‌ದ. ಅದಕ್‌ಕೇ ಅದು ನೀರಿನಲ್‌ಲಿ ರಾತ್‌ರಿಯೆಲ್‌ಲಾ ಇಟ್‌ಟಿದ್‌ದರಿಂದ ಕರಗಿ ಹೋಗಿದೆ. ಅಷ್‌ಟೇ." ಎಂದೆ. "ಅದು ಹೇಗ್‌ರೀ? ನಮ್‌ಮ ಎದುರಿನಲ್‌ಲೇ ನಿಂಬೇ ಹಣ್‌ಣಿಗೇ ದಾರ ಸುತ್‌ತುತ್‌ತಿದ್‌ನಲ್‌ಲಾ" ಎಂದಳು ನನ್‌ನ ಶ್‌ರೀಮತಿ. "ನೆನಪಿಸ್‌ಕೋ. ನಿನ್‌ನೆ ಅವನು ಏನ್‌ ಮಾಡ್‌ದ. ನಿಂಬೆಹಣ್‌ಣಿಗೆ ನಮ್‌ಮ ಎದುರಿನಲ್‌ಲೇ ದಾರ ಏನೋ ಸುತ್‌ತಿದ. ಆ ನಿಂಬೇ ಹಣ್‌ಣನ್‌ನ ಮೇಜಿನ ಮೇಲೆ ಇಟ್‌ಟಿದ್‌ದ. ಅದು ಸರಿ. ಆದರೆ ಪಂಚಾಂಗ ತೆಗೆಯೋದಿಕ್‌ಕೆ ಮೇಜಿನ ಮೇಲೆ ಜಾಗ ಬೇಕೂಂತ ನಿಂಬೆಹಣ್‌ಣು ಮೇಜಿನ ಡ್‌ರಾಯರ್‌ ಒಳಗೆ ಇಟ್‌ಟ ಅಲ್‌ವ? ನೆನಪಿಸ್‌ಕೋ?" ಎಂದು ನಾನು ಹೇಳಿದಾಗ "ಹೌದು." ಎಂದಳು ನನ್‌ನ ಶ್‌ರೀಮತಿ. "ಕೊನೇಲ್‌ಲಿ ಕೊಡುವಾಗ ಮೇಜಿನ ಡ್‌ರಾಯರ್‌ ಇಂದ ತೆಗೆದು ಕೊಟ್‌ಟಿದ್‌ದು ಆ ನಿಂಬೇ ಹಣ್‌ಣಲ್‌ಲ. ಅವನು ಮೊದಲೇ ಮಾಡಿಟ್‌ಟಿದ್‌ದ ಸಕ್‌ಕರೆ ಉಂಡೆ! ಅಲ್‌ಲೇ ಅವನು ಕರಾಮತ್‌ತು ಮಾಡಿದ್‌ದು. ನಿಂಬೆ ಹಣ್‌ಣನ್‌ನ ಹಾಗೇ ಕೊಡಬಹುದಿತ್‌ತು. ದಾರದಲ್‌ಲಿ ಸುತ್‌ತಿಕೊಟ್‌ಟಿದೇಕೆ?ಮೋಸಮಾಡುವ ಉದ್‌ದಿಶ್‌ಯವಿಲ್‌ಲದಿದ್‌ದಿದ್‌ದರೆ ನಿಂಬೇಹಣ್‌ಣನ್‌ನು ಹಾಗೇ ಕೊಡಬಹುದಿತ್‌ತು.  ಯೋಚನೆಮಾಡಿ." ಎಂದು ನಾನಂದೆ. ಎಲ್‌ಲರೂ"ಹೌದ್‌ ಅಲ್‌ವಾ!" ಎಂದು ಆಶ್‌ಚರ್‌ಯಪಟ್‌ಟರು. "ಅದಕ್‌ಕೇ ನಾನು ಯಾವಾಗಲೂ ಹೇಳೋದು 'ನೋಡಿದ್‌ದೂ ಸುಳ್‌ಳಾಗಬಹುದು. ಪ್‌ರತ್‌ಯಕ್‌ಷವಾದರೂ ಪ್‌ರಮಾಣಿಸಿ ನೋಡು' ಅಂತ" ಎಂದು ಹೇಳಿದೆ.

Monday 11 February 2013

ಕೃಷ್‌ಣಮ್‌ಮನ ದೆವ್‌ವ (v1)

ಕೃಷ್‌ಣಮ್‌ಮನ ದೆವ್‌ವ

ನಾನಾಗ ಪ್‌ರೈಮರಿ ಏಳನೇ ಕ್‌ಲಾಸ್‌‌ನಲ್‌ಲಿ ಓದುತ್‌ತಿದ್‌ದೆ. ತುಮಕೂರಿನ ಸಂಪಂಗಿರಾಮನಗರ ಪ್‌ರದೇಶದಲ್‌ಲಿ ನಮ್‌ಮ ಮನೆ ಇತ್‌ತು. ಊರಿನ ಅಂಚಿನಲ್‌ಲಿದ್‌ದ ಮನೆಗಳಲ್‌ಲಿ ನಮ್‌ಮ ಮನೆಯೂ ಒಂದು. ಮನೆಯಿಂದ ಸ್‌ವಲ್‌ಪ ದೂರದ ನಂತರ ಬಯಲು. ಹುಲ್‌ಲು, ಪೊದೆಗಳು ಮತ್‌ತು ಅಲ್‌ಲಲ್‌ಲಿ ಮರಗಳು. ಒಂದೆರಡು ಕಾಲುದಾರಿಗಳು ಇದ್‌ದವು. ಹುಣಿಸೇಮರ, ಆಲದ ಮರ, ಹಲಸಿನ ಮರ, ಹೊಂಗೆ ಮರಗಳು ಹೆಚ್‌ಚಾಗಿದ್‌ದವು. ಹಲವು ಮರಗಳಿಗೆ ಹಬ್‌ಬಿಕೊಂಡು ದಟ್‌ಟವಾಗಿ ಬೆಳೆದಿದ್‌ದ ಹಲವು ರೀತಿಯ ಬಳ್‌ಳಿಗಳು. ದೂರದಲ್‌ಲಿ ಕೆರೆ. ಕೆರೆಯತ್‌ತ ಇಳಿಯುತ್‌ತಿರುವ ಬಯಲು ಅದು. ರಾತ್‌ರಿಯಲ್‌ಲಿ ಅತ್‌ತ ಹೋಗಲು ಭಯವಾಗುತ್‌ತಿತ್‌ತು.
ನಮ್‌ಮ ಮನೆಯಿಂದ ಅನತಿ ದೂರದಲ್‌ಲಿ ಒಂದು ಪಾಳು ಮನೆ. ಯಾವ ದುರಸ್‌ತಿಯೂ ಇಲ್‌ಲದೇ ವರ್‌ಷಗಟ್‌ಟಲೇ ಮಳೆ ಮತ್‌ತು ಬಿಸಿಲಿಗೆ ಮೈ ಒಡ್‌ಡಿ ಬಹಳ ಶಿಥಿಲವಾಗಿದ್‌ದ ಮನೆ. ಅಲ್‌ಲಲ್‌ಲಿ ಬಿರುಕು ಬಿಟ್‌ಟ ಗೋಡೆ, ಬಣ್‌ಣವೆಲ್‌ಲಾ ಕರಗಿ, ಕೆಲವೆಡೆ ಇಟ್‌ಟಿಗೆಯೂ ಕರಗಿ, ಅಲ್‌ಲಲ್‌ಲಿ ಬಿದ್‌ದು ಹೋಗಿದ್‌ದ ಪಾಳು ಗೋಡೆಗಳು. ಬಾಗಿಲು ಮತ್‌ತು ಕಿಟಕಗಳಿದ್‌ದ ಜಾಗದಲ್‌ಲಿ ಏನೂ ಇಲ್‌ಲ. ಜೇಡರ ಬಲೆ ಅಲ್‌ಲಲ್‌ಲಿ. ಕೆಲವೆಡೆ ಗೋಡೆಗೆ ಹಬ್‌ಬಿದ ಬಳ್‌ಳಿಗಳು. ಆ ಮನೆಯ ಹಿತ್‌ತಲಿದ್‌ದ ಜಾಗದಲ್‌ಲಿ ಒಂದು ಮುದಿ ಹುಣಿಸೇಮರ. ನೋಡಲು ಹೆದರಿಕೊಳ್‌ಳುವಂತಿತ್‌ತು ಆ ಮನೆ. ಆ ಮನೆಯನ್‌ನು ದೆವ್‌ವದ ಮನೆಯೆಂದು ಅಲ್‌ಲಿನ ಜನರು ಹೇಳಿತ್‌ತಿದ್‌ದರು. ಹಲವು ವರ್‌ಷಗಳ ಹಿಂದೆ ಆ ಮನೆಯಲ್‌ಲೇ ತೀರಿಕೊಂಡಿದ್‌ದ ಕೃಷ್‌ಣಮ್‌ಮ ಎಂಬ ಒಬ್‌ಬ ಮುದಿ ಹೆಂಗಸಿನ ದೆವ್‌ವ ಆ ಮನೆಯಲ್‌ಲಿ ಇದೆ ಎಂದು ಜನರಂದುಕೊಳ್‌ಳುತ್‌ತಿದ್‌ದರು. ಕೆಲವೊಮ್‌ಮೆ ಆ ಮನೆಯಿಂದ ನಾಯಿ ಗೀಳಿಡುವ ಶಬ್‌ದ ಕೇಳಿ ಬರುತ್‌ತಿತ್‌ತು. ಕೆಲವೊಮ್‌ಮೆ ಪುಟ್‌ಟ ಪಾಪುವೊಂದು ಅಳುತ್‌ತಿರುವಂತಹ ಶಬ್‌ದ ಕೇಳಿ ಬರುತ್‌ತಿತ್‌ತು. ಜೊತೆಯಲ್‌ಲಿ ನಾಯಿಗಳು ಜೋರಾಗಿ ಬೊಗಳುವ ಶಬ್‌ದ ಸಹ ಕೇಳಬರುತ್‌ತಿತ್‌ತು. ಒಟ್‌ಟಿನಲ್‌ಲಿ ಅತ್‌ತ ಕಡೆ ಜನ ಅಷ್‌ಟಾಗಿ ಓಡಾಡುತ್‌ತಿರಲಿಲ್‌ಲ. ಒಮ್‌ಮೊಮ್‌ಮೆ ಕತ್‌ತಲಾದ ಮೇಲೂ ನನ್‌ನ ತಾಯಿ ಅಡಿಗೆಗೆ ಬೇಕಾದ ಸಾಮಾನನ್‌ನು ತರಲು ನನ್‌ನನ್‌ನು ಅಂಗಡಿಗೆ ಕಳುಹಿಸುತ್‌ತಿದ್‌ದರು. ಆಂಗಡಿಗೆ ಹೋಗುವಾಗ ಆ ಮನೆ ಕಾಣುತ್‌ತಿತ್‌ತು. ಜೋರಾಗಿ ಓಡಿ ಅಂಗಡಿಯನ್‌ನು ತಲುಪುತ್‌ತಿದ್‌ದೆ. ಆ ಮನೆಯತ್‌ತ ನೋಡುತ್‌ತಲೂ ಇರಲಿಲ್‌ಲ. ವಾಪಸ್‌ ಬರುವಾಗ ಸಹ ಜೋರಾಗಿ ಓಡಿ ಮನೆಗೆ ಬರುತ್‌ತಿದ್‌ದೆ. ಎಲ್‌ಲರೂ ಆ ಮನೆ ಬಗ್‌ಗೆ ಹೇಳಿದ್‌ದು ಮನಸ್‌ಸಿನಲ್‌ಲಿ ಉಳಿದಿತ್‌ತು. ಕತ್‌ತಲೆಯಲ್‌ಲಂತೂ ಆ ಮನೆಯತ್‌ತ ನೋಡಲೂ ಹೆದರುತ್‌ತಿದ್‌ದೆ.
ನಮ್‌ಮ ಶಾಲೆಯ ಕನ್‌ನಡ ಸಂಘದ ವತಿಯಿಂದ ವಾರ್‌ಷಿಕೋತ್‌ಸವ ಸಮಾರಂಭ ನಡೆಯಿತು. ಆ ಸಮಾರಂಭಕ್‌ಕೆ ಅತಿಥಿಯಾಗಿ ಆಗಮಿಸಿದ್‌ದ ಹಿರಿಯರು ತಮ್‌ಮ ಭಾಷಣದಲ್‌ಲಿ ನಮಗೆ ಕೆಲವು ಮಾತುಗಳನ್‌ನು ಹೇಳಿದರು. ವಿದ್‌ಯೆಯ ಮಹತ್‌ವ, ತರ್‌ಕಬದ್‌ಧ ಆಲೋಚನೆ, ವೈಜ್‌ಞಾನಿಕ ಮನೋಭಾವ ಎಂದೆಲ್‌ಲಾ ಮಾತನಾಡಿದರು. ಮೂಢನಂಬಿಕೆಗಳ ಬಗ್‌ಗೆ ಮಾತನಾಡಿದರು. ನಾವು ಯಾವುದನ್‌ನೂ ಸುಮ್‌ಮನೆ ಒಪ್‌ಪಬಾರದು. ಸರಿಯಾಗಿ ಆಲೋಚಿಸಿ ನೋಡಬೇಕು. ’ಪ್‌ರತ್‌ಯಕ್‌ಷವಾದರೂ ಪ್‌ರಮಾಣಿಸಿ ನೋಡು’ ಎಂದು ಅದಕ್‌ಕೇ ಹಿರಿಯರು ಹೇಳುವುದು ಎಂದೆಲ್‌ಲಾ ಹೇಳಿದರು. ನನಗೆ ಮತ್‌ತು ನನ್‌ನ ಅಣ್‌ಣನಿಗೆ ಈ ಮಾತುಗಳು ಬಹಳ ಹಿಡಿಸಿದವು. ನನ್‌ನ ಅಣ್‌ಣ ಅದೇ ಶಾಲೆಯಲ್‌ಲಿ ಎಸ್‌.ಎಸ್‌.ಎಲ್‌.ಸಿ. ಯಲ್‌ಲಿ ಓದುತ್‌ತಿದ್‌ದ. ನಮಗೆ ಆ ಹಿರಿಯರು ಹೇಳಿದ ಮಾತುಗಳು ಬಹಳ ಪ್‌ರಭಾವ ಬೀರಿದವು. ನಮ್‌ಮ ಕನ್‌ನಡ ಮೇಷ್‌ಟರನ್‌ನು ಆ ಹಿರಿಯರ ಬಗ್‌ಗೆ ವಿಚಾರಿಸಿದೆವು. ನಮ್‌ಮ ಮೇಷ್‌ಟ್‌ರು ಹೇಳಿದರು, ’ನಿಮಗೆ ಗೊತ್‌ತಾ ಅವರು ಒಬ್‌ಬ ದೊಡ್‌ಡ ವಿಜ್‌ಞಾನಿಗಳು. ಇದೇ ಊರಿನವರು. ಅವರು ಹೈಸ್‌ಕೂಲ್‌‌ವರೆಗೆ ಇದೇ ಸ್‌ಕೂಲ್‌‌ನಲ್‌ಲಿ ಓದಿದ್‌ದು. ಈಗ ಅಮೆರಿಕಾದ ಅಂತರಿಕ್‌ಷ ಸಂಶೋದನಾ ಸಂಸ್‌ಥೆಯಲ್‌ಲಿ ಹಿರಿಯ ವಿಜ್‌ಞಾನಿಯಾಗಿ ಕೆಲಸ ಮಾಡುತ್‌ತಿದ್‌ದಾರೆ. ತಾವು ಓದಿದ ಶಾಲೆ ಎಂಬ ಅಭಿಮಾನದಿಂದ ನಮ್‌ಮ ಕಾರ್‌ಯಕ್‌ರಮಕ್‌ಕೆ ಬಂದಿದ್‌ದರು.’ ಆವರು ಇನ್‌ನೊಂದೆರಡು ದಿನ ಇಲ್‌ಲೇ ಇರುತ್‌ತಾರೆ ಎಂದು ಗೊತ್‌ತಾಗಿ ನಮ್‌ಮ ಕನ್‌ನಡ ಮೇಷ್‌ಟರ ಜೊತೆ ಅವರ ಮನೆಗೆ ಹೋದೆವು. ಅವರಿಗೆ ನಮ್‌ಮನ್‌ನು ಕಂಡು ಬಹಳ ಸಂತಸವಾಯಿತು. ಅವರ ಜೊತೆ ಮಾತನಾಡುತ್‌ತಿದ್‌ದಾಗ, ನಾನು ಅವರಿಗೆ ಕೃಷ್‌ಣಮ್‌ಮನ ದೆವ್‌ವ ಮತ್‌ತು ಆಕೆ ಸತ್‌ತ ಮನೆ ಬಗ್‌ಗೆ ತಿಳಿಸಿದೆ. ಅದಕ್‌ಕೆ ಅವರು ಹೇಳಿದರು, ’ದೆವ್‌ವ, ಭೂತ ಎಂಬುವೆಲ್‌ಲಾ ನಮ್‌ಮ ಕಲ್‌ಪನೆಗಳು. ನಿಜವಲ್‌ಲ. ಕೆಲವು ದುರ್‌ಬಲ ಮನಸ್‌ಸಿನ ಜನರ ಮೇಲೆ ಇಂತಹ ವಿಷಯಗಳು ಪರಿಣಾಮ ಬೀರಬಹುದು. ಅಷ್‌ಟೇ. ಅದಕ್‌ಕೇ ನಿನ್‌ನೆ ಫ಼ಂಕ್‌ಷನ್‌‌ನಲ್‌ಲಿ ನಾನು ನಿಮಗೆಲ್‌ಲಾ ಹೇಳಿದ್‌ದು ಪ್‌ರತ್‌ಯಕ್‌ಷವಾದರೂ ಪ್‌ರಮಾಣಿಸಿ ನೋಡು ಅಂತ’’.
ನಾನು ಮತ್‌ತು ನನ್‌ನ ಅಣ್‌ಣ ಈ ಬಗ್‌ಗೆಯೇ ಯೋಚಿಸುತ್‌ತಿದ್‌ದೆವು. ಇದಾಗಿ ಒಂದು ವಾರವಾಗಿರಬಹುದು. ಅಂದು ರಾತ್‌ರಿ ಮನೆಯಲ್‌ಲಿ ಎಲ್‌ಲರೂ ಊಟ ಮುಗಿಸಿ ನಿದ್‌ರೆ ಮಾಡುತ್‌ತಿದ್‌ದೆವು. ನನಗೆ ಚೆನ್‌ನಾಗಿ ನಿದ್‌ರೆ ಬಂದಿತ್‌ತು. ’ಏಳೋ, ರವಿ. ಎದ್‌ದೇಳೋ", ಎಂದು ನನ್‌ನ ಆಣ್‌ಣ ನನ್‌ನನ್‌ನು ನಿದ್‌ರೆಯಿಂದ ಏಳಿಸಿದ. ’ಏನಣ್‌ಣ, ನಂಗೆ ನಿದ್‌ದೆ", ಎಂದೆ. ಅದಕ್‌ಕೆ ಅವನು "ಆಮೇಲೆ ನಿದ್‌ದೆ ಮಾಡುವೆ. ಈಗ ನನ್‌ನ ಜೊತ ಬಾ", ಎಂದು ನನ್‌ನನ್‌ನು ತನ್‌ನ ಜೊತೆ ಕರೆದುಕೊಂಡು ಸದ್‌ದಿಲ್‌ಲದೆ ಮನೆಯಿಂದ ಹೊರಗೆ ಬಂದ. ನಾಯಿಗಳು ಬೊಗಳುತ್‌ತಾ ಓಡುತ್‌ತಿರುವುದು ಕೇಳಿಸಿತು. ಎರಡು ನಾಯಿಗಳು ಕೃಷ್‌ಣಮ್‌ಮನ ಪಾಳು ಮನೆ ಕಡೆ ಓಡುತ್‌ತಿರುವುದು ಬೀದಿ ದೀಪದಲ್‌ಲಿ ಮಸುಕಾಗಿ ಕಾಣಿಸಿತು. ಅಣ್‌ನ ತನ್‌ನ ಕೈಯಲ್‌ಲಿ ಅಪ್‌ಪನ ದೊಡ್‌ಡ ಬ್‌ಯಾಟರಿ ಇಟ್‌ಟುಕೊಂಡಿದ್‌ದ. ಅದನ್‌ನು ಆನ್‌ ಮಾಡಿಕೊಂಡು ನನ್‌ನನ್‌ನು ಕೈ ಹಿಡಿದು ಕರೆದುಕೊಂಡು ಆತ್‌ತ ಕಡೆಯೇ ಹೊರಟ. ನನಗೆ ಹೆದರಿಕೆಯಾಗುತ್‌ತಿತ್‌ತು. ಅಣ್‌ಣನ ಜೊತೆಯಲ್‌ಲಿದುದರಿಂದ ನಾನು ಅವನ ಜೊತೆ ನಡೆದೆ. ಆ ಎರಡು ನಾಯಿಗಳನ್‌ನು ಅನುಸರಿಸಿಕೊಂಡು ನಾವಿಬ್‌ಬರೂ ಆ ಮನೆ ಕಡೆ ಹೋದೆವು . ಸ್‌ವಲ್‌ಪ ಸಮಯದಲ್‌ಲೇ ನಾಯಿಗಳು ಆ ಮನೆಯ ಹತ್‌ತಿರವಿದ್‌ದ ಹುಣೀಸೇಮರವೊಂದರ ಕೆಳಗೆ ನಿಂತು ಮರದೆ ಮೇಲೆ ನೋಡುತ್‌ತಾ ಒಂದೇ ಸಮನೆ ಜೋರಾಗಿ ಬೊಗಳುತ್‌ತಿದ್‌ದವು. ಅಣ್‌ಣನ ಬ್‌ಯಾಟರಿ ಬೆಳಕು ಅವುಗಳ ಮೇಲೆ ಬಿದ್‌ದುದನ್‌ನು ನೋಡಿ ಅವು ಇನ್‌ನೂ ಜೋರಾಗಿ ಬೊಗಳಲು ಷುರು ಮಾಡಿದವು. ನಾಯಿಗಳ ಬೊಗಳುವ ಶಬ್‌ದದ ಜೊತೆಗೆ ಆ ಮರದ ಮೇಲಿನಿಂದ ಸಣ್‌ಣ ಮಗುವೊಂದು ಜೋರಾಗಿ ಅಳುವ ಶಬ್‌ದ ಬರಲಾರಂಭಿಸಿತು. ನನಗೆ ಬಹಳ ಹೆದರಿಕೆಯಾಯಿತು. ’ಅಣ್‌ಣಾ, ಬೇಡ ಬಾರೋ ಹೋಗೋಣ’, ಏಂದು ಹೇಳಿದೆ. ’ಏನಿಲ್‌ಲ. ಏಕೋ ಹೆದರ‍್‌ಕೋತೀಯಾ? ನಾನಿಲ್‌ವಾ? ಏನೂಂತ ನೋಡೋಣ ಇರು’, ಎನ್‌ನುತ್‌ತಾ ನನ್‌ನನ್‌ನು ಎಳೆದುಕೊಂಡು ಆ ಮರದ ಹತ್‌ತಿರಕ್‌ಕೆ ನಡೆದ. ಅಲ್‌ಲಿ ಮರದ ಮೇಲೆ ಒಂದು ಬೆಕ್‌ಕಿನ ಮರಿ ಅರಚುತ್‌ತಿತ್‌ತು. ಅದು ಅರಚುತ್‌ತಿದ್‌ದ ರೀತಿ ಸಣ್‌ಣ ಮಗುವೊಂದು ಅಳುವಂತೆಯೇ ಇತ್‌ತು. ನನಗೆ ಆಶ್‌ಚರ‍್‌ಯವಾಯಿತು. ಏನೂ ವ್‌ಯತ್‌ಯಾಸವೇ ಇಲ್‌ಲ ಅನ್‌ನುವಷ್‌ಟರ ಮಟ್‌ಟಿಗೆ ಆ ಬೆಕ್‌ಕಿನ ಮರಿಯ ಅರಚಾಟ ಪುಟ್‌ಟ ಮಗುವಿನ ಆಕ್‌ರಂದನದಂತೆಯೇ ಇತ್‌ತು! ಆಗ ನಮಗೆ ಅರ್‌ಥವಾಯಿತು- ಈ ಎರಡು ನಾಯಿಗಳೂ ಆ ಬೆಕ್‌ಕಿನ ಮರಿಯನ್‌ನು ಅಟ್‌ಟಿಸಿಕೊಂಡು ಬಂದಿದ್‌ದವು. ಆ ಬೆಕ್‌ಕಿನ ಮರಿ ಓಡಿ ಬಂದು ಮರವನ್‌ನೇರಿ ಬಿಟ್‌ಟಿತ್‌ತು. ಮರದ ಕೆಳಗಡೆ ಆ ಎರಡು ನಾಯಿಗಳು ಒಂದೇ ಸಮನೆ ಬೊಗಳುತ್‌ತಿದ್‌ದುದರಿಂದ ಅದು ಹೆದರಿಕೊಂಡು ಅರಚಾಡುತ್‌ತಿತ್‌ತು. ಒಂದೈದು ನಿಮಿಷವೂ ಕಳೆದಿರಲಿಲ್‌ಲವೇನೋ. ಅಷ್‌ಟರಲ್‌ಲಿ ನಮ್‌ಮ ತಂದೆ ಮತ್‌ತು ನಮ್‌ಮ ಸೋದರ ಮಾವ ಇಬ್‌ಬರೂ ನಾವಿದ್‌ದಲ್‌ಲಿಗೆ ಬಂದರು. ’ಎನ್‌ರೋ ಇದು ನೀವು ಮಾಡ್‌ತಾ ಇರೋದು? ಇಲ್‌ಲೆಲ್‌ಲಾ ಬರಬಾರದು ಅಂತ ಗೊತ್‌ತಿಲ್‌ವಾ?’, ಎಂದು ನಮ್‌ಮ ತಂದೆ ಬಯ್‌ದರು. ನನ್‌ನ ಅಣ್‌ಣ ’ಶ್‌’ ಎಂದು ಮೆಲ್‌ಲಗೆ ಹೇಳಿ ’ನೋಡಿ ಅಲ್‌ಲಿ’, ಎಂದು ಮರದ ಮೇಲಿದ್‌ದ ಆ ಬೆಕ್‌ಕಿನ ಮರಿಯತ್‌ತ ಬ್‌ಯಾಟರಿ ಬೆಳಕು ಹರಿಸಿದ. ಬೆಕ್‌ಕಿನ ಮರಿ ನಡುಗುತ್‌ತಾ ಅರುಚುತ್‌ತಾ ಒದ್‌ದಾಡುತ್‌ತಿದ್‌ದುದನ್‌ನು ನಮ್‌ಮ ತಂದೆ ಮತ್‌ತು ನಮ್‌ಮ ಸೋದರ ಮಾವ ನೋಡಿದರು. ಅವರಿಗೂ ಬೆಕ್‌ಕಿನ ಮರಿಯ ಅರಚಾಟ ಸಣ್‌ಣ ಕೂಸಿನ ಅಳುವಿನಂತಿರುವುದು ಕೇಳಿಸಿತು. ನಮ್‌ಮ ಸೋದರಮಾವ ಸಣ್‌ಣ ಕಲ್‌ಲೊಂದನ್‌ನು ಎತ್‌ತಿಕೊಂಡು ಆ ನಾಯಿಗಳತ್‌ತ ಎಸೆದರು. ಆ ನಾಯಿಗಳು ಕುಂಯ್‌‌ಗುಡುತ್‌ತಾ ಓಡಿಹೋದವು. ನಾಯಿಗಳು ಹೋದ ಸ್‌ವಲ್‌ಪ ಸಮಯದ ನಂತರ ಬೆಕ್‌ಕಿನ ಮರಿ ನಿಧಾನವಾಗಿ ಇಳಿದು ಬೇರೊಂದು ದಿಕ್‌ಕಿನತ್‌ತ ಓಡಿ ಹೋಯಿತು. ’ನಡೀರಿ ಮನೆಗೆ’, ಎಂದು ನಮ್‌ಮಪ್‌ಪ ರೇಗಿದರು. ಎಲ್‌ಲರೂ ಮನೆಗೆ ಹೋದೆವು.
ಮಾರನೆಯ ದಿನ ಬೆಳಿಗ್‌ಗೆ ನನ್‌ನ ಅಜ್‌ಜಿ ನನ್‌ನ ತಂದೆಯನ್‌ನು ಕೇಳುತ್‌ತಿದ್‌ದರು, ’ವೆಂಕಿ, ಏನೋ ಅದು ನಿನ್‌ನೆ ರಾತ್‌ರಿ ಗಲಾಟೆ?’ ನನ್‌ನ ತಂದೆ ಹಿಂದಿನ ರಾತ್‌ರಿ ಆದುದ್‌ದನ್‌ನೆಲ್‌ಲಾ ತಮ್‌ಮ ತಾಯಿಗೆ ವಿವರಿಸಿ ಹೇಳಿದರು. ’ಹೌದೇನೋ? ಹುಡುಗು ಮುಂಡೇವು ಏನು ಧೈರ್‌ಯ ಅವಕ್‌ಕೆ!’ ಎಂದು ಹೇಳಿದ ನಮ್‌ಮ ಅಜ್‌ಜಿ ಮುಂದುವರಿಸಿದರು, ’ನನಗೆ ಮೊದಲಿನಿಂದಲೂ ಅನುಮಾನ ಇತ್‌ತು. ಎಂಥಾ ಒಳ್‌ಳೇ ಹೆಂಗಸು. ಅವಳು ದೆವ್‌ವ ಆಗೋದು ಅಂದರೆ ನನಗೆ ಏಕೋ ನಂಬೋಕೇ ಆಗ್‌ತಾ ಇರ್‌ಲಿಲ್‌ಲ.’ ನಮ್‌ಮ ತಂದೆ ಕೆಲಸಕ್‌ಕೆ ಹೊರಟ ಮೇಲೆ ನಾನು ಮತ್‌ತು ನನ್‌ನ ಅಣ್‌ಣ ನಮ್‌ಮ ಅಜ್‌ಜಿಯ ರೂಂಗೆ ಹೋದೆವು. ಅವರು ಯಾವುದೋ ಪುಸ್‌ತಕ ಓದುತ್‌ತಾ ಇದ್‌ದರು. ನಾವು ಅವರ ಪಕ್‌ಕ ಹೋಗಿ ಕುಳಿತೆವು. ನಮ್‌ಮತ್‌ತ ನೋಡಿದ ಅವರು ತಾವು ಓದುತ್‌ತಿದ್‌ದ ಪುಸ್‌ತಕವನ್‌ನು ಎತ್‌ತಿಟ್‌ಟು, ನಮ್‌ಮನ್‌ನು ಕೇಳಿದರು, ’ಏನ್‌ರೋ? ಏನು ಬೇಕು?’
ಅದಕ್‌ಕೆ ನಮ್‌ಮ ಅಣ್‌ಣ ಕೇಳಿದ ’ಅಜ್‌ಜಿ ನಿಮಗೆ ಆ ಕೃಷ್‌ಣಮ್‌ಮ ಅವರ ಬಗ್‌ಗೆ ಚೆನ್‌ನಾಗಿ ಗೊತ್‌ತಲ್‌ವಾ? ಹೇಳಜ್‌ಜಿ, ಅವರ ಬಗ್‌ಗೆ ನಾವು ತಿಳ್‌ಕೋಬೇಕು.’ ಎಂದ.
ನಮ್‌ಮ ಅಜ್‌ಜಿ ಹೇಳತೊಡಗಿದರು: ’ನಾವು ಈ ಮನೆಗೆ ಬಂದಾಗ ರವಿ ಇನ್‌ನೂ ಹುಟ್‌ಟಿರಲ್‌ಲಿಲ್‌ಲ. ಇಲ್‌ಲಿಗೆ ಬಂದು ಒಂದು ವರ್‌ಷ ಆದ ಮೇಲೆ ರವಿ ಹುಟ್‌ಟಿದ್‌ದು. ಸುಮಾರು ಹದಿನೈದು ವರ್‌ಷ ಆಯಿತು ನಾವು ಇಲ್‌ಲಿಗೆ ಬಂದು. ಕೃಷ್‌ಣಮ್‌ಮ ಅವರು ಅದಕ್‌ಕೂ ಮೊದಲಿನಿಂದಲೇ ಆ ಮನೆಯಲ್‌ಲಿ ಇದ್‌ದರು. ಅವರಿಗೆ ಒಬ್‌ಬಳು ಮಗಳು. ಮದುವೆಯಾಗಿದೆ. ತುಂಬಾ ಒಳ್‌ಳೇ ಅಳಿಯ, ಒಳ್‌ಳೇ ಕೆಲಸ. ಇಬ್‌ಬರೂ ಚೆನ್‌ನಾಗಿದ್‌ದಾರೆ. ಅಮೆರಿಕಾದಲ್‌ಲಿ ಇಲ್‌ಲೋ ಇದ್‌ದಾರೆ ಅಂತ ಕೃಷ್‌ಣಮ್‌ಮ ತಮ್‌ಮ ಅಳಿಯನ ಬಗ್‌ಗೆ ಹೇಳ್‌ತಿದ್‌ರು. ಅವರಿಗೆ ಸಾಯೋವಾಗ ಸುಮಾರು ಎಂಭತ್‌ತು ವರ್‌ಷ ಇರಬಹುದು. ಒಳ್‌ಳೇ ಹೆಂಗಸು. ಏನು ದೈವ ಭಕ್‌ತಿ! ಏನು ಪೂಜೆ, ಪುನಸ್‌ಕಾರ! ದಿನಾ ಸಾಯಂಕಾಲ ರಾಮ ಮಂದಿರಕ್‌ಕೆ ಹೋಗ್‌ತಿದ್‌ರು. ಹರಿಕತೆ ಏನಾದ್‌ರೂ ಇದ್‌ರೆ ತಪ್‌ಪದೇ ಹೋಗ್‌ತಾ ಇದ್‌ದರು. ನಾನು ಕೆಲವು ಸಾರಿ ಅವರ ಜೊತೆ ಹರಿಕತೆ ಕೇಳೋಕೆ ಹೊಗ್‌ತಿದ್‌ದೆ. ನನಗಿನ್‌ನೇನು ಬೇಕು ಪದ್‌ದಕ್‌ಕ, ದೇವರು ನನ್‌ನ ಯಾವಾಗ ಕರೆಸಿಕೊಳ್‌ತಾನೋ, ಏನೋ? ಅಂತ ಹೇಳೋರು. ಅವರಿಗೆ ಯಾವ ಆಶೇನೂ ಇರ್‌ಲ್‌ಲಿಲ್‌ಲ. ನೆಮ್‌ಮದಿಯಿಂದ ಇದ್‌ರು.’
’ಅಜ್‌ಜಿ ಅಂಥವ್‌ರು ದೆವ್‌ವ ಆದ್‌ರು ಅಂತ ಜನ ಹೇಗೆ ಅಂತಾರೆ?’ ಎಂದು ನಾನು ಕೇಳಿದೆ ನಮ್‌ಮ ಅಜ್‌ಜಿಯನ್‌ನು.
’ಅದೇ ಕಣ್‌ರೋ ನನಗೂ ಗೊತ್‌ತಾಗ್‌ದೇ ಇದ್‌ದದ್‌ದು. ಅವರು ತೀರಿಕೊಂಡ ಸುಮಾರು ಎರಡು ವಾರದ ನಂತರ ಯಾರೋ ಒಬ್‌ಬ ರಾತ್‌ರಿ ಹೊತ್‌ತಲ್‌ಲಿ ಆ ಕಡೆಯಿಂದ ಬರ್‌ತಾ ಇದ್‌ದಾಗ, ಮಗು ಒಂದು ಅಳ್‌ತಾ ಇರೋ ಶಬ್‌ದ ಕೇಳ್‌ತಂತೆ. ಅವನು ಪುಕ್‌ಕಲ ಇರಬೇಕು. ಹೆದರಿಕೊಂಡು ಓಡಿ ಬಂದ್‌ನಂತೆ. ಒಬ್‌ಬರಿಂದ ಒಬ್‌ಬರಿಗೆ ಈ ಸುದ್‌ದಿ ಹರಡಿ ಕೃಷ್‌ಣಮ್‌ಮ ದೆವ್‌ವ ಆಗಿದ್‌ದಾಳೆ ಅಂತ ಜನ ಅಂದುಕೊಳ್‌ತಿದ್‌ದಾರೆ.’ ಎಂದರು ನಮ್‌ಮ ಅಜ್‌ಜಿ.
’ದೆವ್‌ವನೂ ಅಲ್‌ಲ ಏನೂ ಅಲ್‌ಲ. ನಿನ್‌ನೆ ನಾವು ನೋಡ್‌ಲಿಲ್‌ವಾ ಬೆಕ್‌ಕಿನ ಮರಿ ಎಳೇ ಮಗೂ ಹಾಗೆ ಅರ್‌ಚ್‌ಕೋತಿತ್‌ತು.’ ಎಂದ ನಮ್‌ಮಣ್‌ಣ.
’ಹೌದು ಕಣ್‌ರೋ, ಕೆಲವು ಸಾರಿ ಬೆಕ್‌ಕು ಹೆದರಿಕೊಂಡು ಅರಚಿಕೊಳ್‌ಳೋವಾಗ ಎಳೇ ಕೂಸು ಅತ್‌ತ ಹಾಗೇ ಕೇಳಿಸುತ್‌ತೆ. ನಾನೂ ನೋಡಿದ್‌ದೀನಿ,’ ಎಂದರು ನಮ್‌ಮ ಅಜ್‌ಜಿ.
ಇದಾದ ಒಂದೆರಡು ತಿಂಗಳ ನಂತರ ನಮ್‌ಮ ತಂದೆಗೆ ಬೆಂಗಳೂರಿಗೆ ವರ್‌ಗವಾಯಿತು. ನಾವೆಲ್‌ಲ ಬೆಂಗಳೂರಿಗೆ ಬಂದೆವು.
ನಾವು ಬೆಂಗಳೂರಿಗೆ ಬಂದು ಹನ್‌ನೆರಡು ವರ್‌ಷಗಳ ನಂತರ, ನಾನು ತುಮಕೂರಿಗೆ ನನ್‌ನ ಸೋದರತ್‌ತೆ ಮನೆಗೆ ಹೋಗಿದ್‌ದೆ. ಅವರ ಮನೆ ನಾವಿದ್‌ದ ಮನೆಯ ಪಕ್‌ಕದ ಮನೆ. ನಾನು ಅಲ್‌ಲಿಗೆ ಹೋದ ಮಾರನೆಯ ದಿನ ಬೆಳಿಗ್‌ಗೆ ಹೊರಗೆ ಬಂದು ನೋಡಿದರೆ ಅಲ್‌ಲಿ ಕೃಷ್‌ಣಮ್‌ಮನವರ ಪಾಳು ಮನೆ ಇಲ್‌ಲ! ಆ ಜಾಗದಲ್‌ಲಿ ಎರಡು ಅಂತಸ್‌ತಿನ ಒಂದು ಭವ್‌ಯವಾದ ಬಂಗಲೆ. ವಾಸ್‌ತುಶಿಲ್‌ಪಿಯೊಬ್‌ಬರಿಂದ ವಿನ್‌ಯಾಸಗೊಂಡಿರಬಹುದು ಎನ್‌ನುವಂತಹ ಸುಂದರ ಬಂಗಲೆ. ಸುಮಾರು ಅರ್‌ಧ ಎಕರೆ ವಿಸ್‌ತಾರದಲ್‌ಲಿ ಮನೆಯ ಸುತ್‌ತಲ್‌ಲ ಜಾಗವನ್‌ನು ಒಳಗೊಂಡಂತೆ ಸುತ್‌ತಲೂ ವಿಷಮಧಾರಿ ಗಿಡದ ಕಾಂಪೌಂಡ್‌. ಕಾಂಪೌಡಿನ ಒಳಗೆ ಹುಲ್‌ಲುಹಾಸು. ಹೂವಿನ ಗಿಡಗಳು. ಕಲ್‌ಲಿನ ಬಿಲ್‌ಲೆಗಳ ಕಾಲುದಾರಿಗಳು. ಮನೆಯ ಮುಂದೆ ಸುಮಾರು ಐವತ್‌ತು ಅಡಿ ದೂರದಲ್‌ಲಿ ಅದೇ ಹುಣಿಸೇಮರ! ಮನೆಯ ಹಿಂದೆ ಹಲಸಿನ ಮರ ಇರುವುದು ಕಾಣುತ್‌ತಿತ್‌ತು. ಅಲ್‌ಲಿದ್‌ದ ಯಾವುದೇ ಮರವನ್‌ನೂ ಕಡಿದಿರಲಿಲ್‌ಲ. ಹುಣಿಸೇ ಮರದ ಕೆಳಗೆ ಎರಡು ಕಲ್‌ಲು ಬೆಂಚು! ನಮ್‌ಮ ಸೋದರತ್‌ತೆಯವರನ್‌ನು ಕೇಳಿದೆ, ’ಏನತ್‌ತೆ? ಕೃಷ್‌ಣಮ್‌ಮನ ದೆವ್‌ವದ ಮನೆ ಜಾಗದಲ್‌ಲಿ ದೊಡ್‌ಡ ಬಂಗಲೆ!’ ’ಹೌದು ರವಿ. ಅವರು ಅಮೇರಿಕಾದಲ್‌ಲಿ ದೊಡ್‌ಡ ಸೈಂಟಿಸ್‌ಟ್‌ ಆಗಿದ್‌ರಂತೆ. ಈಗ ರಿಟೈರ್‌ಡ್‌ ಆಗಿದ್‌ದಾರಂತೆ. ಅವರ ಮನೆ ಅದು.’ ಆ ಮನೆಗೆ ಹೋದೆ ಆ ಸೈಂಟಿಸ್‌ಟ್‌ ಅವರನ್‌ನು ಭೇಟಿ ಮಾಡಿ ಮಾತನಾಡಲು. ಅವರೇ ನಾನು ಏಳನೇ ಕ್‌ಲಾಸ್‌‌ನಲ್‌ಲಿ ಓದುತ್‌ತಿದ್‌ದಾಗ ನಮ್‌ಮ ಸ್‌ಕೂಲ್‌‌ಡೇನಲ್‌ಲಿ ಭಾಷಣ ಮಾಡಿದ್‌ದ ವಿಜ್‌ಞಾನಿಗಳು. ಅವರ ಮನೆಗೆ ನಾನೂ ನನ್‌ನ ಅಣ್‌ಣ ನಮ್‌ಮ ಕನ್‌ನಡ ಮೇಷ್‌ಟ್‌ರ ಜೊತೆ ಹೋಗಿದ್‌ದಿದ್‌ದು. ಅವರಿಗೆ ಮೊದಲು ನಾನು ಯಾರೆಂದು ಗೊತ್‌ತಾಗಲಿಲ್‌ಲ. ಅವರು ಸ್‌ಕೂಲ್‌ ಡೇನಲ್‌ಲಿ ಭಾಷಣ ಮಾಡಿದ್‌ದು, ನಾವು ಅವರ ಮನೆಗೆ ಕನ್‌ನಡ ಮೇಷ್‌ಟ್‌ರ ಜೊತೆ ಹೋಗಿದ್‌ದು ಹೇಳಿದ ಮೇಲೆ ಅವರಿಗೆ ನೆನಪಿಗೆ ಬಂತು. ಅವರಿಗೆ ತುಂಬ ಸಂತೋಷವಾಯಿತು. ನನಗೂ ಸಹ. ’ಸಾರ್‌, ನೀವು ಅಂದು ಮಾಡಿದ ಭಾಷಣ ನನ್‌ನ ಅಲೋಚನೆ ಮಾಡುವ ರೀತಿಯನ್‌ನು ಬದಲಾಯಿಸಿತು. ಯಾವುದನ್‌ನೂ ಕೂಲಂಕಷವಾಗಿ ಪರೀಕ್‌ಷಿಸುವ ಗುಣವನ್‌ನು ರೂಢಿಸಿಕೊಂಡೆ. ನಮ್‌ಮ ಅಣ್‌ಣನೂ ಸಹ ಹೀಗೇ ಆಗಿದ್‌ದಾನೆ’ ಎಂದೆ. ’ಬಾ ಆ ಹುಣಿಸೇಮರದ ಕೆಳಗೆ ಕುಳಿತು ಕಾಫೀ ಕುಡಿಯೋಣ’, ಎಂದರು. ಇಬ್‌ಬರೂ ಅಲ್‌ಲಿ ಕಲ್‌ಲು ಬೆಂಚಿನ ಮೇಲೆ ಕುಳಿತೆವು. ಅವರ ಮಗಳು ನಮಗೆ ಕಾಫಿ ತಂದು ಕೊಟ್‌ಟರು. ನಾವು ಕಾಫಿ ಕುಡಿಯುತ್‌ತಿದ್‌ದಾಗ, ಒಂದು ಸಣ್‌ಣ ಮಗು ಅಳುವ ಶಬ್‌ದ! ’ಮಗು ಅಳ್‌ತಿದೆ. ಬರ್‌ತೀನಿ’ ಎಂದು ಅವರ ಮಗಳು ಮನೆಯ ಒಳಗೆ ಹೋದರು. ಅದು ಆ ವಿಜ್‌ಞಾನಿಯವರ ಮೊಮ್‌ಮಗು. ಆ ಮನೆಯಲ್‌ಲಿ ವಯಸ್‌ಸಾದ ವಿಜ್‌ಞಾನಿಯವರಿಂದ ಹಿಡಿದು ಆ ಪುಟ್‌ಟ ಮೊಮ್‌ಮಗು ವರೆಗೆ ಎಲ್‌ಲರೂ ನಿರಾಂತಕವಾಗಿ ಸಂತೋಷದಿಂದಿದ್‌ದಾರೆ.

ನಾನು ಚಿತ್‌ರಿಸಿದ ರಂಗೋಲಿ (v1)

 ನಾನು ಚಿತ್‌ರಿಸಿದ ರಂಗೋಲಿ ಮಿ.ವೆಂ.ಶ್‌ರೀನಿವಾಸ - ನೆನಪಿನಂಗಳದಿಂದ:

ಅದು 1964ನೇ ಇಸವಿ ಇರಬಹುದು. ಆಗ ನಾನು ಬಿ.ಇ.(ಸಿವಿಲ್‌) ಓದುತ್‌ತಿದ್‌ದೆ ಬೆಂಗಳೂರಿನ ಯೂ.ವಿ.ಸಿ.ಇ. ಕಾಲೇಜಿನಲ್‌ಲಿ. ಅದೇ ಸಮಯದಲ್‌ಲಿ ಸಂಜೆಯ ವೇಳೆಯಲ್‌ಲಿ ಕನ್‌ನಡ ಟೈಪ್‌‌ರೈಟಂಗ್‌, ಇಂಗ್‌ಲೀಷ್‌ ಟೈಪ್‌‌ರೈಟಿಂಗ್‌ ಮತ್‌ತು ಇಂಗ್‌ಲೀಷ್‌ ಶಾರ್‌ಟ್‌‌ಹ್‌ಯಾಂಡ್‌ ಕಲಿಯುತ್‌ತಿದ್‌ದೆ - ಬಸವನಗುಡಿಯಲ್‌ಲಿ ಗಾಂಧಿಬಜ಼ಾರಿನ ಸರ್‌ಕಲ್‌ ಹತ್‌ತಿರದಲ್‌ಲಿದ್‌ದ ಬೆಂಗಳೂರು ವಾಣಿಜ್‌ಯ ವಿದ್‌ಯಾಶಾಲೆಯಲ್‌ಲಿ. ಆ ವಿದ್‌ಯಾಶಾಲೆಯ ವಿದ್‌ಯಾರ್‌ಥಿ ಸಂಘದ ಕಾರ್‌ಯದರ್‌ಶಿಯಾಗಿದ್‌ದೆ. ಆ ವರ್‌ಷದ ವಾರ್‌ಷಿಕೋತ್‌ಸವಕ್‌ಕೆ ಪ್‌ರತಿವರ್‌ಷದಂತೆ ತಮ್‌ಮ ಶಾಲೆಯ ವಿದ್‌ಯಾರ್‌ಥಿಗಳಿಗೆ ವಾರ್‌ಷಿಕ ಕ್‌ರೀಡಾಸ್‌ಪರ್‌ಧೆಗಳನ್‌ನು ಏರ್‌ಪಡಿಸಿದ್‌ದರು. ನಾನು ವಿದ್‌ಯಾರ್‌ಥಿ ಸಂಘದ ಕಾರ್‌ಯದರ್‌ಶಿಯಾಗಿದ್‌ದುದರಿಂದ ವಾರ್‌ಷಿಕೋತ್‌ಸವ ಕುರಿತ ಸಭೆಗೆ ನಾನೂ ಹಾಜರಾಗುತ್‌ತಿದ್‌ದೆ. ಸ್‌ಪರ್‌ಧೆಗೆ ಆರಿಸಲಾಗಿದ್‌ದ ಕ್‌ರೀಡೆಗಳ ಪಟ್‌ಟಿಯನ್‌ನು ನಾನು ನೋಡಿದೆ. ಆ ಪಟ್‌ಟಿಯಲ್‌ಲಿ ರಂಗೋಲಿ ಸ್‌ಪರ್‌ಧೆಯನ್‌ನು ಹೆಣ್‌ಣು ಮಕ್‌ಕಳ ವಿಭಾಗದಲ್‌ಲೂ, ಚಿತ್‌ರಕಲೆಯನ್‌ನು ಗಂಡುಮಕ್‌ಕಳ ವಿಭಾಗದಲ್‌ಲೂ ನಿಗದಿಪಡಿಸಿದ್‌ದರು. ನಾನು ಈ ಎರಡನ್‌ನೂ ಸಾಮಾನ್‌ಯ ವಿಭಾಗಕ್‌ಕೆ ವರ್‌ಗಾಯಿಸಿ, ಶಾಲೆಯ ಎಲ್‌ಲ ಗಂಡು ಮಕ್‌ಕಳು ಮತ್‌ತು ಹೆಣ್‌ಣು ಮಕ್‌ಕಳು ಭಾಗವಹಿಸಲಿ ಎಂದು ವಾದಿಸಿದೆ. ವಿದ್‌ಯಾರ್‌ಥಿ ಸಂಘದ ಗೌರವಾಧ್‌ಯಕ್‌ಷರಾದ ಶಾಲೆಯ ಪ್‌ರಾಂಶುಪಾಲರು "ಚಿತ್‌ರಕಲೆಯನ್‌ನು ಬೇಕಾದರೆ ಸಾಮಾನ್‌ಯ ವರ್‌ಗಕ್‌ಕೆ ಹಾಕಬಹುದು. ರಂಗೋಲಿ ಹೆಣ್‌ಣು ಮಕ್‌ಕಳ ವಿಭಾಗದಲ್‌ಲೇ ಇರಲಿ. ಯಾವ ಹುಡುಗನೂ ರಂಗೋಲಿ ಸ್‌ಪರ್‌ಧೆಯಲ್‌ಲಿ ಭಾಗವಹಿಸಲು ಮುಂದೆ ಬರುವುದಿಲ್‌ಲ" ಎಂದರು. "ಇಲ್‌ಲ, ರಂಗೋಲಿಯೂ ಒಂದು ಕಲೆ. ಸಾಮಾನ್‌ಯ ವಿಭಾಗದಲ್‌ಲಿ ಬರಲಿ" ಎಂದೆ ನಾನು. "ಯಾವ ಹುಡುಗನೂ ಭಾಗವಹಿಸಲು ಮುಂದೆ ಬರದಿದ್‌ದಲ್‌ಲಿ, ನೀನೇ ಭಾಗವಹಿಸಬೇಕು" ಎಂದು ಅಣಕವಾಡಿದರು ಅಧ್‌ಯಕ್‌ಷರು. ನಾನು ಆ ಷರತ್‌ತಿಗೆ ಒಪ್‌ಪಿದೆ. ಚಿತ್‌ರಕಲೆ ಮತ್‌ತು ರಂಗೋಲಿ ಇವೆರಡನ್‌ನೂ ಸಾಮಾನ್‌ಯ ವಿಭಾಗಕ್‌ಕೆ ವರ್‌ಗಾಯಿಸಲಾಯಿತು.

ಪ್‌ರಾಂಶುಪಾಲರ ಅನುಮಾನದಂತೆ ರಂಗೋಲಿ ಸ್‌ಪರ್‌ಧೆಗೆ ಯಾವ ಹುಡುಗನೂ ಮುಂದೆ ಬರಲಿಲ್‌ಲ. ಪ್‌ರಾಂಶುಪಾಲರಿಗೆ ನನ್‌ನ ಹೆಸರನ್‌ನು ರಂಗೋಲಿ ಸ್‌ಪರ್‌ಧೆಗೆ ಸೇರಿಸುತ್‌ತೇನೆ ಎಂದು ತಿಳಿಸಿದೆ; ವಿದ್‌ಯಾರ್‌ಥಿ ಸಂಘದ ಕಾರ್‌ಯದರ್‌ಶಿ ನಾನೇ ತಾನೆ. ಅವರು ನಕ್‌ಕು "ಊಂ, ಸರಿ" ಎಂದರು. ಮಾರನೇ ಭಾನುವಾರ ರಂಗೋಲಿ ಸ್‌ಪರ್‌ಧೆಗೆ ನಿಗದಿಯಾಗಿತ್‌ತು.

ರಂಗೋಲಿ ಸ್‌ಪರ್‌ಧೆಗಾಗಿ ಶಾಲೆಯ ಹಾಲ್‌‌ಅನ್‌ನು ಅಣಿಮಾಡಿದ್‌ದರು. ಹಾಲಿ ಪೂರ್‌ತಿ ಖಾಲಿ. ಒಟ್‌ಟು ಹತ್‌ತು ಅಂಕಣಗಳನ್‌ನು ಗುರುತುಹಾಕಿದ್‌ದರು. ಸ್‌ಪರ್‌ಧಾರ್‌ಥಿಗಳು ಹತ್‌ತು ಜನ. ಒಂಭತ್‌ತು ಹುಡುಗಿಯರು, ಒಬ್‌ಬನೇ ಹುಡುಗ - ಅದು ನಾನೇ. ಒಂದೊಂದು ಅಂಕಣದಲ್‌ಲೂ ನಾಲ್‌ಕು ಅಡಿ ಅಗಲ ಮತ್‌ತು ಐದು ಆಡಿ ಉದ್‌ದ ಇರುವ ಆಯಗಳನ್‌ನು ಗುರುತಿಸಿದ್‌ದರು ರಂಗೋಲಿಗಳನ್‌ನು ಬಿಡಿಸಲು. ಜೊತೆಗೆ ಪಕ್‌ಕದಲ್‌ಲಿ ರಂಗೋಲಿ ಪುಡಿ ಮತ್‌ತಿತ್‌ತರ ಸಾಮಗ್‌ರಿಗಳನ್‌ನು ಇಟ್‌ಟುಕೊಳ್‌ಳಲು ರಂಗೋಲಿ ಕೆಲಸ ಮಾಡಲು ಜಾಗಗಳಿದ್‌ದವು. ನನಗೆ ಒಂದು ಮೂಲೆಯಲ್‌ಲಿ ಜಾಗ ನಿಗದಿ ಮಾಡಿದ್‌ದರು. ಒಂಭತ್‌ತು ಜನ ಹುಡುಗಿಯರು ಮತ್‌ತು ನಾನು ರಂಗೋಲಿ ಬಿಡಿಸಲು ಸಿದ್‌ಧವಾಗಿದ್‌ದೆವು. ಒಂದು ಘಂಟೆಯ ಕಾಲಾವಧಿ ನಿಗದಿಪಡಿಸಿದ್‌ದರು.ಆಲ್‌ಲಿ ಭಾಗವಹಿಸಲು ಬಂದ ಹುಡುಗಿಯರಿಗೆ ಒಬ್‌ಬ ಹುಡುಗನೂ ಭಾಗವಹಿಸುತ್‌ತಾನೆ ಎಂದು ಗೊತ್‌ತಾದದ್‌ದು ಸ್‌ಪರ್‌ಧೆಯ ಪ್‌ರಾರಂಭದಲ್‌ಲಿಯೇ. ಹುಡುಗಿಯರೆಲ್‌ಲರೂ ಒಬ್‌ಬರನ್‌ನೊಬ್‌ಬರು ನೋಡಿಕೊಂಡು ಮುಸಿಮುಸಿ ನಕ್‌ಕದ್‌ದು ನನಗೆ ಕಾಣಿಸಿತು. ಈ ಹುಡುಗ ಅದೇನು ರಂಗೋಲಿ ಬಿಟ್‌ಟಾನು ಎಂಬ ಕುತೂಹಲ ಅವರಲ್‌ಲಿ ಇದೆ ಎಂದು ನನಗೆ ಅನ್‌ನಿಸಿತು. ಜೊತೆಗೆ ನಮ್‌ಮ ಸಹಪಾಠಿಗಳೂ ಹಾಗೂ ಮೇಷ್‌ಟ್‌ರುಗಳೂ ಇದೇ ಕುತೂಹಲದಲ್‌ಲಿದ್‌ದಾರೆ ಎಂದು ಗೊತ್‌ತಾಗಿದ್‌ದು ಹಾಲ್‌‌ನ ಕಿಟಕಿಗಳು ಇಣುಕುತ್‌ತಿದ್‌ದ ಇವರ ಮುಖಗಳಿಂದ ತುಂಬಿ ಹೋಗಿದ್‌ದರಿಂದ.

ಸ್‌ಪರ್‌ಧೆ ಪ್‌ರಾರಂಭವಾಯಿತು. ಹುಡುಗಿಯರೆಲ್‌ಲರೂ ಉತ್‌ಸಾಹದಿಂದ ರಂಗೋಲಿ ಬಿಡಿಸಲು ಪ್‌ರಾರಂಭಿಸಿದರು. ನಾಲ್‌ವರು ಚುಕ್‌ಕಿ ರಂಗೋಲಿಗಳನ್‌ನು ಬಿಡಿಸಲು ಆರಂಭಿಸಿದರು. ಇನ್‌ನು ನಾಲ್‌ವರು ಗೆರೆ ಆಧಾರಿತ ರಂಗೋಲಿಗಳನು ಆರಿಸಿಕೊಂಡಿದ್‌ದರು. ಒಬ್‌ಬ ಹುಡುಗಿ ಗಂಡು ನವಿಲಿನ ಚಿತ್‌ರವನ್‌ನು ಮೂಡಿಸಲು ಷುರು ಮಾಡಿದಳು. ಮೊದಲಿಗೆ ಸೀಮೇಸುಣ್‌ಣದಲ್‌ಲಿ ರಂಗೋಲಿಯ ಚಿತ್‌ರವನ್‌ನು ಬಿಡಿಸಿಕೊಂಡು ನಂತರ ರಂಗೋಲಿಯ ಬಣ್‌ಣದ ಪುಡಿಯಿಂದ ಮುಂದುವರಿಸುವ ಕ್‌ರಮವನ್‌ನು ಅನುಸರಿಸುತ್‌ತಿದರು. ಹತ್‌ತು ನಿಮಿಷದ ಹೊತ್‌ತಿಗೆ ಒಂಭತ್‌ತು ಜನ ಹೆಣ್‌ಣು ಮಕ್‌ಕಳು ಬಿಡಿಸುತ್‌ತಿದ್‌ದ ರಂಗೋಲಿಗಳ ಸ್‌ಥೂಲ ಚಿತ್‌ರಣ ಮೂಡುತ್‌ತಿತ್‌ತು.

ನಾನು ರಂಗೋಲಿಗೆ ಮೀಸಲಿರಿಸಿದ್‌ದ ನಾಲ್‌ಕು ಅಡಿ ಅಗಲದ ಮೇಲಿನ ಸುಮಾರು ಎರಡೂವರೆ ಅಡಿ ಎತ್‌ತರದ ಜಾಗಕ್‌ಕೆ ತುಸು ಹಳದಿಯತ್‌ತ ವಾಲುತ್‌ತಿದ್‌ದ ಕೇಸರಿ ಬಣ್‌ಣದ ರಂಗೋಲಿ ಪುಡಿಯಿಂದ ತುಂಬತೊಡಗಿದೆ. ಆನಂತರ ಕೆಳಗಿನ ಒಂದೂವರೆ ಅಡಿ ಸುಮಾರು ಆಯಾಕಾರದ ಉಳಿದ ಜಾಗವನ್‌ನು ಊದಾ ಬಣ್‌ಣದ ರಂಗೋಲಿ ಪುಡಿಯಿಂದ ತುಂಬುತ್‌ತಾ ಬಂದೆ. ಮೇಲಿನ ಅರುಣ ವರ್‌ಣ ಮತ್‌ತು ಕೆಳಗಿನ ಊದಾ ಬಣ್‌ಣಗಳು ಸೇರುವ ಅಂಚು ಸರಳ ರೇಖೆಯಾಗಿರಲ್‌ಲಿಲ್‌ಲ. ಡೊಂಕುಡೊಂಕಾಗಿ ಓರೆಕೋರೆಯಾಗಿತ್‌ತು. ನಾನು ರಂಗೋಲಿ ಬಿಡಿಸುವುದನ್‌ನು ನೋಡುತ್‌ತಿದ್‌ದವರಿಗೆ ಇದೇನು ಮಾಡಿತ್‌ತಿದ್‌ದಾನೆ ಈ ಹುಡುಗ ಎಂದು ಅನ್‌ನಿಸುತ್‌ತಿದ್‌ದಿರಬೇಕು. ಸ್‌ಪರ್‌ಧೆಯಲ್‌ಲಿದ್‌ದ ಒಂಭತ್‌ತು ಜನ ಹೆಣ್‌ಣು ಮಕ್‌ಕಳು ತಾವು ರಂಗೋಲಿ ಬಿಡಿಸುತ್‌ತಾ ಇದ್‌ದು ಉಳಿದವರು ಏನು ರಂಗೋಲಿ ಬಿಡಿಸುತ್‌ತಿದ್‌ದಾರೆ ಎಂದು ನೋಡುತ್‌ತಿದ್‌ದರು. ನಾನು ರಂಗೋಲಿ ಬಿಡಿಸುತ್‌ತಿದ್‌ದುದು ಅವರಿಗೆ ಏನೂ ಅರ್‌ಥವಾಗಿರಲಿಕ್‌ಕಿಲ್‌ಲ ಎಂದು ನನಗೆ ಅನ್‌ನಿಸುತ್‌ತಿತ್‌ತು. ಕಾರಿಡಾರಿನಲ್‌ಲಿ ನಿಂತು ಕಿಟಕಿಯ ಮೂಲಕ ಕುತೂಹಲದಿಂದ ನೋಡಿತ್‌ತಿದ್‌ದವರಿಗೂ ಹಾಗೇ ಅನ್‌ನಿಸಿರಬಹುದು. ಎಲ್‌ಲ ಒಂಭತ್‌ತು ಹೆಣ್‌ಣು ಮಕ್‌ಕಳೂ ರಂಗೋಲಿ ಬಿಡಿಸುತ್‌ತಿದ್‌ದಾರೆ; ಈ ಹುಡುಗ ಇದೇನು ಮಾಡುತ್‌ತಿದ್‌ದಾನೆ ಎಂದು ಅನ್‌ನಿಸಿರಬೇಕು ಅವರಿಗೆ. ಬಳಿಕ ಕಪ್‌ಪು ಬಣ್‌ಣದ ರಂಗೋಲಿ ಪುಡಿಯನ್‌ನು ಉದುರಿಸುತ್‌ತಾ ಮೂರು ತೆಂಗಿನಮರಗಳು ಅತ್‌ತಿತ್‌ತ ಬಾಗಿರುವಂತೆ ನೆರಳುನೆರಳಾಗಿ ಕಾಣುವಂತೆ ಮೂಡಿಸಿದೆ. ಪ್‌ರಖರ ಬೆಳಕು ಹಿಂದಿದ್‌ದಾಗ ಕಾಣುವ ನೆರಳುಚಿತ್‌ರದಂತೆ ಆ ತೆಂಗಿನಮರಗಳು ಕಾಣತೊಡಗಿದವು. (Like silhouette). ಆನಂತರ ಊದಾಬಣ್‌ಣದ ಜಾಗದಲ್‌ಲಿ ಕೇಸರಿ ಬಣ್‌ಣದ ರಂಗೊಲಿ ಪುಡಿ ಉದುರಿಸುತ್‌ತಾ ಅಲ್‌ಲಲ್‌ಲಿ ನೀರಿನ ಅಲೆಗಳನ್‌ನು ಮೂಡಿಸಿದೆ. ಕರಿಯ ಬಣ್‌ಣದ ರಂಗೋಲಿ ಪುಡಿಯನ್‌ನು ಉದುರಿಸುತ್‌ತಾ ಹಾಯಿದೋಣಿಯೊಂದನ್‌ನು ಚಿತ್‌ರಿಸಿದೆ. ಅದೇ ಕರಿಯ ಬಣ್‌ಣದ ರಂಗೋಲಿ ಪುಡಿ ಬಳಸಿ ಅಲ್‌ಲಿ ಇಬ್‌ಬರು ಮೀನುಗಾರರ ನೆರಳಿನ ಚಿತ್‌ರವನ್‌ನೂ ಮೂಡಿಸಿದೆ. ನನ್‌ನ ರಂಗೋಲಿ ಈ ಹಂತಕ್‌ಕೆ ಬರುತ್‌ತಿದ್‌ದಂತೆ ಇದನ್‌ನು ನೋಡುತ್‌ತಿದ ಎಲ್‌ಲರಿಗೂ ನಾನು ಬರೆಯುತ್‌ತಿರುವ ರಂಗೋಲಿಯ ಬಗ್‌ಗೆ ತಿಳಿಯಿತು. ದಿಗಂತದಿಂದ ತುಸು ಮೇಲೆ ಮುಳುಗುತ್‌ತಿರುವ ಸೂರ್‌ಯನನ್‌ನು ಕೇಸರಿ ಬೆರೆತ ಹಳದಿ ಬಣ್‌ಣದಿಂದ ಬಿಡಿಸಿದೆ. ಕರಿ, ಹಳದಿ ಹಾಗೂ ಕೇಸರಿ ಬಣ್‌ಣಗಳನ್‌ನು ಅವಶ್‌ಯಕತೆಗನುಗುಣವಾಗಿ ವಿವಿಧ ಪ್‌ರಮಾಣಗಳಲ್‌ಲಿ ಬಳಸಿ ಆಕಾಶವನ್‌ನು ಮುಳುಗುತ್‌ತಿರುವ ಸೂರ್‌ಯನಿಂದ ದೂರವಾದಂತೆ ಹಂತಹಂತವಾಗಿ ಬದಲಾಗುತ್‌ತಿರುವಂತೆ ರಂಗೋಲಿ ಪುಡಿ ಉದುರಿಸುತ್‌ತಾ, ಸರಿಪಡಿಸುತ್‌ತಾ ಸಮುದ್‌ರ ತೀರದ ಪ್‌ರಕೃತಿಯ ನೆರಳುಚಿತ್‌ರವನ್‌ನು (silhouette) ಮುಗಿಸುವ ಹೊತ್‌ತಿಗೆ ನನ್‌ನ ಒಂದು ಘಂಟೆಯ ಸಮಯ ಮುಗಿಯುತ್‌ತಾ ಬಂದಿತ್‌ತು.

ಸ್‌ಪರ್‌ಧೆಯಲ್‌ಲಿದ್‌ದ ಒಂಭತ್‌ತು ಜನ ಹೆಣ್‌ಣುಮಕ್‌ಕಳಲ್‌ಲಿ ಎಂಟು ಜನ ಹೆಣ್‌ಣು ಮಕ್‌ಕಳು ಸಾಂಪ್‌ರದಾಯಿಕ ರಂಗೋಲಿಗಳನ್‌ನು ಬಹಳ ಚೆನ್‌ನಾಗಿ ಬಿಡಿಸಿದ್‌ದರು. ರಂಗೋಲಿಯ ಒಳಭಾಗಗಳನ್‌ನು ಬಣ್‌ಣ ಬಣ್‌ಣದ ರಂಗೋಲಿ ಪುಡಿಗಳಿಂದ ತುಂಬಿದ್‌ದರು. ರಂಗೋಲಿಯ ಗೆರೆಗಳಿಗೆ ಬಿಳಿಯ ಪುಡಿಯನ್‌ನು ನಾಜೂಕಾಗಿ ಉದುರಿಸಿದ್‌ದರು. ಒಬ್‌ಬ ಹುಡುಗಿ ಗಂಡು ನವಿಲಿನ ಚಿತ್‌ರವನ್‌ನು ಚೆನ್‌ನಾಗಿ ಬಿಡಿಸಿದ್‌ದಳು. ಮರದ ಕೊಂಬೆಯೊಂದರ ಮೇಲೆ ಆ ನವಿಲು ಕುಳಿತಂತೆ ಇತ್‌ತು. ಬಣ್‌ಣಗಳ ಆಯ್‌ಕೆ ಬಹಳ ಸಹಜವಾಗಿತ್‌ತು.

ರಂಗೋಲಿಗಳನ್‌ನು ತಜ್‌ಞರು ನೋಡಿ ಶ್‌ರೇಯಾಂಕಗಳನ್‌ನು ಕೊಡುತ್‌ತಾರೆಂಬುದಾಗಿ ಸ್‌ಪರ್‌ಧೆಯ ಕೊನೆಯಲ್‌ಲಿ ನಮಗೆ ತಿಳಿಸಿದರು. ವಾರ್‌ಷಿಕೋತ್‌ಸವದ ದಿನ ಬಹುಮಾನ ವಿತರಣೆ ಸಂದರ್‌ಭದಲ್‌ಲಿ ವೇದಿಕೆಗೆ ಕರ್‌ನಾಟಕದ ಸುಪ್‌ರಸಿದ್‌ದ ’ಕಲಾಮಂದಿರ’ದ ಸ್‌ಥಾಪಕರೂ ಗುರುಗಳೂ ಆದ ದಿ.ಆ.ನ್‌.ಸುಬ್‌ಬರಾಯರನ್‌ನು ಬರಮಾಡಿಕೊಂಡ ಪ್‌ರಾಂಶುಪಾಲರು ಹೇಳಿದರು, "ರಂಗೋಲಿ ಸ್‌ಪರ್‌ಧೆಯ ರಂಗೋಲಿಗಳನ್‌ನು ನೋಡಿ ಶ್‌ರೇಯಾಂಕಗಳನ್‌ನು ನಿರ್‌ಣಯಿಸಿದ ತೀರ್‌ಪುಗಾರರು ನಮ್‌ಮ ಶಾಲೆಯ ಪಕ್‌ಕದಲ್‌ಲೇ ಇರುವ ಚಿತ್‌ರಕಲಾ ಶಾಲೆ ’ಕಲಾಮಂದಿರ’ದ ಮಾನ್‌ಯ ಸುಬ್‌ಬರಾಯರು. ಈ ಕುರಿತು ಮಾನ್‌ಯ ಸುಬ್‌ಬರಾಯರು ನಿಮಗೆ ತಿಳಿಸುತ್‌ತಾರೆ."

"ಎಲ್‌ಲ ಸ್‌ಪರ್‌ಧಿಗಳೂ ತುಂಬ ಶ್‌ರಧೆಯಿಂದ ರಂಗೋಲಿ ಬಿಡಿಸಿದ್‌ದಾರೆ. ನಮ್‌ಮಲ್‌ಲಿ ಹೆಣ್‌ಣು ಮಕ್‌ಕಳು ರಂಗೋಲಿ ಬಿಡಿಸುವ ಕಲೆಯಲ್‌ಲಿ ಪರಿಣತಿಯನ್‌ನು ಹೊಂದಿದ್‌ದಾರೆ. ಎಂಟು ಜನ ಹುಡುಗಿಯರು ಸಾಂಪ್‌ರದಾಯಿಕ ರಂಗೋಲಿಗಳನ್‌ನು ಚೆನ್‌ನಾಗಿ ಬಿಡಿಸಿದ್‌ದಾರೆ. ಒಬ್‌ಬ ಹುಡುಗಿ ಇವರಿಗಿಂತ ತುಸು ಭಿನ್‌ನವಾಗಿ ನವಿಲಿನ ಚಿತ್‌ರವನ್‌ನು ಬಿಡಿಸಿದ್‌ದಾಳೆ. ಈ ನವಿಲಿನ ರಂಗೋಲಿ ಬಹಳ ಚೆನ್‌ನಾಗಿ ಬಂದಿದೆ. ಇದಕ್‌ಕೆ ಎರಡನೇ ಸ್‌ಥಾನವನ್‌ನು ಕೊಟ್‌ಟಿದ್‌ದೇನೆ. ಆದರೆ ಈ ಸ್‌ಪರ್‌ಧೆಯಲ್‌ಲಿ ಬಹಳ ಮೆಚ್‌ಚಬಹುದಾದ ಒಂದು ರಂಗೋಲಿ ಎಂದರೆ ಸಮುದ್‌ರ ತೀರದಲ್‌ಲಿ ಸೂರ್‌ಯಾಸ್‌ತದ ನೆರಳುಚಿತ್‌ರ. ಈ ರಂಗೋಲಿ ಸಾಂಪ್‌ರದಾಯಿಕ ರಂಗೋಲಿಗಳಿಗಿಂತ ಬಹಳ ವಿಭಿನ್‌ನವಾದ ಶೈಲಿಯಲ್‌ಲಿ ಪ್‌ರಕೃತಿಚಿತ್‌ರವನ್‌ನು ಮೂಡಿಸಿರುವುದು. ಇದಕ್‌ಕೆ ಮೊದಲನೇ ಸ್‌ಥಾನವನ್‌ನು ಕೊಟ್‌ಟಿದ್‌ದೇನೆ. ಈ ಪ್‌ರಕೃತಿಚಿತ್‌ರವನ್‌ನು ಬಿಡಿಸಿದ ಹುಡುಗಿಯ ವಿಭಿನ್‌ನ ಮತ್‌ತು ವಿನೂತನ ಶೈಲಿ ನನಗೆ ಮೆಚ್‌ಚುಗೆಯಾಯಿತು." ಆಗ ಪ್‌ರಾಂಶುಪಾಲರು ತೀರ್‌ಪುಗಾರರಾಗಿ ಬಂದಿದ್‌ದ ದಿ.ಆ.ನ.ಸುಬ್‌ಬರಾಯರಿಗೆ ಅದು ಒಬ್‌ಬ ಹುಡುಗ ಬಿಡಿಸಿದ್‌ದು ಎಂದು ತಿಳಿಸಿ ನನ್‌ನ ಹೆಸರನ್‌ನು ಕೂಗಿ ನನ್‌ನನ್‌ನು ವೇದಿಕೆಗೆ ಕರೆದರು.